Loading video

ಕುಮಾರಸ್ವಾಮಿ ವಿರುದ್ಧ ಜನಾಂಗೀಯ ನಿಂದನೆ, ತಿಪ್ಪೆ ಸಾರಿಸುವ ಕೆಲಸ ಮಾಡಿದ ಜಮೀರ್

|

Updated on: Nov 11, 2024 | 6:54 PM

ಕುಮಾರಸ್ವಾಮಿಯವರ ಕುಟುಂಬವನ್ನು ಖರೀದಿಸುತ್ತೇನೆ ಎಂದು ಹೇಳಿದ ಮಾತಿಗೂ ಜಮೀರ್ ಅಹ್ಮದ್ ಅಸಂಬದ್ಧ ವ್ಯಾಖ್ಯಾನ ನೀಡಿದರು. ದುಡ್ಡಿನ ಮೂಲಕ ಮುಸಲ್ಮಾನರ ವೋಟು ಖರೀದಿಸುತ್ತೇನೆ ಅಂತ ಕುಮಾರಸ್ವಾಮಿಯವರು ಹೇಳಿರುವುದಕ್ಕೆ ಮುಸ್ಲಿಂ ಸಮುದಾಯದ ವೋಟುಗಳು ಮಾರಾಟಕ್ಕಿಲ್ಲ ಅಂತ ಹೇಳಿದ್ದು ಎಂದು ಜಮೀರ್ ಹೇಳಿದರು.

ರಾಮನಗರ: ಭಾಷಣವೊಂದರಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ‘ಕಾಲಿಯ’ ಪದ ಬಳಸಿ ಜನಾಂಗೀಯ ನಿಂದನೆಯ ಗುರುತರವಾದ ಅಪರಾಧವೆಸಗಿರುವ ಸಚಿವ ಜಮೀರ್ ಅಹ್ಮದ್ ಇವತ್ತು ಪತ್ರಿಕಾ ಗೋಷ್ಠಿಯಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿದರು. ಅವರು ನನ್ನ ಹಳೆಯ ಸ್ನೇಹಿತರು ಹಾಗಾಗಿ ಅವರನ್ನು ಯಾವಾಗಲೂ ಕರಿಯಣ್ಣ ಅಂತ ಕರೆಯೋದು, ಅವರು ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ ಎಂದು ಜಮೀರ್ ಹೇಳಿದರು. ಕುಮಾರಸ್ವಾಮಿನ್ನು ತಾನು ಪ್ರೀತಿಯಿಂದ ಹಾಗೆ ಕರೆಯುತ್ತೇನೆಯೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶ ಇಲ್ಲ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಚಿವ ಜಮೀರ್ ಅಹ್ಮದ್ ವಿರುದ್ಧ ಸಿಡಿದೆದ್ದ ಕಾಂಗ್ರೆಸ್ ಶಾಸಕರು: ಎಐಸಿಸಿ ಅಧ್ಯಕ್ಷರಿಗೆ ದೂರು