AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಪಟಾಕಿ, ಸ್ವೀಟ್ಸ್ ರೆಡಿ ಮಾಡಿಟ್ಟುಕೊಂಡಿರುವ ಯುವ ಕರ್ನಾಟಕ ವೇದಿಕೆ

ಆರ್​ಸಿಬಿ ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಪಟಾಕಿ, ಸ್ವೀಟ್ಸ್ ರೆಡಿ ಮಾಡಿಟ್ಟುಕೊಂಡಿರುವ ಯುವ ಕರ್ನಾಟಕ ವೇದಿಕೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 03, 2025 | 4:04 PM

Share

ಫೈನಲ್ ಪಂದ್ಯವನ್ನು ಗೆದ್ದರೆ ಟೌನ್ ಹಾಲ್​ನಲ್ಲಿ ಕೇಕ್ ಕಟ್ ಮಾಡುವ, ಕೆಆರ್ ಪುರಂ ಭಾಗದಲ್ಲಿ ನಂದಿನಿ ಮೈಸೂರು ಪಾಕ್ ಹಂಚುವ ಯೋಜನೆಯನ್ನೂ ಯುವ ಕರ್ನಾಟಕ ವೇದಿಕೆಯ ಸದಸ್ಯರು ರೂಪಿಸಿದ್ದಾರೆ. ಹೊಸೂರಿಗೆ ಹೋಗಿ 10,000 ಮೌಲ್ಯದ ಪಟಾಕಿಗಳನ್ನೂ ತರಿಸಿಟ್ಟಿದ್ದಾರೆ. ಸೆಲಿಬ್ರೇಷನ್​ ಮತ್ತೇನು ಬೇಕು? ಒಂದು ಮಾತು ಮಾತ್ರ ನಿಜ, ಅರ್​​ಸಿಬಿ ಗೆದ್ದರೆ-ಗೆದ್ದೇ ಗೆಲ್ಲುತ್ತದೆ ಅಂತ ಇವರೆಲ್ಲ ಹೇಳ್ತಾರೆ, ಇವರಲ್ಲಿ ಯಾರೂ ನಿದ್ರೆ ಮಾಡಲ್ಲ, ರಾತ್ರಿಯೆಲ್ಲ ಸಂಭ್ರಮ ಆಚರಿಸುತ್ತಾರೆ!

ಬೆಂಗಳೂರು, ಜೂನ್ 3: ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ (finals of Indian Premier League) ಶುರುವಾಗಲು ಇನ್ನು 4 ತಾಸು ಬಾಕಿಯಿದೆ. 4 ನೇ ಬಾರಿ ಫೈನಲ್ ಆಡುತ್ತಿರುವ ಆರ್​ಸಿಬಿ ತಂಡ ಇವತ್ತು ಚಾಂಪಿಯನ್​ಶಿಪ್ ಗೆದ್ದೇಗೆಲ್ಲುತ್ತೆ ಎಂದು ಯುವ ಕರ್ನಾಟಕ ವೇದಿಕೆಯ ಸದಸ್ಯರು ಹೇಳುತ್ತಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿ ಈಡುಗಾಯಿ ಹೊಡೆದಿರುವ ಸದಸ್ಯರು, ಆರ್​ಸಿಬಿ ಟ್ರೋಫಿ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ರಾತ್ರಿಯ ಸೆಲಿಬ್ರೇಷನ್​ಗೂ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ವೇದಿಕೆ ಅಧ್ಯಕ್ಷ ರೂಪೇಶ್ ರಾಜಣ್ಣ, ಆರ್​ಸಿಬಿ ಖಚಿತವಾಗಿ ಗೆಲ್ಲುತ್ತದೆ ಅಂತ ಗೊತ್ತಿದೆ, ಆದರೂ ಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸುವ ಗಾಳಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: IPL 2025 Final: ‘ಈ ಸಲ ಕಪ್ ಆರ್‌ಸಿಬಿಗೆ’; ಫೈನಲ್​ಗೂ ಮುನ್ನ ಸಟ್ಟಾ ಬಜಾರ್ ಭವಿಷ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ