Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯನಗರ ಟ್ರಾಫಿಕ್​ ಇನ್ಸ್​ಪೆಕ್ಟರ್​ ರೌಡಿ ವರ್ತನೆ: ಕೊಟ್ಟ ಏಟಿಗೆ ಬೈಕ್ ಸವಾರ ಆಸ್ಪತ್ರೆ ಪಾಲು

ಬೆಂಗಳೂರಿನ ಟ್ರಾಫಿಕ್ ಪೊಲೀಸರ ಮೇಲೆ‌ ಆಗಾಗ ಲಂಚದ ಆರೋಪಗಳು ಕೇಳಿ ಬರುತ್ತಲೇ ಇವೆ. ಅದರಂತೆಯೇ ಇದೀಗ ಮತ್ತೊಂದು ಆರೋಪ ಕೇಳಿಬಂದಿದ್ದು, ಹಣ ಕೊಟ್ಟಿಲ್ಲ ಎಂದು ಬೈಕ್ ಸವಾರನೊಬ್ಬನ್ನು ಠಾಣೆಗೆ ಎಳೆದೊಯ್ದು ಬೂಟು ಕಾಲಿನಿಂದ ಒದ್ದು ಗಂಭೀರವಾಗಿ ಹಲ್ಲೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ಆ ಪೊಲೀಸರು ಯಾರು..? ಏಟು ತಿಂದ ಬೈಕ್ ಸವಾರ ಡೀಟೇಲ್ಸ್ ಇಲ್ಲಿದೆ ನೋಡಿ..

ವಿಜಯನಗರ ಟ್ರಾಫಿಕ್​ ಇನ್ಸ್​ಪೆಕ್ಟರ್​ ರೌಡಿ ವರ್ತನೆ: ಕೊಟ್ಟ ಏಟಿಗೆ ಬೈಕ್ ಸವಾರ ಆಸ್ಪತ್ರೆ ಪಾಲು
Vijayanagara Traffic Police
Follow us
Shivaprasad
| Updated By: ರಮೇಶ್ ಬಿ. ಜವಳಗೇರಾ

Updated on:Mar 17, 2025 | 10:39 PM

ಬೆಂಗಳೂರು, (ಮಾರ್ಚ್​ 17): ಬೆಂಗಳೂರಿನ ವಿಜಯನಗರ ಟ್ರಾಫಿಕ್ ಪೊಲೀಸರ (Vijayanagara Traffic Police ) ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಕೋರ್ಟ್​ಗೆ ದಂಡ ಕಟ್ಟಿ ಸೀಜ್ ಆಗಿದ್ದ ಬೈಕ್ ಬಿಡಿಸಿಕೊಳ್ಳಲು ಬಂದಾಗ ​ಸಬ್ ಇನ್ಸ್​ಪೆಕ್ಟರ್​ ಶಾಂತರಾಮ್ ಹಾಗೂ ಸಿಬ್ಬಂದಿ ಸಿದ್ದಕಿ ಸೇರಿಕೊಂಡು ಬೈಕ್​ ಸವಾರ ಈಶ್ವರ್ ಎಂಬುವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದ ಅಸ್ವಸ್ಥರಾಗಿ ಬಿದ್ದ ಈಶ್ವರ್​ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನು ಈ ರೀತಿ ರೌಡಿ ವರ್ತನೆ ಮಾಡಿದ ಪೊಲೀಸರಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಬೈಕ್ ಸವಾರ ಈಶ್ವರ್ ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಸಂಬಂಧ ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಅನಿತಾ ಹದ್ದಣ್ಣನವರು, ಎಸಿಪಿಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

ಅಸಲಿಗೆ ಆಗಿದ್ದೇನು?

ಕಳೆದ ಎರಡು ದಿನಗಳ ಹಿಂದೆ ಅಂದ್ರೆ ಮಾರ್ಚ್ 14 ರ ರಾತ್ರಿ ವಿಜಯನಗರ ಟ್ರಾಫಿಕ್ ಪೊಲೀಸರು, ಇಲ್ಲಿನ ಜಿಟಿ ಮಾಲ್ ಬಳಿ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ಮಾಡ್ತಿದ್ರು. ಈ ವೇಳೆ ಅದೇ ರಸ್ತೆಯಲ್ಲಿ ಬಂದ ಬೈಕ್ ಸವಾರ ಈಶ್ವರ್ ಅನ್ನೋ ಯುವಕ ಕುಡಿದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಕುಡಿದಿರೋದು ಕನ್ಪರ್ಮ್‌ ಮಾಡಿಕೊಂಡ ಪೊಲೀಸರು, ಕೋರ್ಟ್ ಗೆ ಹೋದ್ರೆ ಹತ್ತು ಸಾವಿರ, ಇಲ್ಲೇ ಆದ್ರೆ ಮೂರು ಸಾವಿರ ಆಯ್ಕೆ ನಿಂದೆ ಎಂದು ಹೇಳಿದ್ದರಂತೆ. ಪೊಲೀಸರ ಡೀಲ್ ಗೆ ಒಪ್ಪಿಕೊಂಡ ಬೈಕ್ ಸವಾರ ಈಶ್ವರ್, ಮೂರು ಸಾವಿರ ಗೂಗಲ್ ಪೇ ಮಾಡೋಕೆ ಮುಂದಾಗಿದ್ದ. ಇದಕ್ಕೆ ಪೊಲೀಸರು, ಇಲ್ಲ ಇಲ್ಲ, ಗೂಗಲ್ ಪೇ ಬೇಡ ಕ್ಯಾಶ್ ಕೊಡು ಎಂದು ಹೇಳಿದ್ದರಂತೆ. ನನ್ನ ಹತ್ತಿರ ಕ್ಯಾಶ್ ಇಲ್ಲ, ಕೋರ್ಟ್ ಗೆ ಫೈನ್ ಕಟ್ಟುತ್ತೇನೆ ಬಿಡಿ ಎಂದಿದ್ದಾನೆ. ಈ ವೇಳೆ ಬೈಕ್ ಸೀಜ್ ಮಾಡಿ ದಂಡದ ರಶೀದಿ ಕೊಟ್ಟ ಈಶ್ವರ್ ನ ಕಳುಹಿಸಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಪೊಲೀಸ್ರ ಕೊಂಕು ಮಾತು: ನ್ಯಾಯಕ್ಕಾಗಿ ಕಮಿಷನರ್​ ಕಚೇರಿ ಮೆಟ್ಟಿಲೇರಿದ

ಇದಾದ ಮಾರನೇ ದಿನ ಕೋರ್ಟ್ ಗೆ ದಂಡದ ಹಣ ಹತ್ತು ಸಾವಿರ ಇತರೆ ಉಲ್ಲಂಘನೆ ಮೂರು ಸಾವಿರ ಸೇರಿ ಹದಿಮೂರು ಸಾವಿರ ದಂಡ ಕಟ್ಟಿ ರಶೀದಿ ತೆಗೆದುಕೊಂಡು ಬೈಕ್ ಬಿಡಿಸಿಕೊಳ್ಳಲು ವಿಜಯ ನಗರ ಟ್ರಾಫಿಕ್ ಪೊಲೀಸ್ ಠಾಣೆ ಬಳಿ‌ ಹೋಗಿದ್ದಾರೆ. ಈ ವೇಳೆ ಅಲ್ಲೇ ಇದ್ದ ಸಬ್ ಇನ್ಸ್​ಪೆಕ್ಟರ್​ ಶಾಂತರಾಮ್, ಸಿಬ್ಬಂದಿ ಸಿದ್ದಕಿ ಎನ್ನುವರು ಈಶ್ವರ್​​ನನ್ನು ಬೈಯ್ಯೋಕೆ ಶುರು ಮಾಡಿದ್ದಾರೆ.

ನಾವ್ ಹೇಳಿದಾಗಲೇ ಮೂರು ಸಾವಿರ ಕೊಟ್ಟಿದ್ರೆ ಹತ್ತು ಸಾವಿರ ಊಳಿತಿತ್ತ ಎಂದು ಅಪಹಾಸ್ಯ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಬಳಿಕ ಬೈಕ್ ಸವಾರ ಈಶ್ವರ್​ ಅವರನ್ನ ಠಾಣೆ ಒಳಗೆ ಎಳೆದುಕೊಂಡು ಹೋಗಿ ಪೊಲೀಸರು ಬೂಟು ಕಾಲಿನಿಂದ ಒದ್ದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಏಟು ತಿಂದ ಈಶ್ವರ್ ಏಕಾಏಕಿ ಕುಸಿದುಬಿದ್ದು ಠಾಣೆಯಲ್ಲೇ ಪ್ರಜ್ಞೆ ಕಳೆದುಕೊಂಡಿದ್ದಾನೆ. ತಕ್ಷಣ ಪೊಲೀಸರು ಆಟೋ ಕರೆಸಿ ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆಗ ಎಲ್ಲ ಘಟನೆ ನೋಡುತ್ತಿದ್ದ ಜನರು, ಪೊಲೀಸರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೊಂಡಿದ್ದಾರೆ.

ಸಂಚಾರ ನಿಯಮ‌ ಉಲ್ಲಂಘಿಸಿದ್ರೆ ಕೇಸ್ ಹಾಕುವುದು ಸಾಮಾನ್ಯ ಆದ್ರೆ, ರಕ್ಷಕರಾದ ಪೋಲಿಸರೇ ಈ ರೀತಿ ರೌಡಿಗಳಂತೆ ವರ್ತಿಸಿರುವುದು ವಿಪರ್ಯಾಸವೇ ಸರಿ.  ಇನ್ನು ಈ ಪರಿ ಹಿಂಸೆ ನೀಡಿದ್ದು ಸರಿಯೇ..? ಹಿರಿಯ ಅಧಿಕಾರಿಗಳ ನಿಸ್ಪಕ್ಷಪಾತ ತನಿಖೆಯಿಂದಷ್ಟೇ ಅಸಲಿಯತ್ತು ಹೊರಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:37 pm, Mon, 17 March 25

RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
RCB ಅನ್​ಬಾಕ್ಸ್ ಕಾರ್ಯಕ್ರಮ ಮಿಸ್ ಮಾಡಿಕೊಂಡಿದ್ದೀರಾ? ಇಲ್ಲಿದೆ ವಿಡಿಯೋ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಕೇಂದ್ರ ಸಚಿವರೊಬ್ಬರ ವಿರುದ್ಧ ಒತ್ತುವರಿ ಕಾರ್ಯಾಚರಣೆ ನಡೆದ ಪ್ರಕರಣಗಳು ವಿರಳ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ಮುಸ್ಲಿಮರಿಗೆ ಶೇ 4 ಮೀಸಲಾತಿ ಸುಪ್ರೀಂ​ನಲ್ಲಿ ಪ್ರಶ್ನಿಸಲಾಗ್ತಿದೆ: ಬೊಮ್ಮಾಯಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ತುಮಕೂರು: ಓರ್ವ ವಿದ್ಯಾರ್ಥಿನಿಗಾಗಿ ಒಂದು ಸರ್ಕಾರಿ ಶಾಲೆ, ಓರ್ವ ಶಿಕ್ಷಕಿ
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡದಿದ್ದರೆ ಹೇಗೆ? ಯುಟಿ ಖಾದರ್
ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ಇಡೀ ಜಗತ್ತು ಮಹಾ ಕುಂಭಮೇಳದ ರೂಪದಲ್ಲಿ ಭಾರತದ ಶ್ರೇಷ್ಠ ರೂಪ ನೋಡಿದೆ: ಮೋದಿ
ಕುಡಿದ ಮತ್ತಿನಲ್ಲಿ ಹೈಟೆನ್ಷನ್ ವಿದ್ಯುತ್​ ಕಂಬ ಏರಿದ ಯುವಕ!
ಕುಡಿದ ಮತ್ತಿನಲ್ಲಿ ಹೈಟೆನ್ಷನ್ ವಿದ್ಯುತ್​ ಕಂಬ ಏರಿದ ಯುವಕ!
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ನಿಮ್ಮಪ್ಪಂದಾ ಪದ ಹುಟ್ಟುಹಾಕಿದ್ದು ಬಿಜೆಪಿ ನಾಯಕರು: ಪ್ರದೀಪ್ ಈಶ್ವರ್
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಹಣದ ಬದಲು ಅಕ್ಕಿ ಕೊಡುವುದೇ ಲೇಸು ಎನ್ನುತ್ತಾರೆ ಫಲಾನುಭವಿಗಳು
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!
ಕಾಂಗ್ರೆಸ್ ಮುಖಂಡರು ದೆಹಲಿಗೆ ಹೋದಾಗ ಕುತೂಹಲ ಹುಟ್ಟೋದು ಸಹಜ!