AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಘ್ನ ವಿನಾಶಕನಿಗೆ ತಿಂಡಿ-ತಿನಿಸುಗಳ ನೈವೇದ್ಯ, ಶಿರಸಿ ಮಲೆನಾಡು ಭಾಗದಲ್ಲಿ ಚಕ್ಕುಲಿ ಕಂಬಳದ ಸಂಭ್ರಮ

[lazy-load-videos-and-sticky-control id=”X_sNd9Pg2lE”] ಕಾರವಾರ: ಹಬ್ಬ ಅಂದ್ರೆ ಅದೇನೋ ಸಡಗರ, ಎಲ್ಲಿಲ್ಲದ ಸಂಭ್ರಮ. ಕರಾವಳಿ ಭಾಗದಲ್ಲಿ ಹಬ್ಬದ ಗಮ್ಮತ್ತು ಒಂದು ರೀತಿಯಾದ್ರೆ, ಮಲೆನಾಡಿಗರ ಸಂಭ್ರಮದ ವಿಶೇಷತೆಯೇ ಬೇರೆ. ಇನ್ನು ಶಿರಸಿಯಲ್ಲಂತೂ ವಿಶೇಷ ತಿಂಡಿ ತಿನಿಸು ಮಾಡೋದ್ರಲ್ಲಿ ಜನರು ನಿರತರಾಗಿದ್ದು, ಕೂಡು ಕುಟುಂಬಗಳು ಒಟ್ಟಿಗೆ ಸೇರಿ ಸಂತಸ ಇಮ್ಮಡಿಯಾಗಿದೆ. ಚಕ್ಕುಲಿ.. ವಿಘ್ನ ವಿನಾಯಕನಿಗೆ ಪ್ರಿಯವಾದ ತಿಂಡಿ. ಹೀಗಾಗಿ ಮಲೆನಾಡ ಭಾಗದಲ್ಲಿ ಚಕ್ಕುಲಿ ಕಂಬಳದ ಸಂಭ್ರಮ ಜೋರಾಗಿದೆ. ಶಿರಸಿಯ ಹೆಗಡೆಕಟ್ಟೆ ಸಮೀಪದ ಕಲ್ಮನೆಯ ಪ್ರತಿಯೊಬ್ಬರು ಚಕ್ಕುಲಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 4 […]

ವಿಘ್ನ ವಿನಾಶಕನಿಗೆ ತಿಂಡಿ-ತಿನಿಸುಗಳ ನೈವೇದ್ಯ, ಶಿರಸಿ ಮಲೆನಾಡು ಭಾಗದಲ್ಲಿ ಚಕ್ಕುಲಿ ಕಂಬಳದ ಸಂಭ್ರಮ
ಆಯೇಷಾ ಬಾನು
| Edited By: |

Updated on:Aug 22, 2020 | 5:11 PM

Share

[lazy-load-videos-and-sticky-control id=”X_sNd9Pg2lE”]

ಕಾರವಾರ: ಹಬ್ಬ ಅಂದ್ರೆ ಅದೇನೋ ಸಡಗರ, ಎಲ್ಲಿಲ್ಲದ ಸಂಭ್ರಮ. ಕರಾವಳಿ ಭಾಗದಲ್ಲಿ ಹಬ್ಬದ ಗಮ್ಮತ್ತು ಒಂದು ರೀತಿಯಾದ್ರೆ, ಮಲೆನಾಡಿಗರ ಸಂಭ್ರಮದ ವಿಶೇಷತೆಯೇ ಬೇರೆ. ಇನ್ನು ಶಿರಸಿಯಲ್ಲಂತೂ ವಿಶೇಷ ತಿಂಡಿ ತಿನಿಸು ಮಾಡೋದ್ರಲ್ಲಿ ಜನರು ನಿರತರಾಗಿದ್ದು, ಕೂಡು ಕುಟುಂಬಗಳು ಒಟ್ಟಿಗೆ ಸೇರಿ ಸಂತಸ ಇಮ್ಮಡಿಯಾಗಿದೆ.

ಚಕ್ಕುಲಿ.. ವಿಘ್ನ ವಿನಾಯಕನಿಗೆ ಪ್ರಿಯವಾದ ತಿಂಡಿ. ಹೀಗಾಗಿ ಮಲೆನಾಡ ಭಾಗದಲ್ಲಿ ಚಕ್ಕುಲಿ ಕಂಬಳದ ಸಂಭ್ರಮ ಜೋರಾಗಿದೆ. ಶಿರಸಿಯ ಹೆಗಡೆಕಟ್ಟೆ ಸಮೀಪದ ಕಲ್ಮನೆಯ ಪ್ರತಿಯೊಬ್ಬರು ಚಕ್ಕುಲಿ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ 4 ದಿನಗಳಿಂದ ಕೈ ಚಕ್ಕುಲಿ ಕಂಬಳ ಶುರುವಾಗಿದೆ. ಕೈಚಕ್ಕುಲಿ ಕಂಬಳದಲ್ಲಿ ವೃತ್ತಾಕಾರವಷ್ಟೇ ಅಲ್ಲದೆ ಕೆಲವ್ರು ಅಕ್ಷರಗಳನ್ನ ಸಹ ಬರೀತಾರೆ. ಅನಾಧಿ ಕಾಲದಿಂದಲೂ ಬಂದ ಚಕ್ಕುಲಿ ಕಂಬಳ ಅಂದ್ರೆ ಇಲ್ಲಿನ ಜನರಿಗೆ ಎಲ್ಲಿಲ್ಲದ ಖುಷಿ.

ಅಂದ್ಹಾಗೇ, ಇತ್ತೀಚಿಗೆ ಎಲ್ಲರೂ ತಂತ್ರಜ್ಞಾನದ ಮೊರೆ ಹೋಗ್ತಿದ್ದಾರೆ. ಆದ್ರೆ ಕಲ್ಮನೆಯಲ್ಲಿ ಮಾತ್ರ ಪ್ರತಿವರ್ಷ ಕೈಯಲ್ಲೇ ಚಕ್ಕುಲಿ ಕಂಬಳವನ್ನ ಮಾಡ್ತಾರೆ. ರೆಡಿಮೇಡ್ ಚಕ್ಕುಲಿಗಿಂತ ಇದ್ರ ರುಚಿ ಚೆನ್ನಾಗಿರುತ್ತೆ. ಅದ್ರಲ್ಲೂ ಹಲವು ವಿಧದ ಚಕ್ಕುಲಿಗಳು ನೋಡೋಕೆ ಆಕರ್ಷಕವಾಗಿರೋದಷ್ಟೇ ಅಲ್ಲದೆ ಬಾಯಲ್ಲಿ ನೀರೂರಿಸ್ತಿವೆ.

ಒಟ್ನಲ್ಲಿ ಕೊರೊನಾದಿಂದ ಈ ಬಾರಿ ಸಾರ್ವಜನಿಕವಾಗಿ ಗಣೇಶನ ಹಬ್ಬದ ಸಂಭ್ರಮ ಕಳೆಗುಂದಿದ್ರೂ ಕೂಡ ಸಾಂಪ್ರದಾಯಿಕ ಆಚರಣೆ ಮಾತ್ರ ನಿಂತಿಲ್ಲ. ಭೋಜನಾಂಪ್ರಿಯ ವಿನಾಯಕನಿಗೆ ವಿಭಿನ್ನ ತಿಂಡಿ ತಿನಿಸುಗಳ ತಯಾರಿಯೊಂದಿಗೆ ಚಕ್ಕುಲಿ ಕಂಬಳ ಭರ್ಜರಿಯಾಗಿ ಸಾಗಿದ್ದು, ಮನೆಗಳಲ್ಲೂ ಗಣೇಶನ ಹಬ್ಬ ರಂಗೇರಿದೆ.

Published On - 3:07 pm, Sat, 22 August 20

Follow Us
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ