ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
‘ವೈಯಕ್ತಿಕ ಜೀವನದ ಬಗ್ಗೆ ನಿನ್ನೆ ಪೋಸ್ಟ್ ಹಾಕಿದ್ದೇನೆ. ಅದನ್ನು ಅಲ್ಲಿಗೆ ಮುಗಿಸಿದ್ದೇನೆ. ತಾವೆಲ್ಲರೂ ಸಹಾಯ ಮಾಡುತ್ತಿದ್ದೀರಿ. ಅದಕ್ಕೆ ಸಂತೋಷ. ತುಂಬಾ ಮುಂದೆ ಬಂದಿದ್ದೇವೆ. ಮಿಕ್ಕಿದ್ದು ಏನಾದರೂ ಮಾತಾಡೋಣ’ ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ. ಅವರು ಮಾತನಾಡಿದ ವಿಡಿಯೋ ಇಲ್ಲಿದೆ ನೋಡಿ..
ನಟ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ಸಂಸಾರದಲ್ಲಿ ಬಿರುಕು ಮೂಡಿ ಹಲವು ವರ್ಷಗಳೇ ಕಳೆದಿದ್ದವು. ಅಂತಿಮವಾಗಿ ಅವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ. ಡಿವೋರ್ಸ್ ಪಡೆದ ಬಳಿಕ ದುನಿಯಾ ವಿಜಯ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ಬಗ್ಗೆ ತಾವು ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದು ಕೂಡ ಹೇಳಿದ್ದಾರೆ. ಇಂದು (ಸೆಪ್ಟೆಂಬರ್ 4) ‘ಸಿಟಿ ಲೈಟ್ಸ್’ ಸಿನಿಮಾದ ಸುದ್ದಿಗೋಷ್ಠಿ ಬಳಿಕ ಮಾಧ್ಯಮಗಳಿಂದ ವಿಚ್ಛೇದನದ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ಉತ್ತರ ನೀಡಲು ನಿರಾಕರಿಸಿದರು. ‘ವೈಯಕ್ತಿಕ ಜೀವನದ ಬಗ್ಗೆ ನಿನ್ನೆ ಪೋಸ್ಟ್ ಹಾಕಿದ್ದೇನೆ. ಅದನ್ನು ಅಲ್ಲಿಗೆ ಮುಗಿಸಿದ್ದೇನೆ. ತಾವೆಲ್ಲರೂ ಸಹಾಯ ಮಾಡುತ್ತಿದ್ದೀರಿ. ಅದಕ್ಕೆ ಸಂತೋಷ. ತುಂಬಾ ಮುಂದೆ ಬಂದಿದ್ದೇವೆ. ಮಿಕ್ಕಿದ್ದು ಏನಾದರೂ ಮಾತಾಡೋಣ. ಈಗ ಯಾವುದೇ ರೀತಿಯಲ್ಲಿ ಕುಟುಂಬದ ವಿಚಾರ ಮಾತನಾಡೋಕೆ ನಾನು ಇಷ್ಟಪಡಲ್ಲ’ ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

