ತಮ್ಮ ಮೇಲೆ ಆರೋಪಗಳು ಬಂದಾಗ ಬೇರೆಯವರ ಕಡೆ ಬೊಟ್ಟು ಮಾಡುವುದು ದೇವೇಗೌಡರ ಕುಟುಂಬಕ್ಕೆ ಅಭ್ಯಾಸವಾಗಿದೆ: ಡಿಕೆ ಸುರೇಶ್

ತಾವು ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದ ಸಂದರ್ಭಗಳಲ್ಲೆಲ್ಲ ಬೇರೆಯವರನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸುವುದು, ಅವರ ಮೇಲೆ ಗೂಬೆ ಕೂರಿಸುವುದು ಆ ಕುಟುಂಬಕ್ಕೆ ಅಭ್ಯಾಸವಾಗಿಬಿಟ್ಟಿದೆ ಎಂದು ಸುರೇಶ್ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇನ್ನು ಮುದೆ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಓಡಾಡಿಕೊಂಡಿರುತ್ತೇನೆ ಎಂದು ಅವರು ಹೇಳಿದರು.

ತಮ್ಮ ಮೇಲೆ ಆರೋಪಗಳು ಬಂದಾಗ ಬೇರೆಯವರ ಕಡೆ ಬೊಟ್ಟು ಮಾಡುವುದು ದೇವೇಗೌಡರ ಕುಟುಂಬಕ್ಕೆ ಅಭ್ಯಾಸವಾಗಿದೆ: ಡಿಕೆ ಸುರೇಶ್
|

Updated on: Jun 24, 2024 | 5:47 PM

ಬೆಂಗಳೂರು: ಸೂರಜ್ ರೇವಣ್ಣ (Suraj Revanna) ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಮಾಜಿ ಸಂಸದ ಡಿಕೆ ಸುರೇಶ್ (DK Suresh) ನೀಡಿದ ಪ್ರತಿಕ್ರಿಯೆ ಆಶ್ಚರ್ಯ ಮೂಡಿಸುತ್ತದೆ. ಅದನ್ನು ಅವರು ವ್ಯಂಗ್ಯವಾಗಿ ಹೇಳಿದರೋ ಅದಥವಾ ಸಹಜವಾಗಿ ಹೇಳಿದರೋ ಗೊತ್ತಾಗಲಿಲ್ಲ. ಅದು ಮಾಜಿ ಪ್ರಧಾನಿಗಳ (Former Prime Minister) ಕುಟುಂಬ ಹಾಗಾಗಿ ನೀವ್ಯಾರೂ ಸೂರಜ್ ಬಗ್ಗೆ ಮಾತಾಡಬೇಡಿ, ನಾವು ಮಾತಾಡಿದರೆ ತಪ್ಪಾಗುತ್ತದೆ, ಅದರೆ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಮತ್ತ್ತು ಅವರೇ ಸೂಕ್ತವಾದ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಸುರೇಶ್ ಹೇಳಿದರು. ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬದ ಬೇರೆ ಸದಸ್ಯರ ದೃಷ್ಟಿಕೋನಗಳು ಭಿನ್ನವಾಗಿರುತ್ತವೆ. ತಾವು ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದ ಸಂದರ್ಭಗಳಲ್ಲೆಲ್ಲ ಬೇರೆಯವರನ್ನು ದೋಷಿಯ ಸ್ಥಾನದಲ್ಲಿ ನಿಲ್ಲಿಸುವುದು, ಅವರ ಮೇಲೆ ಗೂಬೆ ಕೂರಿಸುವುದು ಆ ಕುಟುಂಬಕ್ಕೆ ಅಭ್ಯಾಸವಾಗಿಬಿಟ್ಟಿದೆ ಎಂದು ಸುರೇಶ್ ಹೇಳಿದರು. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಇನ್ನು ಮುದೆ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಓಡಾಡಿಕೊಂಡಿರುತ್ತೇನೆ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರವಿವಾರಗಳಂದೂ ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಿದ್ದ ಡಿಕೆ ಸುರೇಶ್ ಸೋತಿದ್ದು ನೋವು ತಂದಿದೆ: ಜಮೀರ್ ಅಹ್ಮದ್ ಖಾನ್

Follow us