AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಸ್ತೆ ಬದಿ ನೀರು ಹಾಕುತ್ತಿದ್ದಾಗ ಕಾರು ಡಿಕ್ಕಿ; 30 ಅಡಿ ಮೇಲೆ ಹಾರಿ ಮೃತಪಟ್ಟ ಯುವಕ

ರಸ್ತೆ ಬದಿ ನೀರು ಹಾಕುತ್ತಿದ್ದಾಗ ಕಾರು ಡಿಕ್ಕಿ; 30 ಅಡಿ ಮೇಲೆ ಹಾರಿ ಮೃತಪಟ್ಟ ಯುವಕ

ಸುಷ್ಮಾ ಚಕ್ರೆ
|

Updated on: Dec 06, 2025 | 9:52 PM

Share

ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನಲ್ಲಿ ವೇಗವಾಗಿ ಬಂದ ಕಾರು ರಸ್ತೆಗೆ ನೀರು ಸುರಿಯುತ್ತಿದ್ದ ವ್ಯಕ್ತಿ 30 ಅಡಿ ಎತ್ತರಕ್ಕೆ ಬಿದ್ದ ಘಟನೆ ನಡೆದಿದೆ. ಡಿಕ್ಕಿಯ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಯುವಕ ಸುಮಾರು 30 ಅಡಿ ಎತ್ತರಕ್ಕೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾನೆ. ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ.

ಮಹಾರಾಜ್‌ಗಂಜ್, ಡಿಸೆಂಬರ್ 6: ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ (Accident) ಸಂಭವಿಸಿದೆ. ಅಂಗಡಿಯ ಮುಂಭಾಗದ ರಸ್ತೆಬದಿಯ ಧೂಳಿನ ಮೇಲೆ ಯುವಕನೊಬ್ಬ ನೀರು ಸುರಿಯುತ್ತಿದ್ದಾಗ ವೇಗವಾಗಿ ಬಂದ ಕಾರು ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಆತನಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಆ ಯುವಕ 30 ಅಡಿ ಎತ್ತರಕ್ಕೆ ಹಾರಿಬಿದ್ದು ಸಾವನ್ನಪ್ಪಿದ್ದಾನೆ. ಗೋರಖ್‌ಪುರ-ಸೋನೌಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ