ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ:‘ಕೈ’ ಮನೆಯೊಳಗೆ ಷಡ್ಯಂತ್ರದ ಮಾತಿನ ಸದ್ದು:ರಾಜಣ್ಣ ಸ್ಫೋಟಕ ಹೇಳಿಕೆ

Updated on: Sep 15, 2026 | 9:28 PM

ಕರ್ನಾಟಕ ಕಾಂಗ್ರೆಸ್​​ ಮನೆಯೊಳಗೆ ಷಡ್ಯಂತ್ರ, ಪ್ರತಿತಂತ್ರದ ಮಾತುಗಳು ಅಲ್ಲಲ್ಲಿ ಕೇಳಿ ಬರ್ತಿದೆ. ಇಡಿ ದಾಳಿ ಪ್ರಕರಣದಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಅಂತೂ ನಮ್ಮವರೇ ದೂರು ಕೊಟ್ಟಿರಬಹುದು ಅಂತಾ ಅನುಮಾನವ್ಯಕ್ತಪಡಿಸಿದ್ರು. ಸಿಎಂ ಡಿಕೆಗೂ ಹೇಳಿದ್ದೀನಿ ಅಂದಿದ್ರು. ಆದ್ರೆ ಇದೀಗ ಮಾಜಿ ಸಚಿವ ಕೆ.ಎನ್.ರಾಜಣ್ಣ, ಸತೀಶ್​ ಜಾರಕಿಹೊಳಿ ಪ್ರಕರಣ ಉಲ್ಲೇಖಿಸ್ತಾನೆ, ಮುಡಾ ಕೇಸ್​ನಲ್ಲೂ ದೂರು ಕೊಟ್ಟಿರೋದು ಕಾಂಗ್ರೆಸ್​​ನವರೇ ಅಂತಾ ಹೊಸ ಬಾಂಬ್​ ಸಿಡಿಸಿರೋದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

ಬೆಂಗಳೂರು, (ಸೆಪ್ಟೆಂಬರ್ 15): ಕರ್ನಾಟಕ ಕಾಂಗ್ರೆಸ್​​ ಮನೆಯೊಳಗೆ ಷಡ್ಯಂತ್ರ, ಪ್ರತಿತಂತ್ರದ ಮಾತುಗಳು ಅಲ್ಲಲ್ಲಿ ಕೇಳಿ ಬರ್ತಿದೆ. ಇಡಿ ದಾಳಿ ಪ್ರಕರಣದಲ್ಲಿ ಸಚಿವ ಸತೀಶ್​ ಜಾರಕಿಹೊಳಿ ಅಂತೂ ನಮ್ಮವರೇ ದೂರು ಕೊಟ್ಟಿರಬಹುದು ಅಂತಾ ಅನುಮಾನವ್ಯಕ್ತಪಡಿಸಿದ್ರು. ಸಿಎಂ ಡಿಕೆಗೂ ಹೇಳಿದ್ದೀನಿ ಅಂದಿದ್ರು. ಆದ್ರೆ ಇದೀಗ ಮಾಜಿ ಸಚಿವ ಕೆ.ಎನ್.ರಾಜಣ್ಣ, ಸತೀಶ್​ ಜಾರಕಿಹೊಳಿ ಪ್ರಕರಣ ಉಲ್ಲೇಖಿಸ್ತಾನೆ, ಮುಡಾ ಕೇಸ್​ನಲ್ಲೂ ದೂರು ಕೊಟ್ಟಿರೋದು ಕಾಂಗ್ರೆಸ್​​ನವರೇ ಅಂತಾ ಹೊಸ ಬಾಂಬ್​ ಸಿಡಿಸಿರೋದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

ವಿಷ್ಯ ಏನು ಅಂದ್ರೆ, ಸಚಿವ ಸತೀಶ್ ಜಾರಕಿಹೊಳಿನೂ ಯಾರು ದೂರು ಕೊಟ್ರೂ ಅಂತಾ ಹೆಸರು ಸಮೇತ ರಿವೀಲ್ ಮಾಡೋಕೆ ತಯಾರಿಲ್ಲ. ಮತ್ತೊಂದ್ಕಡೆ ಮುಡಾ ಕೇಸ್​ನಲ್ಲೂ ಕಾಂಗ್ರೆಸ್​​ನವರೇ ದೂರು ಕೊಟ್ಟಿರೋದು ಅಂತಿರೋ ಮಾಜಿ ಸಚಿವ ಕೆ.ಎನ್​.ರಾಜಣ್ಣನೂ ಹೆಸರು ರಿವೀಲ್ ಮಾಡ್ತಿಲ್ಲ, ಆದ್ರೆ ಯಾರೋ ಬಲವಾದವರು ಇದ್ದಾರೆ ಅಂತಿದ್ದಾರೆ.

Published on: Sep 15, 2026 09:28 PM
Loading...
Unable to load recommendations.
Follow Us