AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯ ಕೇವಲ ಭಾಗೀದಾರ್ ನ್ಯಾಯ್ ಸಮಾವೇಶದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿದ್ದರೇ?

ಸಿಎಂ ಸಿದ್ದರಾಮಯ್ಯ ಕೇವಲ ಭಾಗೀದಾರ್ ನ್ಯಾಯ್ ಸಮಾವೇಶದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೋಗಿದ್ದರೇ?

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: ವಿವೇಕ ಬಿರಾದಾರ|

Updated on:Jul 26, 2025 | 6:00 PM

Share

ನಿಮ್ಮ ಮಗ ನನ್ನ ತಂದೆ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರಿಗಿಂತ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಅಂತ ಹೇಳಿದ್ದಾರೆ ಎಂದು ಸಿದ್ದರಾಮಯ್ಯನವರಿಗೆ ಹೇಳಿದಾಗ ಅವರು, ನಾವು ಬಿಜೆಪಿಯವರಿಗಿಂತ ಹೆಚ್ಚು ಕೆಲಸ ಮಾಡಿದ್ದೇವೆ ಅಂತ ಹೇಳುತ್ತಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದು ಹೇಗೆ ಉತ್ತರವಾದೀತು? ಅವರು ಕೇಳಿದ್ದು ಒಡೆಯರ್ ಜೊತೆ ಹೋಲಿಕೆ ಮಾಡಿರುವ ಬಗ್ಗೆ, ಇವರು ಹೇಳ್ತಿರೋದು ಬಿಜೆಪಿಯ ಬಗ್ಗೆ!

ಹಾಸನ, ಜುಲೈ 26: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಿಂದ ವಾಪಸ್ಸು ಬಂದಿದ್ದಾರೆ ಮತ್ತು ಅವರಿಬ್ಬರೂ ಇಂದು ಜಿಲ್ಲೆಯ ಅರಸೀಕೆರೆ ಕ್ಷೇತ್ರದಲ್ಲಿ (Arasikere constituency) ₹ 750 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು ನೆರವೇರಿಸಿದರು. ದೆಹಲಿಗೆ ಹೋದ ವಿಷಯವೇನು ಸರ್ ಅಂತ ಪತ್ರಕರ್ತರು ಕೇಳಿದಾಗ, ಹಿಂದುಳಿದ ವರ್ಗಗಳ ಸಮಾವೇಶವನ್ನು ಏರ್ಪಡಿಸಲಾಗಿತ್ತು, ಅದಕ್ಕಾಗಿ ಹೋಗಿದ್ದೆ ಅಂತ ಹೇಳಿದರು. ಅದು ಸರಿ, ಶಿವಕುಮಾರ್ ಸಹ ಅದೇ ಕಾರ್ಯಕ್ರಮದ ಸಲುವಾಗಿ ಹೋಗಿದ್ದರೇ? ಆದರೆ, ದೃಶ್ಯಗಳಲ್ಲಿ ನೀವು ಗಮನಿಸುವ ಹಾಗೆ ಶಿವಕುಮಾರ್ ಅವರ ಮುಖದಲ್ಲಿ ಎಂದಿನ ಲವಲವಿಕೆ, ನಡಿಗೆಯಲ್ಲಿ ಉತ್ಸಾಹವಿಲ್ಲ, ಎಲ್ಲೋ ಕಳೆದು ಹೋದವರಂತಿದ್ದಾರೆ.

ಇದನ್ನೂ ಓದಿ:  ಭಾಗೀದಾರ ನ್ಯಾಯ್ ಸಮಾವೇಶ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jul 26, 2025 03:02 PM
Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.