AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಯೋತ್ಪಾದಕರನ್ನು ಸದೆಬಡಿಯುವ ಕೇಂದ್ರದ ಸಂಕಲ್ಪದೊಂದಿಗೆ ನಾವಿದ್ದೇವೆ: ಡಿಕೆ ಶಿವಕುಮಾರ್

ಭಯೋತ್ಪಾದಕರನ್ನು ಸದೆಬಡಿಯುವ ಕೇಂದ್ರದ ಸಂಕಲ್ಪದೊಂದಿಗೆ ನಾವಿದ್ದೇವೆ: ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 25, 2025 | 11:33 AM

ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ನಡೆದಿರುವ ಹಲ್ಲೆ ಬಹಳ ಸೂಕ್ಷ್ಮವಾದ ವಿಷಯ, ಒಬ್ಬರನ್ನೊಬ್ಬರು ಟೀಕಿಸುವ ಪರಸ್ಪರ ದೋಷಾರೋಪಣೆಗಳನ್ನು ಮಾಡುವ ಸಂದರ್ಭ ಇದಲ್ಲ, ಎಲ್ಲರೂ ಬಹಳ ವಿವೇಕದಿಂದ ವರ್ತಿಸುವ ಅವಶ್ಯಕತೆ ಇದೆ, ಬೇರೆ ಯಾರಾದರೂ ಉಗ್ರರ ದಾಳಿಯ ಮೇಲೆ ಕಾಮೆಂಟ್ ಮಾಡಿದ್ದರೆ ಅದಕ್ಕೆ ಅವರು ಮಾತ್ರ ಜವಾಬ್ದಾರರರು ಎಂದು ಶಿವಕುಮಾರ್ ಹೇಳಿದರು.

ಮೈಸೂರು, ಏಪ್ರಿಲ್ 25: ಒಂದು ಜವಾಬ್ದಾರಿಯುತ ಪಕ್ಷದ ರಾಜ್ಯಾಧ್ಯಕ್ಷ ಮತ್ತು ರಾಜ್ಯದ ಉಪ ಮುಖ್ಯಮಂತ್ರಿಯೂ ಆಗಿರುವುದರಿಂದ ತಾನು ಪಹಲ್ಗಾಮ್ ಭಯೋತ್ಪಾದಕರ ದಾಳಿಯ (Pahelgam terror attack) ಬಗ್ಗೆ ಏನನ್ನೂ ಕಾಮೆಂಟ್ ಮಾಡಲ್ಲ, ಮಾತಾಡಿದರೆ ಅದನ್ನೇ ಲೀಡ್ ಮಾಡಿಕೊಂಡು ಜನ ಟೀಕೆ ಮಾಡಲಾರಂಭಿಸುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಬೇರೆ ದೇಶದ ಜನ ನಮ್ಮ ದೇಶದಲ್ಲಿನ ಶಾಂತಿ ಕದಡುವಂತೆ ಮಾಡಿದ್ದಾರೆ, ನಮ್ಮ ಜನರಿಗೆ ಶಾಂತಿ ಮತ್ತು ನೆಮ್ಮದಿಯಿಂದ ಬದುಕುವುದು ಬೇಕಿದೆ, ಉಗ್ರರನ್ನು ಸದೆಬಡಿಯುವ ಸಂಕಲ್ಪ ಕೇಂದ್ರ ಸರ್ಕಾರ ಮಾಡಿಕೊಂಡಿದೆ, ಕೇಂದ್ರದೊಂದಿಗೆ ನಾವಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಧರ್ಮ, ಜಾತಿಯ ಆಧಾರಕ್ಕಿಂತ ರಾಷ್ಟ್ರೀಯ ಏಕತೆ ಅಗತ್ಯ : ಭಯೋತ್ಪಾದಕ ದಾಳಿಯನ್ನು ಖಂಡಿಸಿದ ಸದ್ಗುರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ