ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ ಕುಮಾರಸ್ವಾಮಿ 85,000 ವೋಟು ಪಡೆದಿದ್ದಾನೆ: ಹೆಚ್ ಡಿ ರೇವಣ್ಣ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ತಾನ್ಯಾಕೆ ಪ್ರಚಾರ ಹೋಗಲಿಲ್ಲ ಅನ್ನೋದನ್ನು ರೇವಣ್ಣನ ವಿವರಿಸಿದರು. ದೇವಸ್ಥಾನ ಮತ್ತು ಮನೆಯಲ್ಲಿ ಬಿದ್ದು ಎರಡು ಕಡೆ ಫ್ರ್ಯಾಕ್ಚರ್ ಆಗಿದೆ, 2-3 ದಿನಗಳ ಕಾಲ ಕುಮಾರಣ್ಣ ಜೊತೆ ಹೋಗಿದ್ದೆ, ಆದರೆ ನೋವಿನ ಕಾರಣ ಪ್ರಚಾರಕ್ಕೆ ಹೋಗಲಿಲ್ಲ ಎಂದು ರೇವಣ್ಣ ಹೇಳಿದರು.
ಬೆಂಗಳೂರು: ಜೆಡಿಎಸ್ ಪಕ್ಷ ಚನ್ನಪಟ್ಟಣದಲ್ಲಿ ಸೋತಿರುವುದಕ್ಕೆ ಪಕ್ಷ ಗೊಂದಲದ ಗೂಡಾಗಿದೆ ಅಂತ ಹೇಳುವುದು ತಪ್ಪು ಎಂದು ಶಾಸಕ ಹೆಚ್ ಡಿ ರೇವಣ್ಣ ಹೇಳಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಅವರು, ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ದಯನೀಯ ಸೋಲು ಕಂಡಿಲ್ಲವೇ? ನಿಖಿಲ್ ನನ್ನು ಕುಮಾರಸ್ವಾಮಿ ಬಲಿಪಶು ಮಾಡಿದ್ದಾರೆಂಬ ಮಾತಿಗೆ ಅರ್ಥವೇ ಇಲ್ಲ, ವಿಧಿಯಿಲ್ಲದೆ ಅವನನ್ನು ಸ್ಪರ್ಧೆಗಿಳಿಸಬೇಕಾಯಿತು ಅಂತ ಕುಮಾರಸ್ವಾಮಿ ಹೇಳಿಲ್ಲವೇ? ಕೇವಲ 15 ದಿನ ಪ್ರಚಾರ ಮಾಡಿಯೂ ನಿಖಿಲ್ 85,000 ವೋಟು ಪಡೆದಿದ್ದಾನೆ, ಅದು ಸಾಧನೆಯಲ್ಲವೇ? ಅವನ ಭಾಷಣಗಳನ್ನು ಕೇಳಿದ್ದೇನೆ, ಉತ್ತಮ ಸಂಸದೀಯ ಪಟುಗಳ ಹಾಗೆ ಮಾತಾಡುತ್ತಾನೆ, ಸೋಲಿನಿಂದ ಅವನು ಧೃತಿಗೆಟ್ಟಿಲ್ಲ, ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ ಎಂದು ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಗನನ್ನು ನೋಡಲು ಜೈಲಿಗೆ ಬಂದ ಹೆಚ್ ಡಿ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!

ರಾಯರೆಡ್ಡಿ ಇಂಗ್ಲಿಷಲ್ಲಿ ಮಾತು; ಯತ್ನಾಳ್ ಸಹ ಇಂಗ್ಲಿಷ್ ಭಾಷೆಯಲ್ಲೇ ಉತ್ತರ!

ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್ಸಿಬಿ ಬಾಯ್ಸ್

ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ನಿರ್ಣಯ ಅಂಗೀಕಾರ, ಜೋಶಿ ಏನಂದ್ರು?

ನೀರು ಉಳಿಸುವ ಅಭಿಯಾನಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ; ಡಿಕೆಶಿ
