ಕಿಚ್ಚ ಸುದೀಪ್​ ಹೆಸರು ಹೇಳಿಕೊಂಡು ಹಣ ಲೂಟಿ; ಸಿಕ್ಕಿ ಬಿದ್ದ ಇಬ್ಬರು ಖದೀಮರು

‘ಸುದೀಪ್​ ಹೆಸರು ಹೇಳಿಕೊಂಡು ನಿಮ್ಮ ಬಳಿ ಯಾರಾದರೂ ಹಣ ಕೇಳಿದರೆ ಅಭಿಮಾನಿ ಸಂಘದ ಅಧ್ಯಕ್ಷರಿಗೆ ಕೂಡಲೇ ಮಾಹಿತಿ ನೀಡಿ. ಮೋಸ ಮಾಡುವವರಿಂದ ದೂರವಿರಿ’ ಎಂದು ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ ಅಧ್ಯಕ್ಷ ರಮೇಶ್​ ಕಿಟ್ಟಿ ಹೇಳಿದ್ದಾರೆ.

ಕಿಚ್ಚ ಸುದೀಪ್​ ಹೆಸರು ಹೇಳಿಕೊಂಡು ಹಣ ಲೂಟಿ; ಸಿಕ್ಕಿ ಬಿದ್ದ ಇಬ್ಬರು ಖದೀಮರು
| Updated By: ಮದನ್​ ಕುಮಾರ್​

Updated on: Aug 04, 2021 | 2:12 PM

ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ​ (Kiccha Sudeep Charitable Society) ವತಿಯಿಂದ ಅನೇಕ ಜನಪರ ಕಾರ್ಯಗಳನ್ನು ಮಾಡಲಾಗುತ್ತಿದೆ. ಎಷ್ಟೋ ಜನರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತಿದೆ. ಇಷ್ಟೆಲ್ಲ ಒಳ್ಳೆಯ ಕಾರ್ಯ ಮಾಡುತ್ತಿರುವ ಕಿಚ್ಚ ಸುದೀಪ್​ ಚಾರಿಟೇಬಲ್​ ಸೊಸೈಟಿ​ ಬಗ್ಗೆ ಜನರಿಗೆ ಗೌರವ ಭಾವನೆ ಇದೆ. ಅದನ್ನೇ ದುರುಪಯೋಗ ಪಡಿಸಿಕೊಳ್ಳಲು ಕೆಲವರು ಸಂಚು ರೂಪಿಸಿದ್ದಾರೆ. ಸುದೀಪ್​ (Kiccha Sudeep) ಹೆಸರು ಹೇಳಿಕೊಂಡು ಕೆಲವು ಖದೀಮರು ಜನರಿಂದ ದುಡ್ಡು ಲೂಟಿ ಮಾಡುತ್ತಿರುವುದು ಈಗ ಗಮನಕ್ಕೆ ಬಂದಿದೆ. ಆ ಬಗ್ಗೆ ಟ್ರಸ್ಟ್​ನ ಅಧ್ಯಕ್ಷ ರಮೇಶ್​ ಕಿಟ್ಟಿ ಎಚ್ಚರಿಕೆ ನೀಡಿದ್ದಾರೆ.

‘ಈ ಸೊಸೈಟಿ​ ಅದರದ್ದೇ ಆದ ನಿಯಮಗಳ ಅಡಿಯಲ್ಲಿ ಕೆಲಸ ಮಾಡುತ್ತಿದೆ. ಈವರೆಗೂ ಯಾರಿಂದಲೂ ಹಣವನ್ನು ಪಡೆದುಕೊಂಡಿಲ್ಲ. ಮುಂದೆಯೂ ತೆಗೆದುಕೊಳ್ಳುವುದಿಲ್ಲ. ಆದರೆ ಸುದೀಪ್​ ಅಭಿಮಾನಿ ಎಂದು ಹೇಳಿಕೊಂಡು ಕೆಲವರು ಮೋಸ ಮಾಡಿದ ಎರಡು ಘಟನೆಗಳು ಬೆಳಕಿಗೆ ಬಂದಿವೆ. ಚನ್ನರಾಯಪಟ್ಟಣದ ಒಬ್ಬ ವ್ಯಕ್ತಿಯು ಚಾಮರಾಜನಗರದ ವ್ಯಕ್ತಿಗೆ ಮೋಸ ಮಾಡಿರುವುದು ದಾಖಲೆಗಳ ಸಮೇತ ಸಿಕ್ಕಿದೆ. ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ರಮೇಶ್​ ಕಿಟ್ಟಿ ಹೇಳಿದ್ದಾರೆ.

ಇದನ್ನೂ ಓದಿ:

Kichcha Sudeep: ಬಿಗ್​ ಬಾಸ್​ ಸ್ಪರ್ಧಿ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್​

ಕನ್ನಡ ಶಾಲೆಗಾಗಿ ಮತ್ತೊಂದು ಮಹತ್ವದ ಕಾರ್ಯ ಕೈಗೊಂಡ ಕಿಚ್ಚ ಸುದೀಪ್​ ಚಾರಿಟೇಬಲ್​ ಟ್ರಸ್ಟ್​

Follow us