Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಲಿಕಾಪ್ಟರ್​ನಲ್ಲಿ ಓಡಾಡಲು ಮಜಾವಾದಿ ಸಿದ್ದರಾಮಯ್ಯ ₹ 19 ಕೋಟಿ ಖರ್ಚು ಮಾಡಿದ್ದಾರೆ: ಅರ್ ಅಶೋಕ

ಹೆಲಿಕಾಪ್ಟರ್​ನಲ್ಲಿ ಓಡಾಡಲು ಮಜಾವಾದಿ ಸಿದ್ದರಾಮಯ್ಯ ₹ 19 ಕೋಟಿ ಖರ್ಚು ಮಾಡಿದ್ದಾರೆ: ಅರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 20, 2025 | 2:03 PM

ಸಾರ್ವಜನಿಕರಿಗೆ ಸೇರಬೇಕಿರುವ ಹಣವನ್ನು ಹೇಗೆ ಸ್ವಂತಕ್ಕಾಗಿ ಬಳಸಬೇಕೆಂದು ತಿಳಿಯಲು ಜನ ಕಾಂಗ್ರೆಸ್ ನಾಯಕರ ಬಳಿ ಹೋಗಬೇಕು, ಈ ವಿಷಯದಲ್ಲಿ ಅವರು ಒಂದು ಯೂನಿವರ್ಸಿಟಿಯನ್ನೇ ನಡೆಸುತ್ತಿದ್ದಾರೆ, ಪಕ್ಷದ ಕಾರ್ಯಕರ್ತರು ಮಜಾ ಮಾಡಲೆಂದು ಸಿದ್ದರಾಮಯ್ಯ ₹60 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಅಶೋಕ ಹೇಳಿದರು.

ಬೆಂಗಳೂರು, ಮಾರ್ಚ್ 20: ಜನ ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ದುಂದುವೆಚ್ಚದಲ್ಲಿ ಉಡಾಯಿಸಿ ಮಜಾ ಮಾಡುವ ಮಜಾವಾದಿ ಎಂದು ವಿರೋಧಪಕ್ಷದ ನಾಯಕ ಅರ್ ಅಶೋಕ ಹೇಳಿದರು. ಅವರ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರು ಧರಿಸುವ ಬಟ್ಟೆ ಮತ್ತು ಶೂಗಳ ಮೇಲೆ ಟೀಕೆ ಮಾಡುತ್ತಾರೆ, ಆದರೆ ಸಿದ್ದರಾಮಯ್ಯ ಹೆಲಿಕಾಪ್ಟರ್​ನಲ್ಲಿ ಹಾರಾಡುತ್ತಾ ಹಣವನ್ನು ವ್ಯಯ ಮಾಡುತ್ತಿದ್ದಾರೆ, 19 ಕೋಟಿ ರೂ. ಹಣವನ್ನು ಅವರು ಕೇವಲ ಚಾಪರ್​ಗಾಗಿ ಖರ್ಚು ಮಾಡಿದ್ದಾರೆ ಎಂದು ಅಶೋಕ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget Session: ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಅನೇಕ ವರದಿಗಳಿದ್ದರೂ ಸರ್ಕಾರ ನಂಬುತ್ತಿಲ್ಲ: ಅರ್ ಅಶೋಕ