Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News; ಬಜೆಟ್ ಮೇಲಿನ ಉತ್ತರವನ್ನು ಯಾವತ್ತೂ ವಿರೋಧಪಕ್ಷಗಳ ಸದಸ್ಯರಿಲ್ಲದ ಸದನಕ್ಕೆ ನೀಡಿರಲಿಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ

Bengaluru News; ಬಜೆಟ್ ಮೇಲಿನ ಉತ್ತರವನ್ನು ಯಾವತ್ತೂ ವಿರೋಧಪಕ್ಷಗಳ ಸದಸ್ಯರಿಲ್ಲದ ಸದನಕ್ಕೆ ನೀಡಿರಲಿಲ್ಲ: ಸಿದ್ದರಾಮಯ್ಯ, ಮುಖ್ಯಮಂತ್ರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 22, 2023 | 5:07 PM

ಚರ್ಚೆಗಳು ಫಲಪ್ರದವಾಗಿ ನಡೆಯಲಿ ಎಂಬ ಕಾರಣಕ್ಕಾಗೇ ಅಧಿವೇಶನವನ್ನು ಒಂದು ವಾರದ ಮಟ್ಟಿಗೆ ವಿಸ್ತರಿಸಲಾಯಿತು ಎಂದು ಸಿದ್ದರಾಮಯ್ಯ ಹೇಳಿದರು,

ಬೆಂಗಳೂರು: ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧಿವೇಶನ ನಡೆಯುವಾಗ ಬಿಜೆಪಿ ಶಾಸಕರು (BJP MLAs) ಸದನದ ಹೊರಗಡೆ ಪ್ರತಿಭಟನೆ ನಡೆಸಿದ್ದು ಸರಿಯಲ್ಲ ಎಂದು ಹೇಳಿದರು. ಅಧಿವೇಶನ ನಡೆಸುವ ಉದ್ದೇಶ ಜನರ ಸಮಸ್ಯೆಗಳನ್ನು ಚರ್ಚಿಸುವುದಕ್ಕಾಗಿ, ಅದನ್ನು ಬಿಟ್ಟು ಬಿಜೆಪಿ ಶಾಸಕರು ಹಗಲೆಲ್ಲ ಪ್ರತಿಭಟನೆ ನಡೆಸಿದರೆ, ಸದನದ ಆಶಯಗಳಿಗೆ ಚ್ಯುತಿಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಚರ್ಚೆಗಳು (debates) ಫಲಪ್ರದವಾಗಿ ನಡೆಯಲಿ ಎಂಬ ಕಾರಣಕ್ಕಾಗೇ ಅಧಿವೇಶನವನ್ನು ಒಂದು ವಾರದ ಮಟ್ಟಿಗೆ ವಿಸ್ತರಿಸಲಾಯಿತು. 40 ವರ್ಷಗಳ ತಮ್ಮ ರಾಜಕೀಯ ಬದುಕಿನಲ್ಲಿ ಯಾವತ್ತೂ ಹೀಗೆ ಆಗಿರಲಿಲ್ಲ. ಬಜೆಟ್ ಮೇಲಿನ ಉತ್ತರವನ್ನು ತಾವು ವಿರೋಧ ಪಕ್ಷಗಳ ಸದಸ್ಯರಿಲ್ಲದ ಸದನಕ್ಕೆ ಯಾವತ್ತೂ ನೀಡಿರಲಿಲ್ಲ, ಇದೇ ಮೊದಲ ಬಾರಿಗೆ ಹಾಗೆ ಆಗಿದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ