AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ: ಕಾರಣ ಇಲ್ಲಿದೆ

ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ MLC-MLA ನಡುವೆ ಮಾತಿನ ಚಕಮಕಿ: ಕಾರಣ ಇಲ್ಲಿದೆ

ಸುರೇಶ್ ನಾಯಕ್
| Edited By: |

Updated on:Sep 08, 2026 | 5:20 PM

Share

ಬೀದರ್ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ ತಡವಾಗಿ ಬಂದ ಶಾಸಕ ಸಿದ್ದು ಪಾಟೀಲ್‌ಗೆ ಸಮಯ ಪಾಲನೆ ಮಾಡುವಂತೆ ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ಸಲಹೆ ನೀಡಿದ್ದಾರೆ. ಇದೇ ವಿಚಾರಕ್ಕೆ ಉಭಯ ನಾಯಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನು ನಾಯಕರು ಮಾಡಿದ್ದಾರೆ.

ಬೀದರ್​, ಸೆಪ್ಟೆಂಬರ್​​ 08: ರಸ್ತೆ ಕಾಮಗಾರಿ ಗುದ್ದಲಿ ಪೂಜೆ ವೇಳೆ ವಿಧಾನ ಪರಿಷತ್​​ ಸದಸ್ಯ ಮತ್ತು ಶಾಸಕರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಬೀದರ್​ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ನಡೆದಿದೆ. ಕೆಕೆಆರ್​ಡಿಬಿ ಮೈಕ್ರೋ ಯೋಜನೆ ಅಡಿ ರಸ್ತೆ ಕಾಮಗಾರಿ ಗುದ್ದಲಿ ‌ಪೂಜೆಗೆ ಶಾಸಕ ಸಿದ್ದು ಪಾಟೀಲ್​​ ತಡವಾಗಿ ಬಂದಿದ್ದು, ಎಂಎಲ್​ಸಿ ಚಂದ್ರಶೇಖರ್ ಪಾಟೀಲ್ ಶಾಸಕರಿಗಾಗಿ ಕಾದು ಕುಳಿತಿದ್ದರು. ಕಾರ್ಯಕ್ರಮಕ್ಕೆ ಬಂದ ಶಾಸಕರ ಬಳಿ ಸಮಯ ಪಾಲನೆ ಮಾಡಿ ಎಂದು ಚಂದ್ರಶೇಖರ್ ಹೇಳಿದ ಕಾರಣ ಉಭಯ ನಾಯಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Sep 08, 2026 05:19 PM

Follow Us