‘ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು’: ಹಂಸಲೇಖ ಬಗ್ಗೆ ಡಾಲಿ ಧನಂಜಯ ಮಾತು

‘ನಾದಬ್ರಹ್ಮ’ ಹಂಸಲೇಖ ಅವರ ಬಗ್ಗೆ ಡಾಲಿ ಧನಂಜಯ ಅವರು ಮಾತನಾಡಿದ್ದಾರೆ. ‘ಸಿಂಹ ಆಡಿಯೋ’ ಲೋಗೋ ಲಾಂಚ್​ ವೇದಿಕೆಯಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು’: ಹಂಸಲೇಖ ಬಗ್ಗೆ ಡಾಲಿ ಧನಂಜಯ ಮಾತು
| Updated By: ಮದನ್​ ಕುಮಾರ್​

Updated on:Apr 07, 2022 | 9:55 AM

ನಟರಾದ ಡಾಲಿ ಧನಂಜಯ (Daali Dhananjay) ಮತ್ತು ವಸಿಷ್ಠ ಸಿಂಹ ಅವರ ನಡುವೆ ಉತ್ತಮ ಗೆಳೆತನ ಇದೆ. ಹಲವು ವರ್ಷಗಳಿಂದ ಅವರು ಸ್ನೇಹಿತರು. ‘ಟಗರು’ ಸಿನಿಮಾದಲ್ಲಿ ಅವರಿಬ್ಬರು ಮಾಡಿದ ಡಾಲಿ ಮತ್ತು ಚಿಟ್ಟೆ ಎಂಬ ಪಾತ್ರಗಳು ಸಖತ್​ ಫೇಮಸ್​ ಆದವು. ಈಗ ವಸಿಷ್ಠ ಸಿಂಹ (Vasishta N Simha) ಅವರು ಹೊಸ ಆಡಿಯೋ ಕಂಪನಿ ಶುರು ಮಾಡಿದ್ದಾರೆ. ಇತ್ತೀಚೆಗೆ ಅದರ ಲೋಗೋ ಲಾಂಚ್​ ಮಾಡಲಾಯಿತು. ಗೆಳೆಯನ ಹೊಸ ಕಾರ್ಯಕ್ಕೆ ಶುಭ ಹಾರೈಸಲು ಧನಂಜಯ ಬಂದಿದ್ದರು. ಆ ಕಾರ್ಯಕ್ರಮಕ್ಕೆ ‘ನಾದ ಬ್ರಹ್ಮ’ ಹಂಸಲೇಖ (Nada Brahma Hamsalekha) ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಹಂಸಲೇಖ ಬಗ್ಗೆ ಧನಂಜಯ ಅವರು ಮನಸಾರೆ ಮಾತನಾಡಿದರು. ‘ನಾನು ಕೂಡ ನಿಮ್ಮ ಶಿಷ್ಯ. ನಿಮ್ಮ ಹಾಡುಗಳನ್ನು ಕೇಳಿ, ಅದರಲ್ಲಿನ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಮನುಷ್ಯರಾಗುವ ಸಾಧ್ಯತೆ ಇದೆ. ಆ ರೀತಿ ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು’ ಎಂದು ಹೇಳಿದರು ಡಾಲಿ ಧನಂಜಯ.

ಇದನ್ನೂ ಓದಿ:

ಡಾಲಿ ಧನಂಜಯ ಜತೆ ನಟಿಸಿದ್ದ ಸಂಗೀತಾ ಭಟ್ ಚಿತ್ರರಂಗಕ್ಕೆ ಕಂಬ್ಯಾಕ್

ಅಮೃತಾ ಅಯ್ಯಂಗಾರ್​ಗೆ ಡಾಲಿ ಧನಂಜಯ ಪ್ರಪೋಸ್​; ಖುಷಿಯಿಂದ ಕಮೆಂಟ್​​ ಮಾಡಿದ ಫ್ಯಾನ್ಸ್​

Published On - 9:53 am, Thu, 7 April 22

Follow us