AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ; ಗಣಪತಿಯ ವಿಶೇಷ ವಿಡಿಯೋ ವೈರಲ್

ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ; ಗಣಪತಿಯ ವಿಶೇಷ ವಿಡಿಯೋ ವೈರಲ್

ಸುಷ್ಮಾ ಚಕ್ರೆ
|

Updated on: Sep 15, 2026 | 4:48 PM

Share

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಹಬೂಬ್‌ನಗರ ಜಿಲ್ಲೆಯ ಜಡ್ಚರ್ಲಾ ಪಟ್ಟಣದ ವೀರ ಶಿವಾಜಿ ನಗರದಲ್ಲಿ ಸ್ಥಾಪಿಸಲಾದ ಗಣಪತಿ ಮಂಟಪ ಮತ್ತು ಗಣೇಶ ಮೂರ್ತಿಯು ಗಮನಸೆಳೆಯುತ್ತಿದೆ. ಇಲ್ಲಿ ಅರಿಶಿನದ ಕೊಂಬುಗಳು, ಹಿಟ್ಟು ಮತ್ತು ಗೋಣಿ ಚೀಲಗಳನ್ನು ಬಳಸಿ ಗಣೇಶನ ಮೂರ್ತಿಯನ್ನು ಅದ್ಭುತವಾಗಿ ರಚಿಸಲಾಗಿದೆ. ಕಳೆದ 15 ವರ್ಷಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಸ್ಥಾಪಿಸುತ್ತಿರುವ ಸಂಘಟಕರು ಈ ಬಾರಿಯೂ ಗಣೇಶ ಮೂರ್ತಿಯನ್ನು ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಗಣೇಶನ ಮೂರ್ತಿಯನ್ನು ಸುಮಾರು 40 ಕೆಜಿ ಅರಿಶಿನ ಕೊಂಬುಗಳು, ಹಿಟ್ಟು ಮತ್ತು ಗೋಣಿ ಚೀಲಗಳನ್ನು ಬಳಸಿ ತಯಾರಿಸಲಾಗಿದೆ.

ಮಹಬೂಬ್‌ನಗರ, ಸೆಪ್ಟೆಂಬರ್ 15: ತೆಲಂಗಾಣದ ಮಹಬೂಬ್‌ನಗರದ ಗಣೇಶ ಚತುರ್ಥಿಯ ಗಣಪತಿಯ ಮೂರ್ತಿ ಭಾರೀ ಗಮನಸೆಳೆಯುತ್ತಿದೆ. ಹಿಂದೂ ಧರ್ಮದಲ್ಲಿ ಅರಿಶಿನಕ್ಕೆ ವಿಶೇಷ ಮಹತ್ವವಿದೆ. ಅರಿಶಿನವನ್ನು ಶುದ್ಧತೆ ಮತ್ತು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮಹಬೂಬ್‌ನಗರದ ಜಡ್ಚರ್ಲಾ ಪಟ್ಟಣದ ವೀರ ಶಿವಾಜಿ ನಗರದ ಸ್ಥಳೀಯರು ಅರಿಶಿನದ ಕೊಂಬುಗಳಿಂದ ಗಣೇಶನ ಮೂರ್ತಿಯನ್ನು ಸಿದ್ಧಪಡಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ನೀಡಿದ್ದಾರೆ.

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಮಹಬೂಬ್‌ನಗರ ಜಿಲ್ಲೆಯ ಜಡ್ಚರ್ಲಾ ಪಟ್ಟಣದ ವೀರ ಶಿವಾಜಿ ನಗರದಲ್ಲಿ ಸ್ಥಾಪಿಸಲಾದ ಗಣಪತಿ ಮಂಟಪ ಮತ್ತು ಗಣೇಶ ಮೂರ್ತಿಯು ಗಮನಸೆಳೆಯುತ್ತಿದೆ. ಇಲ್ಲಿ ಅರಿಶಿನದ ಕೊಂಬುಗಳು, ಹಿಟ್ಟು ಮತ್ತು ಗೋಣಿ ಚೀಲಗಳನ್ನು ಬಳಸಿ ಗಣೇಶನ ಮೂರ್ತಿಯನ್ನು ಅದ್ಭುತವಾಗಿ ರಚಿಸಲಾಗಿದೆ. ಕಳೆದ 15 ವರ್ಷಗಳಿಂದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಸ್ಥಾಪಿಸುತ್ತಿರುವ ಸಂಘಟಕರು ಈ ಬಾರಿಯೂ ಗಣೇಶ ಮೂರ್ತಿಯನ್ನು ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ಗಣೇಶನ ಮೂರ್ತಿಯನ್ನು ಸುಮಾರು 40 ಕೆಜಿ ಅರಿಶಿನ ಕೊಂಬುಗಳು, ಹಿಟ್ಟು ಮತ್ತು ಗೋಣಿ ಚೀಲಗಳನ್ನು ಬಳಸಿ ತಯಾರಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us