ಮೈಸೂರು ಜನಾಂದೋಲನದಲ್ಲಿ ಮರುಕಳಿಸಿದ ಸಿದ್ದರಾಮೋತ್ಸವದ ಪ್ರಸಂಗ, ವಿಡಿಯೋ ಇಲ್ಲಿದೆ ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Aug 09, 2024 | 3:19 PM

ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯನವರ ಹೆಸರು ಹೇಳುತ್ತಿದ್ದಂತೆಯೇ ಹೇಗೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತೋ ಅದೇ ರೀತಿ ಮೈಸೂರು ಜನಾಂದೋಲದಲ್ಲೂ ಮರುಕಳಿಸಿದೆ. ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯನವರ ಹೆಸರು ಹೇಳುತ್ತಿದ್ದಂತೆಯೇ ಜನರು ಕೂಗಾಟ, ಚೀರಾಟ ಮುಗಿಲು ಮುಟ್ಟಿದೆ.

ಮೈಸೂರು, (ಆಗಸ್ಟ್ 09): ಜೆಡಿಎಸ್​ ಮತ್ತು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೈಸೂರಿಗೆ ಪಾದಯಾತ್ರೆ ನಡೆಸಿದ್ದರೆ, ಮತ್ತೊಂದೆಡೆ ದೋಸ್ತಿಗಳ ವಿರುದ್ಧ ಕಾಂಗ್ರೆಸ್​ ಜನಾಂದೋಲ ಕಾರ್ಯಕ್ರಮ ನಡೆಸಿದೆ. ಇಂದು(ಆಗಸ್ಟ್ 09) ಮೈಸೂರಿನಲ್ಲಿ ನಡೆದ ಜನಾಂದೋಲ ಕಾರ್ಯಕ್ರದಲ್ಲಿ ಸಿದ್ದರಾಮೋತ್ಸವದ ಪ್ರಸಂಗ ಮರುಕಳಿಸಿದೆ. ಹೌದು..ದಾವಣಗೆರೆಯಲ್ಲಿ ನಡೆದಿದ್ದ ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯನವರ ಹೆಸರು ಹೇಳುತ್ತಿದ್ದಂತೆಯೇ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಅದರಂತೆ ಇದೀಗ ಮೈಸೂರು ಜನಾಂದೋನಲ ಕಾರ್ಯಕ್ರಮದಲ್ಲೂ ನಡೆದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಹೆಸರು ಹೇಳುತ್ತಿದ್ದಂತೆಯೇ ಕಾರ್ಯಕ್ರಮದಲ್ಲಿ ನೆರೆದಿದ್ದವರ ಶಿಳ್ಳೆ, ಕೇಕೆ ಮುಗಿಲು ಮುಟ್ಟಿದೆ. ಆ ಒಂದು ಪ್ರಸಂಗ ಹೇಗಿತ್ತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on