‘ಕಾಟೇರ’ ಸಿನಿಮಾಕ್ಕೆ ಮೊದಲು ಇಡಬೇಕಿಂದಿದ್ದ ಹೆಸರು ಬೇರೆಯೇ ಇತ್ತು
Kaatera: ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಹೆಸರು ಹಾಗೂ ಕತೆಯ ಸುತ್ತ ವಿವಾದಗಳು ಸುತ್ತಿಕೊಂಡಿವೆ. ಅಸಲಿಗೆ ‘ಕಾಟೇರ’ ಸಿನಿಮಾಕ್ಕೆ ಬೇರೊಂದು ಹೆಸರನ್ನು ಇಡಲು ಉದ್ದೇಶಿಸಿದ್ದರಂತೆ ನಿರ್ದೇಶಕ ತರುಣ್ ಸುಧೀರ್, ಆ ಹೆಸರು ಯಾವುದು? ಅದು ಬದಲಾಗಿದ್ದು ಯಾಕೆ?
‘ಕಾಟೇರ’ (Kaatera) ಸಿನಿಮಾ ದೊಡ್ಡ ಯಶಸ್ಸು ಗಳಿಸಿದೆ. ಅದರ ಬೆನ್ನಲ್ಲೆ ಕೆಲವು ವಿವಾದಗಳು ಸಿನಿಮಾ ಅನ್ನು ಸುತ್ತಿಕೊಂಡಿವೆ. ‘ಕಾಟೇರ’ ಸಿನಿಮಾದ ಹೆಸರು ಹಾಗೂ ಕತೆಯ ಬಗ್ಗೆ ದರ್ಶನ್ (Darshan) ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವೆ ಬಿಸಿ-ಬಿಸಿ ಮಾತುಗಳು ಅದಲು-ಬದಲಾಗಿವೆ. ಇದೀಗ ‘ಕಾಟೇರ’ ಸಿನಿಮಾದ ನಿರ್ದೇಶಕ ತರುಣ್ ಸುಧೀರ್, ‘ಕಾಟೇರ’ ಸಿನಿಮಾದ ಹೆಸರು ಹಾಗೂ ಕತೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಸಲಿಗೆ ‘ಕಾಟೇರ’ ಸಿನಿಮಾದ ಕತೆ ಮಾಡಿದಾಗ ಅದಕ್ಕೆ ಇಡಬೇಕೆಂದಿದ್ದ ಹೆಸರು ಬೇರೆಯೇ ಆಗಿತ್ತಂತೆ. ತರುಣ್ ಸುಧೀರ್ ‘ಕಾಟೇರ’ ಸಿನಿಮಾಕ್ಕೆ ‘ಚೌಡಯ್ಯ’ ಎಂದು ಹೆಸರಿಟ್ಟಿದ್ದರಂತೆ. ಆದರೆ ‘ಕಾಟೇರ’ ಹೆಸರು ಸೂಚಿಸಿದ್ದು ನಟ ದರ್ಶನ್. ಅದಕ್ಕೆ ಕಾರಣವನ್ನೂ ಸಹ ತರುಣ್ ಸುಧೀರ್ ಟಿವಿ9 ಜೊತೆಗಿನ ಮಾತುಕತೆಯಲ್ಲಿ ವಿವರಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ

