‘ದರ್ಶನ್​ ಅಲ್ಲದಿದ್ರೆ ಇನ್ನೊಬ್ರು ಎಂಬ ಉಡಾಫೆ..’: ಕರಿ ಸುಬ್ಬು ಹೇಳಿದ ಅಚ್ಚರಿಯ ವಿಚಾರ

‘ದರ್ಶನ್​ ಅಲ್ಲದಿದ್ರೆ ಇನ್ನೊಬ್ರು ಎಂಬ ಉಡಾಫೆ..’: ಕರಿ ಸುಬ್ಬು ಹೇಳಿದ ಅಚ್ಚರಿಯ ವಿಚಾರ
| Updated By: ಮದನ್​ ಕುಮಾರ್​

Updated on: Jul 09, 2024 | 7:31 PM

‘ಮಣಿ’ ಸಿನಿಮಾಗೆ ದರ್ಶನ್​ ಹೀರೋ ಆಗಬೇಕಿತ್ತು. ಆ ಸಿನಿಮಾವನ್ನು ಕರಿ ಸುಬ್ಬು ನಿರ್ಮಾಣ ಮಾಡಿದ್ದರು. ಆದರೆ ದರ್ಶನ್​ ಅವರನ್ನು ಬಿಟ್ಟು ಕರಿ ಸುಬ್ಬು ಸಿನಿಮಾ ಮಾಡಿದರು. ಆ ರೀತಿ ಆಗಿದ್ದು ಯಾಕೆ ಎಂಬುದನ್ನು ಕರಿ ಸುಬ್ಬು ಈಗ ವಿವರಿಸಿದ್ದಾರೆ. ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್​ ಜೈಲು ಸೇರಿರುವ ಹಿನ್ನೆಲೆಯಲ್ಲಿ ಕರಿ ಸುಬ್ಬು ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ನಟ ದರ್ಶನ್​ ಅರೆಸ್ಟ್​ ಆಗಿದ್ದರಿಂದ ಕೆಲವು ಸಿನಿಮಾ ತಂಡಗಳಿಗೆ ತೊಂದರೆ ಆಗಿದೆ. ಅವರು ತೊಡಗಿಕೊಂಡಿದ್ದ ಸಿನಿಮಾದ ಶೂಟಿಂಗ್​ ನಿಂತಿದೆ. ಒಟ್ಟಾರೆ ಬೆಳವಣಿಗೆಯ ಕುರಿತು ಕನ್ನಡ ಚಿತ್ರರಂಗದ ಅನೇಕ ವ್ಯಕ್ತಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ನಿರ್ಮಾಪಕ, ನಟ ಕರಿ ಸುಬ್ಬು ಅವರು ಕೂಡ ಈ ಕುರಿತ ಮಾತನಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದರ್ಶನ್​ ಜೊತೆ ಬಹಳ ಹಿಂದೆಯೇ ಕರಿ ಸುಬ್ಬು ಸಿನಿಮಾ ಮಾಡಬೇಕಿತ್ತು. ‘ನಾನು ನಿರ್ಮಾಣ ಮಾಡಿದ ‘ಮಣಿ’ ಸಿನಿಮಾಗೆ ದರ್ಶನ್​ ಹೀರೋ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ನಾವೇ ಅವರನ್ನು ಬಿಟ್ಟೆವು. ಅದು ಅವರ ತಪ್ಪಲ್ಲ. ನಮ್ಮ ತಂಡದ ತಪ್ಪು. ಅವರ ಹಿಂದಿನ ಸಿನಿಮಾಗಳು ರಿಲೀಸ್​ ಆಗಿರಲಿಲ್ಲ. ಟೈಮ್​ ಮುಂದಕ್ಕೆ ಹೋಗುತ್ತಿತ್ತು. ಕಾಯುವ ವ್ಯವಧಾನ ನಮಗೆ ಇರಲಿದೆ. ದರ್ಶನ್​ ಅಲ್ಲದಿದ್ರೆ ಇನ್ನೊಬ್ರು ಎಂಬ ಉಡಾಫೆಯ ಚರ್ಚೆಗೆ ನಾನು ಬಲಿಪಶು ಆಗಬೇಕಾಯಿತು. ಇಲ್ಲದಿದ್ದರೆ ಅಂದೇ ನಾನು ದರ್ಶನ್​ ಸಿನಿಮಾಗೆ ನಿರ್ಮಾಪಕ ಆಗುತ್ತಿದ್ದೆ’ ಎಂದು ಕರಿ ಸುಬ್ಬು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ