ದರ್ಶನ್ ತೂಗುದೀಪ: ನಟನನ್ನು ಬಳ್ಳಾರಿಗೆ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಿದ್ದು ಗೊತ್ತೇ ಇಲ್ಲವೆಂದ ಗೃಹಸಚಿವ!

ದರ್ಶನ್ ತೂಗುದೀಪ: ಜಮೀರ್ ಅಹ್ಮದ್ ಖಾನ್ ಬಳ್ಳಾರಿಯ ಉಸ್ತುವಾರಿ ಸಚಿವರಾಗಿರುವುದಕ್ಕೆ ದರ್ಶನ್ ರನ್ನು ಅಲ್ಲಿಗೆ ಶಿಫ್ಟ್ ಮಾಡಲಾಗಿದೆ ಎಂಬ ಅರೋಪವನ್ನು ಅಲ್ಲಗಳೆದ ಪರಮೇಶ್ವರ್, ಜಿಲ್ಲೆಗೊಬ್ಬ ಉಸ್ತುವಾರಿ ಸಚಿವರಿರುತ್ತಾರೆ, ಅದರಲ್ಲಿ ವಿಶೇಷತೆ ಏನು ಬಂತು ಎಂದು ಪ್ರಶ್ನಿಸಿದರು.

ದರ್ಶನ್ ತೂಗುದೀಪ: ನಟನನ್ನು ಬಳ್ಳಾರಿಗೆ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಿದ್ದು ಗೊತ್ತೇ ಇಲ್ಲವೆಂದ ಗೃಹಸಚಿವ!
|

Updated on: Aug 29, 2024 | 12:18 PM

ಬೆಂಗಳೂರು: ದರ್ಶನ್ ಬಗ್ಗೆ ಕೇಳುತ್ತಲೇ ಕೋಪಗೊಳ್ಳುತ್ತಿದ್ದ ಇಲ್ಲವೇ ಅಸಮಾಧಾನದಿಂದ ಉತ್ತರಿಸುತ್ತಿದ್ದ ಗೃಹಸಚಿವ ಜಿ ಪರಮೇಶ್ವರ್ ಇಂದು ಫಾರ್ ಎ ಚೇಂಜ್ ಮುಗಳ್ನಗುತ್ತ ಮಾತಾಡಿದರು. ದರ್ಶನ್ ರನ್ನು ಬಳ್ಳಾರಿಗೆ ಕಳಿಸಿದ್ದು ಅವರನ್ನು ನಿರಾಳವಾಗಿಸಿರಬಹುದು. ದರ್ಶನ್ ಜೊತೆ 8-10 ಕೈದಿಗಳನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹಗಳಿಗೆ ವರ್ಗಾಯಿಸಲಾಗಿದೆ, ಆ ನಿರ್ಧಾರಗಳನ್ನು ಜೈಲು ಅಧಿಕಾರಿಗಳು ತೆಗೆದುಕೊಂಡಿದ್ದಾರೆಯೇ ಹೊರತು ತನ್ನ ಅಥವಾ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಪರಮೇಶ್ವರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Darshan Thoogudeepa: ಬಳ್ಳಾರಿ ಜೈಲು ಸೇರಿದ ದರ್ಶನ್​ಗೆ ಹೊಸ ಕೈದಿ ಸಂಖ್ಯೆ

Follow us