AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಗಾದಿ ಹಬ್ಬದ ದಿನವೇ ಬರ್ಬರವಾಗಿ ಹತ್ಯೆಯಾದ ನೇಪಾಳಿ ಮಂಜು ಇತ್ತೀಚಿಗೆ ಕುಣಿಗಲ್​ನಲ್ಲಿ ವಾಸಿಸಲಾರಂಭಿಸಿದ್ದ!

ಯುಗಾದಿ ಹಬ್ಬದ ದಿನವೇ ಬರ್ಬರವಾಗಿ ಹತ್ಯೆಯಾದ ನೇಪಾಳಿ ಮಂಜು ಇತ್ತೀಚಿಗೆ ಕುಣಿಗಲ್​ನಲ್ಲಿ ವಾಸಿಸಲಾರಂಭಿಸಿದ್ದ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 31, 2025 | 10:26 AM

Share

ರೌಡಿಗಳು ಸಹಜ ಸಾವು ಕಾಣೋದು ವಿರಳ ಸಂದರ್ಭಗಳಲ್ಲಿ ಅಂತ ಹೇಳಿದರೆ ಉತ್ಪ್ರೇಕ್ಷೆಯಾಗಲಾರದು. ಬೆಂಗಳೂರಲ್ಲಿ ಹತ್ಯೆಗೀಡಾಗುವ ರೌಡಿ ಅಥವಾ ಹಿಸ್ಟರಿ ಶೀಟರ್ ತಮ್ಮ ಎದುರಾಳಿಗಳಿಂದಲೇ ಅಂತ್ಯ ಕಾಣುತ್ತಾರೆ. ಹಾಗೆ ನೋಡಿದರೆ, ಮಂಜನ ಮೇಲೆ ಹಲವಾರು ಪ್ರಕರಣಗಳಿದ್ದವಂತೆ. 2024 ರ ಲೋಕ ಸಭಾ ಚುನಾವಣೆ ಸಂದರ್ಭದಲ್ಲಿ ಅವನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಗಡೀಪಾರು ಮಾಡಲಾಗಿತ್ತು.

ಬೆಂಗಳೂರು, ಮಾರ್ಚ್ 31: ಆನೇಕಲ್ ಭಾಗದ ಹೆಸರಾಂತ ರೌಡಿ ನೇಪಾಳಿ ಮಂಜನನ್ನು ಕಳೆದ ರಾತ್ರಿ ಸುಮಾರು 10.45ಕ್ಕೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸ್ಥಳೀಯ ನಿವಾಸಿಯೊಬ್ಬರು (local resident) ಹೇಳುವ ಪ್ರಕಾರ ಎರಡು ಬೈಕ್​ ನಲ್ಲಿ ಬಂದಿದ್ದ ಐದು ಜನ ಮಂಜನ ಕೊಲೆ ಮಾಡಿದ್ದಾರೆ. ಹಂತಕರು ಪ್ರಾಯಶಃ ಮಂಜನಿಗೆ ಪರಿಚಿತರು ಅಂತ ಕಾಣುತ್ತದೆ. ಯಾಕೆಂದರೆ ಅವನು ಕೊಲೆಯಾಗುವ ಮೊದಲು ಹಂತಕರ ಜೊತೆ ಮಾತಾಡಿದ್ದಾನೆ. ನೇಪಾಳಿ ಮಂಜು ಮೊದಲು ನಗರದ ವೀರಸಂದ್ರ ಏರಿಯಾ ನಿವಾಸಿಯಾಗಿದ್ದರೂ ಇತ್ತೀಚಿಗೆ ಫ್ಯಾಮಿಲಿ ಜೊತೆ ಕುಣಿಗಲ್​ಗೆ ಶಿಫ್ಟ್ ಆಗಿದ್ದ.

ಇದನ್ನೂ ಓದಿ:    ವಿಜಯನಗರ ಟ್ರಾಫಿಕ್​ ಇನ್ಸ್​ಪೆಕ್ಟರ್​ ರೌಡಿ ವರ್ತನೆ: ಕೊಟ್ಟ ಏಟಿಗೆ ಬೈಕ್ ಸವಾರ ಆಸ್ಪತ್ರೆ ಪಾಲು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More