ಹುಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ 12 ಗುಂಟೆ ಜಾಗ ಅಸಲಿಗೆ ಯಾರಿಗೆ ಸೇರಿದ್ದು?

ಈ ಜಾಗಕ್ಕೆ ನೀವು ಅದು ಹೇಗೆ ಬೇಲಿ ಹಾಕ್ತೀರಿ, ಇದು ನನಗೆ ಸೇರಿದ್ದು. ಸರ್ಕಾರದ್ದು ಅನ್ನೋದಿಕ್ಕೆ ದಾಖಲೆ ಇದೆಯಾ? ಇದ್ದರೆ ನನಗೆ ತೋರಿಸಿ ಅಂತ ಅವರು ಹೇಳುತ್ತಿದ್ದಾರೆ. ಅಧಿಕಾರಿಗಳು ಅವರ ಮನವೊಲಿಸುವ ಪ್ರಯತ್ನಗಳು ಫೇಲ್ ಆಗುತ್ತವೆ. ಗೀತಾ ದೂರದಲ್ಲಿ ನಿಂತು ಅಭಿನಂದನ್ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.

| Edited By: Arun Kumar Belly

Updated on:Apr 25, 2022 | 10:17 PM

ಮೈಸೂರು: ಇಲ್ಲೊಂದು ವಾಗ್ವಾದ ನಡೆಯುತ್ತಿದೆ. ಓಕೆ, ಈ ವಿಡಿಯೋದ ಲೊಕೇಷನ್ ಬಗ್ಗೆ ನಿಮಗೆ ಮೊದಲು ಹೇಳ್ತೀವಿ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಹುರಾ ಮುಖ್ಯರಸ್ತೆ ಸರ್ವೆ ನಂಬರ್ 355/2 ರ 12 ಗುಂಟೆ ಜಾಗವಿದು. ಈ ಜಾಗದ ಬಗ್ಗೆ ವಿವಾದ ಶುರುವಾಗಿದೆ. ಇದು ಸರ್ಕಾರೀ ಜಾಗವೆಂದು ಹುಲ್ಲಹಳ್ಳಿ ಗ್ರಾಮ ಪಂಚಾಯಿತಿಯ (Hullahali GP) ಪಿಡಿಒ ಗೀತಾ (Geeta) ಅನ್ನುವವರು ಅತಿಕ್ರಮಣ ನಡೆಯಬಾರದು ಅನ್ನೋ ಕಾರಣಕ್ಕೆ ಬೇಲಿ ಬಿಗಿಸಲು ಇತರ ತಮ್ಮ ಸ್ಟಾಫ್ನೊಂದಿಗೆ ಬಂದಿದ್ದಾರೆ. ಏತನ್ಮಧ್ಯೆ, ಜಾಗ ನನಗೆ ಸೇರಿದ್ದು ಎನ್ನುತ್ತಾ ಅಲ್ಲಿಗೆ ಬರುವ ಈ ಶ್ವೇತವಸ್ತ್ರಧಾರಿ ಅಲ್ಲಿಗೆ ಬಂದು ನೆಲದ ಮೇಲೆ ಕೂತು ಪ್ರತಿಭಟನೆ ಆರಂಭಿಸುತ್ತಾರೆ. ಅಂದಹಾಗೆ, ಈ ವ್ಯಕ್ತಿಯ ಹೆಸರು ಅಭಿನಂದನ್ ಪಾಟೀಲ್ (Abhinandan Patil). ಇವರ ತಂದೆ ಬಸವರಾಜ ಅವರು ಕೆಪಿಸಿಸಿ ಸದಸ್ಯರಂತೆ.

ಈ ಜಾಗಕ್ಕೆ ನೀವು ಅದು ಹೇಗೆ ಬೇಲಿ ಹಾಕ್ತೀರಿ, ಇದು ನನಗೆ ಸೇರಿದ್ದು. ಸರ್ಕಾರದ್ದು ಅನ್ನೋದಿಕ್ಕೆ ದಾಖಲೆ ಇದೆಯಾ? ಇದ್ದರೆ ನನಗೆ ತೋರಿಸಿ ಅಂತ ಅವರು ಹೇಳುತ್ತಿದ್ದಾರೆ. ಅಧಿಕಾರಿಗಳು ಅವರ ಮನವೊಲಿಸುವ ಪ್ರಯತ್ನಗಳು ಫೇಲ್ ಆಗುತ್ತವೆ. ಗೀತಾ ದೂರದಲ್ಲಿ ನಿಂತು ಅಭಿನಂದನ್ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ.

ಜಾಗ ಕುರಿತಂತೆ ಪ್ರಕರಣ ನ್ಯಾಯದಲ್ಲಿದೆ, ನಾನು ಈಗಾಗಲೇ ನೊಟೀಸ್ ಸರ್ವ್ ಮಾಡಿದ್ದೇನೆ, ಎಂದು ಅಭಿನಂದನ್ ಹೇಳುತ್ತಿರುವರಾದರೂ ಅವರು ಸಹ ಜಾಗ ತನಗೆ ಸೇರಿದ್ದು ಅಂತ ಪ್ರೂವ್ ಮಾಡಲು ಯಾವುದೇ ಕಾಗದ ಪತ್ರ ತೋರಿಸುತ್ತಿಲ್ಲ. ಅವರು ಬಂದು ಗಲಾಟೆ ಮಾಡಬಹುದೆನ್ನುವ ಸುಳಿವು ಗ್ರಾಮ ಪಂಚಾಯಿತಿಗೆ ಮೊದಲೇ ಇದ್ದಿರಬೇಕು.

ಹಾಗಾಗೇ ಅವರನ್ನು ಪೊಲೀಸರನ್ನು ಅಲ್ಲಿಗೆ ಕರೆಸಿಕೊಂಡಿದ್ದಾರೆ. ಆದರೆ ಇಬ್ಬರು ಪೊಲೀಸರು ಮೂಕಪ್ರೇಕ್ಷಕರಾಗಿ ಅಭಿನಂದನ್ ಮತ್ತು ಅಧಿಕಾರಿಗಳ ನಡುವೆ ನಡೆಯುತ್ತಿರುವ ವಾಗ್ವಾದವನದನು ನೋಡುತ್ತಿದ್ದಾರೆ. ಅಧಿಕಾರಿಗಳು ಬೇಲಿ ಹಾಕದೆ ವಾಪಸ್ಸು ಹೋದರೆಂಬ ಮಾಹಿತಿ ನಮಗೆ ಲಭ್ಯವಾಗಿದೆ.

ಇದನ್ನೂ ಓದಿ:    40 ಪರ್ಸೆಂಟ್ ಆರೋಪ! ಬಹಿರಂಗ ಚರ್ಚೆಗೆ ಬರುವಂತೆ ಸಿದ್ದರಾಮಯ್ಯಗೆ ಸವಾಲ್ ಹಾಕಿದ ದಕ್ಷಿಣ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಎನ್ಆರ್ ರಮೇಶ್

Published On - 10:11 pm, Mon, 25 April 22

Follow us
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
‘​ರಾಜ್​ಕುಮಾರ್ ಚಿತ್ರಕ್ಕೆ ಥಿಯೇಟರ್​ ಸಿಗಲು ವಾಟಾಳ್​ ಕಾರಣ’; ಚಿನ್ನೇಗೌಡ
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಜಿಟಿಡಿ ಪ್ರಕಾರ ಬಿಜೆಪಿ-ಜೆಡಿಎಸ್ ಮೈತ್ರಿ ಅಸೆಂಬ್ಲಿ ಚುನಾವಣೆಗೂ ಅನ್ವಯ!
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಯಾಕೆ ಮನವರಿಕೆ ಮಾಡುತ್ತಿಲ್ಲ?ಮಧು ಬಂಗಾರಪ್ಪ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಕಾವೇರಿ ವಿವಾದವನ್ನು ಕೋರ್ಟ್ ಹೊರಗಡೆ ಬಗೆಹರಿಸಿಕೊಳ್ಳಲಾಗದು: ತೇಜಸ್ವೀ ಸೂರ್ಯ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಶಿವಕುಮಾರ್ ಯೋಚಿಸುವುದು ಬೇಡ: ಹೆಚ್ ಡಿ ಕೆ
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು
ದಸರಾ: ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯ: ಮರದ ರಂಬೆ, ಕೊಂಬೆಗಳ ಕಟಾವು