ವಿಶ್ವವಿಖ್ಯಾತ ಮೈಸೂರು ದಸರಾ 2024ಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಗಜಪಡೆಗಳ ತಾಲೀಮು ಆರಂಭವಾಗಿದೆ. ಮೈಸೂರು ನಗರವನ್ನು ದೀಪಗಳಿಂದ ಶೃಂಗರಿಸಲಾಗುತ್ತಿದೆ. ಇದೀಗ, ಜಿಲ್ಲಾಡಳಿತ ಮೈಸೂರು ದಸರಾ ಕುರಿತಾಗಿ ವಿಶೇಷ ವಿಡಿಯೋ ತಯಾರಿಸಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷೀಕಾಂತ್ ರೆಡ್ಡಿ ಮಾರ್ಗದರ್ಶನದಲ್ಲಿ ಈ ವಿಡಿಯೋ ಮಾಡಲಾಗಿದೆ. ಅಪರ ಜಿಲ್ಲಾಧಿಕಾರಿ ಶಿವರಾಜ್ ಸಾಹಿತ್ಯ ಬರೆದಿದ್ದಾರೆ. ಮೈಸೂರು ದಸರೆಯ ವೈಭವ, ಅರಮನೆ ಮತ್ತು ಚಾಮುಂಡಿಬೆಟ್ಟದ ಕುರಿತು ವಿಡಿಯೋದಲ್ಲಿದೆ. ಈ ಮೂಲಕ ಜಿಲ್ಲಾಡಳಿತ ಮೈಸೂರು ದಸರಾದ ಮಹತ್ವ ಸಾರುತ್ತಿದೆ. ಜಿಲ್ಲಾಡಳಿತ ದಸರಾ ಆಕರ್ಷಣೆ ಹೆಚ್ಚಿಸಲು ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ