ಕೇವಲ 4 ತಿಂಗಳು ಹಿಂದೆ ಮಾವನ ಮಗನನ್ನು ಮದುವೆಯಾಗಿದ್ದ ಲಕ್ಷ್ಮಿಗೆ ಸಾಯಲು ಯಾವ ಕಾರಣವೂ ಇರಲಿಲ್ಲ
ಘಟನೆ ನಡೆದಿರೋದು ಬೈಲಹೊಂಗಲ ತಾಲ್ಲೂಕಿನ ಇಂಚಲ ಗ್ರಾಮದಲ್ಲಿ. ಲಕ್ಷ್ಮಿ ಕ್ರಿಮಿನಾಶಕ ಮಾತ್ರೆ ಸೇವಿಸಿದಾಗ ಮನೆಯಲ್ಲಿ ಒಬ್ಬರೇ ಇದ್ದರಂತೆ. ಗಂಡ ಕೆಲಸಕ್ಕೆ ಹೋಗಿದ್ದರೆ ಕುಟುಂಬದ ಇತರ ಸದಸ್ಯರು ಮದುವೆಯೊಂದಕ್ಕೆ ಹೋಗಿದ್ದರಂತೆ. ಲಕ್ಷ್ಮಿಯನ್ನು ಕೂಡಲೇ ಬೈಲಹೊಂಗಲ ಆಸ್ಪತ್ರೆ ನಂತರ ಬೆಳಗಾವಿಯ ಬಿಮ್ಸ್ಗೆ ಕರೆತರಲಾಗಿದೆಯಾದರೂ ಅವರು ಉಳಿದಿಲ್ಲ, ಪೋಸ್ಟ್ಮಾರ್ಟಂ ರಿಪೋರ್ಟ್ ಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಯುತ್ತಿದ್ದಾರೆ.
ಬೆಳಗಾವಿ, ಏಪ್ರಿಲ್ 11: ಕೇವಲ 4 ತಿಂಗಳು ಹಿಂದೆ ಸೋದರಮಾವನ ಮಗನನ್ನು ಮದುವೆಯಾಗಿದ್ದ 22-ವರ್ಷದ ಯುವತಿ ಲಕ್ಷ್ಮಿ ಹೂಗಾರ್ ಗೆ ಅದ್ಯಾವ ಸಮಸ್ಯೆ ಕಾಡುತ್ತಿತ್ತೋ? ಅವರ ಪತಿ ಮತ್ತು ವೃತ್ತಿಯಲ್ಲಿ ಸೇಲ್ಸ್ಮನ್ ಆಗಿರುವ ಮಂಜುನಾಥ್ (Manjunath) ಹೇಳುವ ಲಕ್ಷ್ಮಿಗೆ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಲು ಬಲವಾದ ಕಾರಣ ಯಾವುದೂ ಇರಲಿಲ್ಲ. ಲಕ್ಷ್ಮಿಯ ತಂದೆಯೇ ಹೇಳುವ ಪ್ರಕಾರ ಗಂಡನ ಮನೆಯಲ್ಲಿ ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಸಮಸ್ಯೆ ಇರಲಿಲ್ಲ. ಲಕ್ಷ್ಮಿಗೆ ಆಗಾಗ್ಗೆ ಜ್ವರ ಬರುತ್ತಿತ್ತಂತೆ ಮತ್ತು ಅದಕ್ಕಾಗಿ ವೈದ್ಯರಿಂದ ಔಷಧಿಯನ್ನು ಮಂಜುನಾಥ ಮನೆಯವರು ಮಾಡಿಸುತ್ತಿದ್ದರು. ಎಲ್ಲ ಸರಿಯಿದ್ದರೂ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಿಸ್ಟ್ರಿಯಾಗಿ ಕಾಣುತ್ತಿದೆ.
ಇದನ್ನೂ ಓದಿ: ಹಾಸನ: ದ್ವಿತೀಯ ಪಿಯುಸಿಯಲ್ಲಿ ಶೇ 79 ಅಂಕ ಬಂದಿದ್ರೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ

