ಅಭಿಮಾನಿಗಳಿಗೆ ಕೈ ಸನ್ನೆ ಮಾಡಿದ ದರ್ಶನ್​; ಬಳ್ಳಾರಿ ಜೈಲಿನಿಂದ ದಾಸ ಕೊಟ್ಟ ಸಿಗ್ನಲ್ ಏನು?

| Updated By: ಮದನ್​ ಕುಮಾರ್​

Updated on: Oct 10, 2024 | 3:06 PM

ದರ್ಶನ್​ ಅವರಿಗೆ ಜಾಮೀನು ಕೊಡಿಸಲು ಅವರ ಪರ ವಕೀಲರು ವಾದ ಮಾಡುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್​ ಆದಷ್ಟು ಬೇಗ ಹೊರಗೆ ಬರಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ. ಜೈಲಿನ ಬಳಿ ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ದರ್ಶನ್​ ಕೈ ಸನ್ನೆ ಮಾಡಿದ್ದಾರೆ. ಬೆನ್ನು ನೋವಿನ ನಡುವೆಯೂ ನಗು ನಗುತ್ತಾ ಅಭಿಮಾನಿಗಳಿಗೆ ಅವರು ಸಿಗ್ನಲ್​ ಕೊಟ್ಟಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಭೇಟಿ ಮಾಡಲು ಸಂಗೀತ ನಿರ್ದೇಶಕ ಹರಿಕೃಷ್ಣ ಅವರು ಬಳ್ಳಾರಿ ಜೈಲಿಗೆ ತೆರಳಿದ್ದಾರೆ. ಈ ವೇಳೆ ದರ್ಶನ್ ಅವರನ್ನು ನೋಡಲು ಜೈಲಿನ ಹೊರಗೆ ಅಭಿಮಾನಿಗಳು ನೆರೆದಿದ್ದರು. ಸೆಲ್​ನಿಂದ ದರ್ಶನ್​ ಹೊರಗೆ ಬರುತ್ತಿದ್ದಂತೆಯೇ ಫ್ಯಾನ್ಸ್​ ಜೈಕಾರ ಹಾಕಲು ಶುರು ಮಾಡಿದರು. ಈ ವೇಳೆ ದರ್ಶನ್​ ಕೈ ಸನ್ನೆ ಮಾಡಿದರು. ‘ಸದ್ಯದಲ್ಲೇ ನಾನು ನಿಮಗಾಗಿ ಖಂಡಿತಾ ಹೊರಗೆ ಬರುತ್ತೇನೆ’ ಎಂಬ ರೀತಿಯಲ್ಲಿತ್ತು ಅವರ ಸಿಗ್ನಲ್. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on