ನಟ ದರ್ಶನ್ (Darshan) ಅವರ ಜೊತೆ ಸ್ಯಾಂಡಲ್ವುಡ್ನ ಅನೇಕ ನಿರ್ಮಾಪಕರು ಒಡನಾಟ ಹೊಂದಿದ್ದಾರೆ. ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು ಕೂಡ ದರ್ಶನ್ ಜೊತೆ ಸಿನಿಮಾ ಮಾಡಿದ್ದರು. ಈಗ ದರ್ಶನ್ ಅವರು ಕೊಲೆ ಆರೋಪದಲ್ಲಿ ಜೈಲಿಗೆ ಹೋಗುವಂತಾಗಿದೆ. ಈ ಹಿನ್ನೆಲೆಯಲ್ಲಿ ಸಾ.ರಾ. ಗೋವಿಂದು (Sa Ra Govindu) ಅವರು ಮಾತನಾಡಿದ್ದಾರೆ. ‘ಅಭಿಮಾನಿಗಳನ್ನು ಹತೋಟಿಯಲ್ಲಿ ಇಡೋಕೆ ದರ್ಶನ್ಗೆ ಆಗಲಿಲ್ಲ. ರೇಣುಕಾ ಸ್ವಾಮಿ ಮಾಡಿದ ಕೃತ್ಯವನ್ನು ನಾವು ಯಾರೂ ಸರಿ ಅಂತ ಹೇಳುತ್ತಿಲ್ಲ. ಡಾ. ರಾಜ್ಕುಮಾರ್ ಅವರಿಗೆ ಕೋಟ್ಯಂತರ ಫ್ಯಾನ್ಸ್ ಇದ್ದರು. ಆದರೆ ಒಬ್ಬರೂ ಸಹ ಈ ರೀತಿ ಮಾಡಿಲ್ಲ. ಅಶ್ವಿನಿ ಪುನೀತ್ ರಾಜ್ಕುಮಾರ್ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದಾಗ ತಮ್ಮ ಅಭಿಮಾನಿಗಳಿಗೆ ದರ್ಶನ್ ಎಚ್ಚರಿಕೆ ನೀಡಬಹುದಿತ್ತು. ಅಭಿಮಾನಿಗಳು (Darshan Fans) ಮಾಡುವ ತಪ್ಪು ದರ್ಶನ್ ತಲೆಗೆ ಬರುತ್ತದೆ. 80 ವರ್ಷದಿಂದ ಚಿತ್ರರಂಗ ಇದೆ. ರಾಜ್ಕುಮಾರ್, ವಿಷ್ಣುವರ್ಧನ್ ನಿಧನರಾದ ನಂತರವೂ ಚಿತ್ರರಂಗ ಉಳಿದಿದೆ. ದರ್ಶನ್ ಇಲ್ಲದಿದ್ದರೂ ಚಿತ್ರರಂಗ ಇರುತ್ತದೆ’ ಎಂದು ಸಾರಾ ಗೋವಿಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.