AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ನೇರವಾಗಿ ಕಾರಣ ತಿಳಿಸಿದ ಚಿಕ್ಕಣ್ಣ

‘ಮದುವೆಗೆ ದರ್ಶನ್ ಅವರನ್ನು ಕರೆಯೋಕೆ ಆಗಲ್ಲ’: ನೇರವಾಗಿ ಕಾರಣ ತಿಳಿಸಿದ ಚಿಕ್ಕಣ್ಣ

ಮದನ್​ ಕುಮಾರ್​
|

Updated on: Aug 25, 2026 | 6:33 PM

Share

ಪಾವನಾ ಜೊತೆ ಚಿಕ್ಕಣ್ಣ ಅವರು ಹಸೆಮಣೆ ಏರಲಿದ್ದಾರೆ. ಚಿತ್ರರಂಗದ ಬಹುತೇಕರಿಗೆ ಈಗಾಗಲೇ ಅವರು ಆಮಂತ್ರಣ ಪತ್ರಿಕೆ ನೀಡಿದ್ದಾರೆ. ನಟ ದರ್ಶನ್ ಅವರ ಆಪ್ತ ಬಳಗದಲ್ಲಿ ಚಿಕ್ಕಣ್ಣ ಗುರುತಿಸಿಕೊಂಡಿದ್ದರು. ಆದರೆ ಈಗ ದರ್ಶನ್ ಅವರಿಗೆ ಚಿಕ್ಕಣ್ಣ ಮದುವೆ ಆಹ್ವಾನ ನೀಡುತ್ತಿಲ್ಲ. ಆ ಬಗ್ಗೆ ಅವರು ಮಾತನಾಡಿದ್ದಾರೆ.

ಖ್ಯಾತ ಹಾಸ್ಯ ನಟ ಚಿಕ್ಕಣ್ಣ ಅವರು ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 29 ಮತ್ತು 30ರಂದು ಅವರ ಮದುವೆ ನಡೆಯಲಿದೆ. ಪಾವನಾ ಜೊತೆ ಚಿಕ್ಕಣ್ಣ ಅವರು ಹಸೆಮಣೆ ಏರಲಿದ್ದಾರೆ. ಚಿತ್ರರಂಗದ ಬಹುತೇಕರಿಗೆ ಅವರು ಈಗಾಗಲೇ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ನಟ ದರ್ಶನ್ (Darshan) ಅವರ ಆಪ್ತ ಬಳಗದಲ್ಲಿ ಚಿಕ್ಕಣ್ಣ ಗುರುತಿಸಿಕೊಂಡಿದ್ದರು. ಆದರೆ ಈಗ ದರ್ಶನ್​ಗೆ ಚಿಕ್ಕಣ್ಣ ಅವರು ಮದುವೆಯ ಆಹ್ವಾನ ನೀಡುತ್ತಿಲ್ಲ. ಆ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ‘ದರ್ಶನ್ ಅವರ ಪ್ರಕರಣದಲ್ಲಿ ನಾನು ಕೂಡ ಸಾಕ್ಷಿ ಎಂಬುದು ಎಲ್ಲರಿಗೂ ಗೊತ್ತು. ಹಾಗಾಗಿ ನಾನು ಅವರನ್ನು ಮದುವೆಗೆ ಕರೆಯೋಕೆ ಆಗಲ್ಲ. ಒಂದು ವೇಳೆ ಅವರು ಜೈಲಿನಿಂದ ಹೊರಗೆ ಇದ್ದರೂ ಕೂಡ ಮದುವೆಗೆ ಬರಲು ಆಗುತ್ತಿರಲಿಲ್ಲ. ಯಾಕೆಂದರೆ, ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿಕೊಂಡೇ ಭೇಟಿ ಮಾಡಬೇಕು. ನಾನೊಬ್ಬ ಸಾಕ್ಷಿ ಆಗಿರುವುದರಿಂದ ಅವರ ಬಗ್ಗೆ ಇಷ್ಟೇ ಮಾತಾಡೋಕೆ ಆಗೋದು’ ಎಂದು ಚಿಕ್ಕಣ್ಣ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us