AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 4 ತಿಂಗಳು ಹಿಂದೆ ಮಾವನ ಮಗನನ್ನು ಮದುವೆಯಾಗಿದ್ದ ಲಕ್ಷ್ಮಿಗೆ ಸಾಯಲು ಯಾವ ಕಾರಣವೂ ಇರಲಿಲ್ಲ

ಕೇವಲ 4 ತಿಂಗಳು ಹಿಂದೆ ಮಾವನ ಮಗನನ್ನು ಮದುವೆಯಾಗಿದ್ದ ಲಕ್ಷ್ಮಿಗೆ ಸಾಯಲು ಯಾವ ಕಾರಣವೂ ಇರಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Apr 11, 2025 | 8:56 PM

Share

ಘಟನೆ ನಡೆದಿರೋದು ಬೈಲಹೊಂಗಲ ತಾಲ್ಲೂಕಿನ ಇಂಚಲ ಗ್ರಾಮದಲ್ಲಿ. ಲಕ್ಷ್ಮಿ ಕ್ರಿಮಿನಾಶಕ ಮಾತ್ರೆ ಸೇವಿಸಿದಾಗ ಮನೆಯಲ್ಲಿ ಒಬ್ಬರೇ ಇದ್ದರಂತೆ. ಗಂಡ ಕೆಲಸಕ್ಕೆ ಹೋಗಿದ್ದರೆ ಕುಟುಂಬದ ಇತರ ಸದಸ್ಯರು ಮದುವೆಯೊಂದಕ್ಕೆ ಹೋಗಿದ್ದರಂತೆ. ಲಕ್ಷ್ಮಿಯನ್ನು ಕೂಡಲೇ ಬೈಲಹೊಂಗಲ ಆಸ್ಪತ್ರೆ ನಂತರ ಬೆಳಗಾವಿಯ ಬಿಮ್ಸ್​​ಗೆ ಕರೆತರಲಾಗಿದೆಯಾದರೂ ಅವರು ಉಳಿದಿಲ್ಲ, ಪೋಸ್ಟ್​ಮಾರ್ಟಂ ರಿಪೋರ್ಟ್ ಗಾಗಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾಯುತ್ತಿದ್ದಾರೆ.

ಬೆಳಗಾವಿ, ಏಪ್ರಿಲ್ 11: ಕೇವಲ 4 ತಿಂಗಳು ಹಿಂದೆ ಸೋದರಮಾವನ ಮಗನನ್ನು ಮದುವೆಯಾಗಿದ್ದ 22-ವರ್ಷದ ಯುವತಿ ಲಕ್ಷ್ಮಿ ಹೂಗಾರ್ ಗೆ ಅದ್ಯಾವ ಸಮಸ್ಯೆ ಕಾಡುತ್ತಿತ್ತೋ? ಅವರ ಪತಿ ಮತ್ತು ವೃತ್ತಿಯಲ್ಲಿ ಸೇಲ್ಸ್​ಮನ್ ಆಗಿರುವ ಮಂಜುನಾಥ್ (Manjunath) ಹೇಳುವ ಲಕ್ಷ್ಮಿಗೆ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಲು ಬಲವಾದ ಕಾರಣ ಯಾವುದೂ ಇರಲಿಲ್ಲ. ಲಕ್ಷ್ಮಿಯ ತಂದೆಯೇ ಹೇಳುವ ಪ್ರಕಾರ ಗಂಡನ ಮನೆಯಲ್ಲಿ ಅತ್ತೆ-ಮಾವ ಅಥವಾ ಗಂಡನಿಂದ ಯಾವುದೇ ಸಮಸ್ಯೆ ಇರಲಿಲ್ಲ. ಲಕ್ಷ್ಮಿಗೆ ಆಗಾಗ್ಗೆ ಜ್ವರ ಬರುತ್ತಿತ್ತಂತೆ ಮತ್ತು ಅದಕ್ಕಾಗಿ ವೈದ್ಯರಿಂದ ಔಷಧಿಯನ್ನು ಮಂಜುನಾಥ ಮನೆಯವರು ಮಾಡಿಸುತ್ತಿದ್ದರು. ಎಲ್ಲ ಸರಿಯಿದ್ದರೂ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು ಮಿಸ್ಟ್ರಿಯಾಗಿ ಕಾಣುತ್ತಿದೆ.

ಇದನ್ನೂ ಓದಿ:  ಹಾಸನ: ದ್ವಿತೀಯ ಪಿಯುಸಿಯಲ್ಲಿ ಶೇ 79 ಅಂಕ ಬಂದಿದ್ರೂ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.