AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲೆಂದರಲ್ಲಿ ಕಸ ಹಾಕುವವರ ಮೇಲೆ ಬೀಳುತ್ತೆ ಕೇಸ್: ಡಿಕೆ ಶಿವಕುಮಾರ್​​ ಖಡಕ್​ ಸೂಚನೆ

ಎಲ್ಲೆಂದರಲ್ಲಿ ಕಸ ಹಾಕುವವರ ಮೇಲೆ ಬೀಳುತ್ತೆ ಕೇಸ್: ಡಿಕೆ ಶಿವಕುಮಾರ್​​ ಖಡಕ್​ ಸೂಚನೆ

ಹರೀಶ್ ಜಿ.ಆರ್​.
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 04, 2025 | 8:12 PM

Share

ಡಿಸಿಎಂ ಡಿಕೆ ಶಿವಕುಮಾರ್ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದು, ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದರು. ಟ್ರಾಫಿಕ್ ಕ್ಯಾಮೆರಾಗಳ ಮೂಲಕ ಕಸ ಹಾಕುವವರನ್ನು ಗುರುತಿಸಲಾಗುವುದು. ಗುಂಡಿ ಮುಚ್ಚುವ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಏರ್‌ಪೋರ್ಟ್ ಬಳಿ ಥೀಮ್ ಪಾರ್ಕ್ ಮುಂದುವರಿಕೆ ಬಗ್ಗೆಯೂ ಚರ್ಚಿಸಲಾಗಿದೆ ಎಂದಿದ್ದಾರೆ.

ಬೆಂಗಳೂರು, ಅಕ್ಟೋಬರ್​ 04: ಎಲ್ಲೆಂದರಲ್ಲಿ ಕಸ ಹಾಕುವವರ ಮೇಲೆ ಕೇಸ್ ಹಾಕುವಂತೆ ಸೂಚಿಸಿದ್ದೇ‌ನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ದಸರಾ ಹಬ್ಬದಲ್ಲಿ ವಿಪರೀತ ಕಸ ಬಂದಿದೆ. ಎಲ್ಲೆಲ್ಲಿ ಕಸ ಹೆಚ್ಚುತ್ತಿದೆ ಅಲ್ಲಿ ಟ್ರಾಫಿಕ್ ಪೊಲೀಸ್ ಕ್ಯಾಮರಾದಲ್ಲಿ ಮಾನಿಟರ್ ಮಾಡಲಿದ್ದೇವೆ. ಎಲ್ಲೆಂದರಲ್ಲಿ ಕಸ ಹಾಕುವವರ ಮೇಲೆ ಕೇಸ್ ಹಾಕುವಂತೆ ಸೂಚಿಸಿದ್ದೇ‌ನೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.