‘ಊಟ, ತಿಂಡಿ ಇಲ್ಲದೇ ಗಾಂಧಿನಗರದಲ್ಲಿ ಅಲೆದವನು ನಾನು’: ಜೋಗಿ ಪ್ರೇಮ್ ಫ್ಲ್ಯಾಶ್ ಬ್ಯಾಕ್
ಊಟ-ತಿಂಡಿ ಇಲ್ಲದೇ, ಕೇವಲ ಅರ್ಧ ಕಪ್ ಟೀ ಕುಡಿದು ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದಾಡಿದ ಸಂದರ್ಭವನ್ನು ನಿರ್ದೇಶಕ ಜೋಗಿ ಪ್ರೇಮ್ ಮೆಲುಕು ಹಾಕಿದ್ದಾರೆ.
ನಿರ್ದೇಶಕ ಜೋಗಿ ಪ್ರೇಮ್ ಅವರು ಈಗ ಚಂದನವನದಲ್ಲಿ ಯಶಸ್ವಿ ನಿರ್ದೇಶಕ. ಕರಿಯ, ಎಕ್ಸ್ಕ್ಯೂಸ್ ಮೀ, ಜೋಗಿ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಇಂದು ಅವರ ಸಿನಿಮಾಗಳಿಗೆ ಹಣ ಹೂಡಲು ಅನೇಕರು ಮುಂದೆ ಬರುತ್ತಾರೆ. ಆದರೆ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಪರಿಸ್ಥಿತಿ ಹೀಗೆ ಇರಲಿಲ್ಲ. ಆ ಕಷ್ಟದ ದಿನಗಳ ಬಗ್ಗೆ ಪ್ರೇಮ್ ಮಾತನಾಡಿದ್ದಾರೆ. ಊಟ-ತಿಂಡಿ ಇಲ್ಲದೇ, ಕೇವಲ ಅರ್ಧ ಕಪ್ ಟೀ ಕುಡಿದು ಗಾಂಧಿನಗರದಲ್ಲಿ ಅವಕಾಶಕ್ಕಾಗಿ ಅಲೆದಾಡಿದ ಸಂದರ್ಭವನ್ನು ಪ್ರೇಮ್ ಮೆಲುಕು ಹಾಕಿದ್ದಾರೆ. ಇಂದು ಚಿತ್ರರಂಗಕ್ಕೆ ಬರುತ್ತಿರುವ ಹೊಸ ಪ್ರತಿಭಾವಂತರಿಗೆ ಆ ರೀತಿ ಕಷ್ಟ ಆಗಬಾರದು ಎಂದು ಅವರು ಅನೇಕರಿಗೆ ಅವಕಾಶ ನೀಡುತ್ತಿದ್ದಾರೆ. ಈ ಕುರಿತು ‘ಏಕ್ ಲವ್ ಯಾ’ ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಪ್ರೇಮ್ ಮಾತನಾಡಿದ್ದಾರೆ. ಹುಬ್ಬಳಿಯಲ್ಲಿ ನಡೆದ ಕಾರ್ಯಕ್ರದಮಲ್ಲಿ ಅವರು ಫ್ಲ್ಯಾಶ್ ಬ್ಯಾಕ್ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ:
‘ನನ್ನ ಉಸಿರು ಇರೋವರೆಗೆ ಪುನೀತ್ ಫೋನ್ ನಂಬರ್ ಡಿಲೀಟ್ ಮಾಡಲ್ಲ’: ಜೋಗಿ ಪ್ರೇಮ್ ಭಾವುಕ ಮಾತು
‘ಏಕ್ ಲವ್ ಯಾ’ ತಂಡದಿಂದ ಅಪ್ಪುಗೆ ಅವಮಾನ ಆಗಿದ್ದು ಹೇಗೆ? ಸುದ್ದಿಗೋಷ್ಠಿಯಲ್ಲಿ ಪ್ರೇಮ್ ಸ್ಪಷ್ಟನೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ್ಯಾಪಿಡೋ ಆ್ಯಪ್ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಯುಎಇ ದೇಶಕ್ಕೆ ರಫ್ತಾಗಲಿವೆ ಬ್ರಹ್ಮೋಸ್, ಆಕಾಶ್ ಕ್ಷಿಪಣಿಗಳು!
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ

