ಆರ್ಸಿಬಿ ಗೆದ್ದೇ ಗೆಲ್ಲುವ ವಿಶ್ವಾಸದೊಂದಿಗೆ ಪಟಾಕಿ, ಸ್ವೀಟ್ಸ್ ರೆಡಿ ಮಾಡಿಟ್ಟುಕೊಂಡಿರುವ ಯುವ ಕರ್ನಾಟಕ ವೇದಿಕೆ
ಫೈನಲ್ ಪಂದ್ಯವನ್ನು ಗೆದ್ದರೆ ಟೌನ್ ಹಾಲ್ನಲ್ಲಿ ಕೇಕ್ ಕಟ್ ಮಾಡುವ, ಕೆಆರ್ ಪುರಂ ಭಾಗದಲ್ಲಿ ನಂದಿನಿ ಮೈಸೂರು ಪಾಕ್ ಹಂಚುವ ಯೋಜನೆಯನ್ನೂ ಯುವ ಕರ್ನಾಟಕ ವೇದಿಕೆಯ ಸದಸ್ಯರು ರೂಪಿಸಿದ್ದಾರೆ. ಹೊಸೂರಿಗೆ ಹೋಗಿ 10,000 ಮೌಲ್ಯದ ಪಟಾಕಿಗಳನ್ನೂ ತರಿಸಿಟ್ಟಿದ್ದಾರೆ. ಸೆಲಿಬ್ರೇಷನ್ ಮತ್ತೇನು ಬೇಕು? ಒಂದು ಮಾತು ಮಾತ್ರ ನಿಜ, ಅರ್ಸಿಬಿ ಗೆದ್ದರೆ-ಗೆದ್ದೇ ಗೆಲ್ಲುತ್ತದೆ ಅಂತ ಇವರೆಲ್ಲ ಹೇಳ್ತಾರೆ, ಇವರಲ್ಲಿ ಯಾರೂ ನಿದ್ರೆ ಮಾಡಲ್ಲ, ರಾತ್ರಿಯೆಲ್ಲ ಸಂಭ್ರಮ ಆಚರಿಸುತ್ತಾರೆ!
ಬೆಂಗಳೂರು, ಜೂನ್ 3: ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ (finals of Indian Premier League) ಶುರುವಾಗಲು ಇನ್ನು 4 ತಾಸು ಬಾಕಿಯಿದೆ. 4 ನೇ ಬಾರಿ ಫೈನಲ್ ಆಡುತ್ತಿರುವ ಆರ್ಸಿಬಿ ತಂಡ ಇವತ್ತು ಚಾಂಪಿಯನ್ಶಿಪ್ ಗೆದ್ದೇಗೆಲ್ಲುತ್ತೆ ಎಂದು ಯುವ ಕರ್ನಾಟಕ ವೇದಿಕೆಯ ಸದಸ್ಯರು ಹೇಳುತ್ತಿದ್ದಾರೆ. ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯನ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿ ಈಡುಗಾಯಿ ಹೊಡೆದಿರುವ ಸದಸ್ಯರು, ಆರ್ಸಿಬಿ ಟ್ರೋಫಿ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿ ರಾತ್ರಿಯ ಸೆಲಿಬ್ರೇಷನ್ಗೂ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ವೇದಿಕೆ ಅಧ್ಯಕ್ಷ ರೂಪೇಶ್ ರಾಜಣ್ಣ, ಆರ್ಸಿಬಿ ಖಚಿತವಾಗಿ ಗೆಲ್ಲುತ್ತದೆ ಅಂತ ಗೊತ್ತಿದೆ, ಆದರೂ ಕಷ್ಟದ ಸಮಯದಲ್ಲಿ ನೆರವಿಗೆ ಧಾವಿಸುವ ಗಾಳಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ: IPL 2025 Final: ‘ಈ ಸಲ ಕಪ್ ಆರ್ಸಿಬಿಗೆ’; ಫೈನಲ್ಗೂ ಮುನ್ನ ಸಟ್ಟಾ ಬಜಾರ್ ಭವಿಷ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ