ಎಸ್ಐಟಿ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಭವಾನಿ ರೇವಣ್ಣ ತಮ್ಮ ತೊಂದರೆ ಹೆಚ್ಚಿಸಿಕೊಳ್ಳುತ್ತಿದ್ದಾರೆ!

ಎಸ್ಐಟಿ ತಮ್ಮನ್ನು ಬಂಧಿಸಲಿದೆ ಎಂಬ ಭೀತಿ ಭವಾನಿಯವರನ್ನು ಕಾಡುತ್ತಿದ್ದು ಅದೇ ಕಾರಣಕ್ಕೆ ಅವರ ಮುಂದೆ ಪ್ರತ್ಯಕ್ಷರಾಗಲೊಲ್ಲರು ಎನ್ನಲಾಗುತ್ತಿದೆ. ಅದರೆ ಈ ಕಣ್ಣಾಮುಚ್ಚಾಲೆ ಆಟದಿಂದ ಪ್ರಯೋಜನವೇನೂ ಇಲ್ಲ, ಯಾಕೆಂದರೆ ಅಧಿಕಾರಿಗಳಂತೂ ವಿಚಾರಣೆ ನಡೆಸದೆ ಬಿಡಲಾರರು, ಅವರ ತಾಳ್ಮೆಯ ಪರೀಕ್ಷೇ ತೆಗೆದುಕೊಳ್ಳುತ್ತಿರುವ ಭವಾನಿ ತಮ್ಮ ಕಷ್ಟಗಳನ್ನು ಇಮ್ಮಡಿಸಿಕೊಳ್ಳುತ್ತಿದ್ದಾರೆ.

ಎಸ್ಐಟಿ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿರುವ ಭವಾನಿ ರೇವಣ್ಣ ತಮ್ಮ ತೊಂದರೆ ಹೆಚ್ಚಿಸಿಕೊಳ್ಳುತ್ತಿದ್ದಾರೆ!
|

Updated on: Jun 01, 2024 | 4:14 PM

ಹಾಸನ: ಪೊಲೀಸರು ಮತ್ತು ಕಾನೂನು ಜೊತೆ ಕಣ್ಣಾಮುಚ್ಚಾಲೆ ಅಡೋದು ಹೆಚ್ ಡಿ ರೇವಣ್ಣ (HD Revanna) ಕುಟುಂಬ ಹವ್ಯಾಸವಿರಬಹುದು. ಅಗಾಧ ಲೈಂಗಿಕ ಅಪರಾಧಗಳನ್ನೆಸಗಿದ (sexual offences) ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ರಾತ್ರೋರಾತ್ರಿ ಜರ್ಮನಿಗೆ ಪಲಾಯನಗೈಯುತ್ತಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಎಸ್ಐಟಿ ಅಧಿಕಾರಿಗಳು ಹೊಳೆನರಸಿಪುರದಲ್ಲಿರುವ ರೇವಣ್ಣರ ಚೆನ್ನಾಂಬಿಕಾ ನಿವಾಸಕ್ಕೆ ಅಗಮಿಸಿದಾಗ ಭವಾನಿ ರೇವಣ್ಣ ಮೇಡಂ (Bhavani Revanna) ನಾಪತ್ತೆ! ಅವರು ನಿಯಮಿತವಾಗಿ ಬಳಸುವ ಕಾರು ಮನೆಯ ಪಾರ್ಕಿಂಗ್ ಲಾಟ್ ನಲ್ಲಿದೆ. ಅವರ ಕಾರಿನೊಂದಿಗೆ ಪ್ರಜ್ವಲ್ ರೇವಣ್ಣ ಬಳಸುವ ಕಾರು ಸಹ ಇದೆ. ಬೆಳಗ್ಗೆ ಸುಮಾರು 11 ಗಂಟೆಗೆ ಮನೆ ಅವರಣ ಪ್ರವೇಶಿಸಿದ ಎಸ್ಐಟಿ ಅಧಿಕಾರಿಗಳು ಕಾದು ಕಾದು ಊಟಕ್ಕೂ ಹೋಗಿಬಂದರು, ಅದರೆ ಭವಾನಿಯವರು ವಾಪಸ್ಸಾಗಲಿಲ್ಲ. ಎಸ್ಐಟಿ ತಮ್ಮನ್ನು ಬಂಧಿಸಲಿದೆ ಎಂಬ ಭೀತಿ ಭವಾನಿಯವರನ್ನು ಕಾಡುತ್ತಿದ್ದು ಅದೇ ಕಾರಣಕ್ಕೆ ಅವರ ಮುಂದೆ ಪ್ರತ್ಯಕ್ಷರಾಗಲೊಲ್ಲರು ಎನ್ನಲಾಗುತ್ತಿದೆ. ಅದರೆ ಈ ಕಣ್ಣಾಮುಚ್ಚಾಲೆ ಆಟದಿಂದ ಪ್ರಯೋಜನವೇನೂ ಇಲ್ಲ, ಯಾಕೆಂದರೆ ಅಧಿಕಾರಿಗಳಂತೂ ವಿಚಾರಣೆ ನಡೆಸದೆ ಬಿಡಲಾರರು, ಅವರ ತಾಳ್ಮೆಯ ಪರೀಕ್ಷೇ ತೆಗೆದುಕೊಳ್ಳುತ್ತಿರುವ ಭವಾನಿ ತಮ್ಮ ಕಷ್ಟಗಳನ್ನು ಇಮ್ಮಡಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ಅಶ್ಲೀಲ ವಿಡಿಯೋ ಪ್ರಕರಣ, ಭವಾನಿ ರೇವಣ್ಣ ಸಂಬಂಧಿ ಜೈಲು ಪಾಲು

Follow us
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್