Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆಶಿ ಜೈಲಿಗೆ ಹೋಗೋದನ್ನ ಸಿದ್ದರಾಮಯ್ಯ ಬಯಸ್ತಾರೆ ಎಂದ ಕೆಎಸ್​ ಈಶ್ವರಪ್ಪ; ಇಲ್ಲಿದೆ ವಿಡಿಯೋ

ಡಿಕೆಶಿ ಜೈಲಿಗೆ ಹೋಗೋದನ್ನ ಸಿದ್ದರಾಮಯ್ಯ ಬಯಸ್ತಾರೆ ಎಂದ ಕೆಎಸ್​ ಈಶ್ವರಪ್ಪ; ಇಲ್ಲಿದೆ ವಿಡಿಯೋ

ರವಿ ಹೆಚ್ ಮೂಕಿ, ಕಲಘಟಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 20, 2023 | 3:18 PM

ಡಿಕೆ ಶಿವಕುಮಾರ್​ ಅವರು ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕೆಂಬ ಎಂದು ಹೇಳಿದರು. ಈ ಕುರಿತು ಸಿಎಂ ಗೆ ಹೇಳುತ್ತೇನೆ, ಡಿಕೆಶಿ ಅವರಿಗೆ ಸಾಕಷ್ಟು ಭಂಡತನ ಇದೆ. ಅವರು ರಾಜೀನಾಮೆ ಕೊಡಲ್ಲ. ನಿಮಗೇನಾದರೂ ನೈತಿಕತೆ ಇದ್ದರೆ ನಿಮ್ಮ ಸರಕಾರದ ಡಿಸಿಎಮ್​ನ್ನು ಕಿತ್ತು ಬಿಸಾಕಿ ಎಂದು ಕೆಎಸ್​ ಈಶ್ವರಪ್ಪ ಹೇಳಿದರು.

ಬಾಗಲಕೋಟೆ, ಅ.20: ಡಿಸಿಎಂ ಡಿಕೆ ಶಿವಕುಮಾರ್ ​ ಮೇಲಿನ ತನಿಖೆಗೆ ಹೈಕೋರ್ಟ್​ ಅಸ್ತು ಎಂದಿದೆ. ಈ ಕುರಿತು ಜಿಲ್ಲೆಯ ಬಾದಾಮಿಯ ಬನಶಂಕರಿಯಲ್ಲಿ ಮಾತನಾಡಿದ ಬಿಜೆಪಿ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ(KS Eshwarappa)  ಅವರು ‘ಡಿಕೆ ಶಿವಕುಮಾರ್​ ಅವರು ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕೆಂಬ ಎಂದು ಹೇಳಿದರು. ಈ ಕುರಿತು ಸಿಎಂ ಗೆ ಹೇಳುತ್ತೇನೆ, ಡಿಕೆಶಿ ಅವರಿಗೆ ಸಾಕಷ್ಟು ಭಂಡತನ ಇದೆ. ಅವರು ರಾಜೀನಾಮೆ ಕೊಡಲ್ಲ. ನಿಮಗೇನಾದರೂ ನೈತಿಕತೆ ಇದ್ದರೆ ನಿಮ್ಮ ಸರಕಾರದ ಡಿಸಿಎಮ್​ನ್ನು ಕಿತ್ತು ಬಿಸಾಕಿ. ಸಿಬಿಐ ಕೋರ್ಟ್ ಅವರು, ಡಿಕೆಶಿಯವರದ್ದು ತಪ್ಪೇನಿಲ್ಲ ಎಂದು ಆದೇಶ ಕೊಟ್ಟರೆ, ಮಾರನೇ ದಿನವೇ ಅವರನ್ನು ಉಪಮುಖ್ಯಮಂತ್ರಿನೋ ಅಥವಾ ಮುಖ್ಯಮಂತ್ರಿ ಮಾಡುತ್ತಿರೋ ನಿಮ್ಮ ಪಕ್ಷಕ್ಕೆ ಸೇರಿದ್ದು ಎಂದರು. ಇನ್ನು ಇದೇ ವೇಳೆ ಡಿಸಿಎಂ ಅವರ ಅಕ್ರಮ ಕುರಿತು ಸಿಎಂ ಮೌನವಹಿಸಿದ ವಿಷಯ ‘ಹೌದು, ಸಿಎಂ ಸಿದ್ದರಾಮಯ್ಯ ಅವರಿಗೆ ಡಿಕೆಶಿ ಅವರ ಅಕ್ರಮದ ಬಗ್ಗೆ ಗೊತ್ತಿದೆ. ಈ ಹಿನ್ನಲೆ ಅವರು ಮಾತನಾಡುತ್ತಿಲ್ಲ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ