ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​

|

Updated on: Sep 09, 2024 | 6:25 PM

ಚಾರ್ಜ್​ಶೀಟ್​ ಸಲ್ಲಿಕೆ ಬಳಿಕ ನಟ ದರ್ಶನ್​ಗೆ ಢವಢವ ಹೆಚ್ಚಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ವಿರುದ್ಧ ಅನೇಕ ಸಾಕ್ಷಿಗಳು ಸಂಗ್ರಹ ಆಗಿವೆ. ಪವಿತ್ರಾ ಗೌಡ ಮುಂತಾದ ಆರೋಪಿಗಳು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ದರ್ಶನ್​ ಪರ ವಕೀಲರು ಮುಂದಿನ ಕಾನೂನು ಪ್ರಕ್ರಿಯೆ ಬಗ್ಗೆ ಮಾತನಾಡಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಎ2 ಆರೋಪಿ ಆಗಿರುವ ದರ್ಶನ್​ ಪರ ವಕೀಲರಾದ ಶಿವಕುಮಾರ್​ ಅವರು ಮಾತಾಡಿದ್ದಾರೆ. ‘ನಾವು ಇನ್ನೂ ಚಾರ್ಜ್​ಶೀಟ್​ ನೋಡಿಲ್ಲ. ವಿಚಾರಣೆ ಸೆ.12ಕ್ಕೆ ಮುಂದೂಡಿಕೆ ಆಗಿದೆ. ಸಿಡಿ, ಪೆನ್​ಡ್ರೈವ್ ನೋಡಬೇಕು. ಪೂರ್ತಿ ಚಾರ್ಜ್​ಶೀಟ್​ ಎಗ್ಸಿಬಿಟ್​ ಕೊಟ್ಟ ನಂತರ ಜಾಮೀನು ಅರ್ಜಿ ಸಲ್ಲಿಸುತ್ತೇವೆ. ಎಲ್ಲ ವಿವರನ್ನು 12ರಂದು ಕೊಡುವುದಾಗಿ ಎಸ್​ಪಿಪಿ ಹೇಳಿದ್ದಾರೆ’ ಎಂದಿದ್ದಾರೆ ಶಿವಕುಮಾರ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us on