ಬಸ್​ಗೆ ಚಾಲನೆ ನೀಡಿ ಅದರಲ್ಲೇ ಪ್ರಯಾಣಿಸಿ ಜನರ ಕುಂದು-ಕೊರತೆ ಅಲಿಸಿದ ಸಕಲೇಶಪುರ ಶಾಸಕ ಸಿಮೆಂಟ್ ಮಂಜು

ಶಾಸಕರು ಮಂತ್ರಿಗಳು ಸರ್ಕಾರೀ ಬಸ್ಸುಗಳಲ್ಲಿ ಪ್ರಯಾಣಿಸುವುದು ಹೊಸದೇನಲ್ಲ ಮತ್ತು ವಿಶೇಷವೂ ಅಲ್ಲ. ಯಾಕೆಂದರೆ ಇಂಥ ಹಲವಾರು ಪ್ರಸಂಗಗಳನ್ನು ನಾವು ನೋಡುತ್ತೇವೆ. ಹಿಂದೆ ಕಡೂರು ಶಾಸಕರಾಗಿದ್ದ ವೈಎಸ್​ವಿ ದತ್ತ ಮಂತ್ರಿಯಾದ ಬಳಿಕವೂ ಕೆಎಸ್​ಆರ್​​ಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದರು. ಆದರೆ, ಸಿಮೆಂಟ್ ಮಂಜು ತಮ್ಮ ಬಸ್ ಪ್ರಯಾಣವನ್ನು ಜನರ ಸಮಸ್ಯೆಗಳನನ್ನು ಆಲಿಸಲು ಬಳಸಿದ್ದು ಅಭಿನಂದನೀಯ.

ಬಸ್​ಗೆ ಚಾಲನೆ ನೀಡಿ ಅದರಲ್ಲೇ ಪ್ರಯಾಣಿಸಿ ಜನರ ಕುಂದು-ಕೊರತೆ ಅಲಿಸಿದ ಸಕಲೇಶಪುರ ಶಾಸಕ ಸಿಮೆಂಟ್ ಮಂಜು
|

Updated on: Jul 02, 2024 | 11:12 AM

ಹಾಸನ: ಈ ವಿಡಿಯೋದಲ್ಲಿ ವಿಶಿಷ್ಟವಾಗಿರುವುದೇನೂ ಇಲ್ಲ, ಅದರೆ ಜನಪ್ರತಿನಿಧಿಯಾಗಿರುವ ವ್ಯಕ್ತಿಗೆ ತನ್ನ ಕ್ಷೇತ್ರದ ಬಗ್ಗೆ ಇರಬೇಕಾದ ಕಾಳಜಿಯನ್ನು ಇದು ವಿವರಿಸುತ್ತದೆ. ಬಸ್​ನಲ್ಲಿ ಜನಸಾಮಾನ್ಯನಂತೆ ಪ್ರಯಾಣಿಸುತ್ತರುವವರು ಸಕಲೇಶಪುರ ಭಾಗದ ಜನಕ್ಕೆ ಚೆನ್ನಾಗಿ ಗೊತ್ತಿರುತ್ತಾರೆ ಅದರೆ ರಾಜ್ಯ ಬೇರೆ ಪ್ರದೇಶಗಳ ಜನಕ್ಕೆ ಅಷ್ಟು ಗೊತ್ತಿರಲಾರರು. ಅಂದಹಾಗೆ, ಇವರು ಆಲೂರು ಸಕಲೇಶಪುರ ಕ್ಷೇತ್ರದ ಬಿಜೆಪಿ ಶಾಸಕ ಸಿಮೆಂಟ್ ಮಂಜು. ವಿಷಯವೇನೆಂದರೆ ಶಾಸಕ ಸಕಲೇಶಪುರದಿಂದ ಹೊಂಗಡಹಳ್ಳ ಗ್ರಾಮಕ್ಕೆ ಕಡಗರಹಳ್ಳಿ, ಹಿರಿದನಹಳ್ಳಿ ಮಾರ್ಗವಾಗಿ ಹೋಗುವ ನೂತನ ಬಸ್​ಗೆ ಚಾಲನೆ ನೀಡಿದ್ದಾರೆ. ಬಸ್ ಗೆ ಗ್ರಾಮದ ಮಹಿಳೆಯರು ಪೂಜೆ ಸಲ್ಲಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಬಸ್ ಚಾಲನೆ ನೀಡಿದ ಬಳಿಕ ಶಾಸಕ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ ಮತ್ತು ಜನರ ಕುಂದುಕೊರತೆಗಳನ್ನು ಆಲಿಸುತ್ತಾರೆ. ಅವರು ಬಸ್ಸಲ್ಲಿ ವಿಧಾನಸಭಾ ಸದಸ್ಯರಿಗೆ ಮೀಸಲಿರುವ ಆಸನದಲ್ಲಿ ಕುಳಿತಿರುವುದನ್ನು ಸಹ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಸಕಲೇಶಪುರ ಬಳಿಯ ಕೆಎಫ್​ಡಿಸಿ ನೆಡುತೋಪಿನಲ್ಲಿ ಸರ್ಕಾರೀ ಗೌರವಗಳೊಂದಿಗೆ ಸಾಂಸ್ಕೃತಿಕ ರಾಯಭಾರಿ ಅರ್ಜುನನ ಅಂತ್ರಕ್ರಿಯೆ

Follow us
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!