ಸಚಿವ ತಿಮ್ಮಾಪುರ ಪಹಲ್ಗಾಮ್ ಉಗ್ರರ ಸಂದರ್ಶನ ಮಾಡಿಕೊಂಡು ಬಂದಂತಿದೆ: ಅರ್ ಅಶೋಕ
ಪಾಕಿಸ್ತಾನದ ಜೊತೆ ಯುದ್ಧ ಬೇಡವೆನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಭಾರತದ ನಿಜವಾದ ರಾಯಭಾರಿ ಆಗುತ್ತಾರೆ. ಇವರನ್ನ ರಾಯಭಾರಿಯಾಗಿ ಕಳಿಸಿದರೆ ಪಾಕಿಸ್ತಾನ ತನ್ನ ಎಲ್ಲ ಅತ್ಯುನ್ನತ ಗೌರವ ಪುರಸ್ಕಾರಗಳನ್ನು ಇವರಿಗೆ ನೀಡಿ ಅಲ್ಲಿನ ರಸ್ತೆಗಳಲ್ಲಿ ಚಿನ್ನದ ರಥದಲ್ಲಿ ಮೆರವಣಿಗೆ ಮಾಡಿಸುತ್ತದೆ ಎಂದು ವಿರೋಧ ಪಕ್ಷದ ನಾಯಕ ಅರ್ ಅಶೋಕ ವ್ಯಂಗ್ಯವಾಡಿದರು.
ಬೆಂಗಳೂರು, ಏಪ್ರಿಲ್ 28: ಪಹಲ್ಗಾಮ್ ಉಗ್ರರ ದಾಳಿಯಲ್ಲಿ(Pahalgam Terror attack) ಧರ್ಮವನ್ನು ಕೇಳ ಟಾರ್ಗೆಟ್ ಮಾಡಲಾಯಿತು ಎಂದು ಭಯೋತ್ಪಾದಕರ ಗುಂಡಿಗೆ ಬಲಿಯಾದವರ ಕುಟುಂಬಸ್ಥರು ಹೇಳುತ್ತಿದ್ದಾಗ್ಯೂ ಕಾಂಗ್ರೆಸ್ ಕೆಲ ಮಂತ್ರಿಗಳು ಅದನ್ನು ಅಲ್ಲಗಳೆಯುತ್ತಿರುವುದಕ್ಕೆ ಬಿಜೆಪಿ ನಾಯಕ ಅರ್ ಅಶೋಕ ಕಿಡಿಕಾರಿದ್ದಾರೆ. ಉಗ್ರಗಾಮಿಗಳಲ್ಲಿ ಜನರ ಧರ್ಮ ಕೇಳುವಷ್ಟು ಪುರುಸೊತ್ತು ಎಲ್ಲಿತ್ತು ಅಂತ ಸಚಿವ ಆರ್ ಬಿ ತಿಮ್ಮಾಪುರ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅಶೋಕ, ತಿಮ್ಮಾಪುರ ಉಗ್ರರ ಸಂದರ್ಶನ ಮಾಡಿದ್ದಾರೆಯೇ ಅಥವಾ ಉಗ್ರರು ಮಾತಾಡಿರುವುದನ್ನು ಕೇಳಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಇವರಿಗೆ ವೋಟು ಮುಖ್ಯವೇ ಹೊರತು ದೇಶವಲ್ಲ ಎಂದು ಅಶೋಕ ಹೇಳಿದರು.
ಇದನ್ನೂ ಓದಿ: ಶಾಸಕರ ಅಮಾನತು ವಾಪಸ್ಸು ಪಡೆಯುವಂತೆ ಸ್ಪೀಕರ್ ಹಾಗೂ ಕಾನೂನು ಸಚಿವರಿಗೆ ಮನವಿ ಮಾಡಿದ್ದೇವೆ: ಅಶೋಕ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
