Dwarakish Death: ನಾನು ಮೊದಲು ದ್ವಾರಕೀಶ್​​ನನ್ನು ನೋಡಬೇಕು, ಓಡೋಡಿ ಬಂದ ಅಪ್ತ ಗೆಳೆಯ ಭಾರ್ಗವ

ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರು ವಿಧಿವಶವಾಗಿದ್ದಾರೆ. ಇಂದು ಬೆಳಿಗ್ಗೆ ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ’ ಎಂದು ದ್ವಾರಕೀಶ್ ಪುತ್ರ ಯೋಗಿ ಹೇಳಿದ್ದಾರೆ. ಇದೀಗ ಅವರನ್ನು ನೋಡಲು ಅವರ ಮನೆಯ ಬಳಿ ಅಪ್ತ ಮಿತ್ರ ಭಾರ್ಗವ ಬಂದಿದ್ದಾರೆ.

Dwarakish Death: ನಾನು ಮೊದಲು ದ್ವಾರಕೀಶ್​​ನನ್ನು ನೋಡಬೇಕು, ಓಡೋಡಿ ಬಂದ ಅಪ್ತ ಗೆಳೆಯ ಭಾರ್ಗವ
|

Updated on: Apr 16, 2024 | 2:08 PM

ಬೆಂಗಳೂರು. ಏ.16: ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ (Dwarakish) ಅವರು ಇಂದು (ಏಪ್ರಿಲ್ 16) ನಿಧನ ಹೊಂದಿದ್ದಾರೆ. ಎಲೆಕ್ಟ್ರಾನಿಕ್​ ಸಿಟಿಯ ಸ್ವಗೃಹದಲ್ಲಿ ದ್ವಾರಕೀಶ್​ ಕೊನೆಯುಸಿರೆಳೆದಿದ್ದಾರೆ. ‘ರಾತ್ರಿ ಲೂಸ್ ಮೋಷನ್ ಆಯ್ತು. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ’ ಎಂದು ದ್ವಾರಕೀಶ್ ಪುತ್ರ ಯೋಗಿ ಹೇಳಿದ್ದಾರೆ. ಇದೀಗ ಈ ಸುದ್ದಿ ಕೇಳುತ್ತಿದ್ದಂತೆ ಚಿತ್ರರಂಗ ಅಪ್ತ ಸ್ನೇಹಿತ ಭಾರ್ಗವ ದ್ವಾರಕೀಶ್ ಮನೆಯ ಬಳಿ ಓಡೋಡಿ ಬಂದಿದ್ದಾರೆ. ನಾನು ಮೊದಲು ದ್ವಾರಕೀಶ್ ಅವರನ್ನು ನೋಡಬೇಕು ನಂತರ ನಿಮಗೆ ಉತ್ತರ ನೀಡುವೇ ಎಂದು ಪತ್ರಕರ್ತರಿಗೆ ಹೇಳಿದ್ದಾರೆ. ಇದರ ಜತೆಗೆ ದ್ವಾರಕೀಶ್ ಅವರ ನಿಧನವಾರ್ತೆ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us