ರಸ್ತೆ ಬದಿ ಅಂಗಡಿಯಲ್ಲಿ 1 ಟೀ ಕುಡಿದು 2 ಸಾವಿರ ರೂ. ಕೊಟ್ಟ DCM ಪರಮೇಶ್ವರ್
ಪರಮೇಶ್ವರ್ ಅವರು ತಮ್ಮ ರಾಜಕೀಯ ಹಾದಿಯನ್ನು ಬಿಚ್ಚಿಟ್ಟರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ನಾನು ಜೋಡೆತ್ತುಗಳು. ನಾವು ಒರಿಜಿನಲ್ ಕಾಂಗ್ರೆಸ್ಸಿಗರು, ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ನಾಗೇನಹಳ್ಳಿ ಬಳಿ ರಸ್ತೆಬದಿ ಅಂಗಡಿಯಲ್ಲಿ ಟೀ ಸೇವಿಸಿದರು. ವಿಶೇಷ ಅಂದ್ರೆ, ತಾವು ಕುಡಿದ ಒಂದು ಟೀಗೆ ಬರೋಬ್ಬರಿಗೆ 2000 ಹಣ ನೀಡಿದ್ದಾರೆ. ಇದರಿಂದ ಅಂಗಡಿ ಮಾಲೀಕ ಫುಲ್ ಖುಷ್ ಆಗಿದ್ದಾನೆ.
ತುಮಕೂರು, (ಜೂನ್ 14): ಡಾ. ಜಿ ಪರಮೇಶ್ವರ್ (DCM Dr G parameshwara) ಅವರು ಉಪಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ತಮ್ಮ ಕ್ಷೇತ್ರ ಕೊರಟಗೆರೆಗೆ ಆಗಮಿಸಿದ್ದು, ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಡಿಸಿಎಂ ಆಗಿದ್ದಕ್ಕೆ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಪರಮೇಶ್ವರ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಈ ವೇಳೆ ಪರಮೇಶ್ವರ್ ಅವರು ತಮ್ಮ ರಾಜಕೀಯ ಹಾದಿಯನ್ನು ಬಿಚ್ಚಿಟ್ಟರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ನಾನು ಜೋಡೆತ್ತುಗಳು. ನಾವು ಒರಿಜಿನಲ್ ಕಾಂಗ್ರೆಸ್ಸಿಗರು, ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. ಬಳಿಕ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ನಾಗೇನಹಳ್ಳಿ ಬಳಿ ರಸ್ತೆಬದಿ ಅಂಗಡಿಯಲ್ಲಿ ಟೀ ಸೇವಿಸಿದರು. ವಿಶೇಷ ಅಂದ್ರೆ, ತಾವು ಕುಡಿದ ಒಂದು ಟೀಗೆ ಬರೋಬ್ಬರಿಗೆ 2000 ಹಣ ನೀಡಿದ್ದಾರೆ. ಹೌದು..ತಮ್ಮ ಪರ್ಸ್ನಿಂದ 500 ರೂಪಾಯಿಯ ನಾಲ್ಕು ಗರಿ ಗರಿ ನೋಟುಗಳನ್ನು ತೆಗೆದು ನೀಡಿದರು. ಇದರಿಂದ ಅಂಗಡಿ ಮಾಲೀಕ ಫುಲ್ ಖುಷ್ ಆಗಿದ್ದಾನೆ.
