ಬೆಳ್ಳಂಬೆಳಗ್ಗೆ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್ಗೆ ಗುದ್ದಿದ ಬಿಎಂಟಿಸಿ ಬಸ್
BMTC Bus Accident: ಯಲಹಂಕ ನ್ಯೂಟೌನ್ನಿಂದ ಮೆಜೆಸ್ಟಿಕ್ಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ಸೊಂದು ಕಾವೇರಿ ಜಂಕ್ಷನ್ನಲ್ಲಿ ಟ್ರಾಕ್ಟರ್ಗೆ ಡಿಕ್ಕಿಹೊಡೆದು ಕೌಂಪೌಂಡ್ಗೆ ನುಗ್ಗಿದ ಕಾರಣ ಅಪಘಾತ ಸಂಭವಿಸಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಭಾರಿ ಅನಾಹುತ ಸ್ವಲದರಲ್ಲೇ ತಪ್ಪಿದೆ. ಅಪಘಾತದ ಬಗ್ಗೆ ವಿಡಿಯೋ ಸಹಿತ ಮಾಹಿತಿ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನ ಕಾವೇರಿ ಜಂಕ್ಷನ್ನಲ್ಲಿ ಶನಿವಾರ ಮುಂಜಾನೆ ಬಿಎಂಟಿಸಿ ಬಸ್ಸೊಂದು ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಕಾಂಪೌಂಡ್ ಗೇಟ್ಗೆ ಗುದ್ದಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಯಲಹಂಕ ನ್ಯೂಟೌನ್ನಿಂದ ಮೆಜೆಸ್ಟಿಕ್ಗೆ ತೆರಳುತ್ತಿದ್ದ ಬಿಎಂಟಿಸಿ ಬಸ್, ಫುಟ್ಪಾತ್ ಬಳಿ ಕಸ ತುಂಬಿಸುತ್ತಿದ್ದ ಟ್ರ್ಯಾಕ್ಟರ್ಗೆ ಗುದ್ದಿದೆ. ದಟ್ಟವಾದ ಮಂಜಿನ ಕಾರಣ ಟ್ರ್ಯಾಕ್ಟರ್ ಗಮನಕ್ಕೆ ಬರದೆ ಅಪಘಾತ ಸಂಭವಿಸಿದ್ದಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆಯಲ್ಲಿ ಬಸ್ನ ಮುಂಭಾಗ ಜಖಂಗೊಂಡಿದ್ದು, ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಮಾಹಿತಿ ಪಡೆದ ಸದಾಶಿವನಗರ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ ತೆರವು ಕಾರ್ಯ ನಡೆಸಿದ್ದಾರೆ.
Loading...
Unable to load recommendations.
Follow Us
