AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಲಕ್ಷ್ಮೀ ಯೋಜನೆ ತನಗೆ ಬೇಡವೆಂದು ನಯವಾಗಿ ತಿರಸ್ಕರಿಸಿ, ಸ್ವಾಭಿಮಾನ ಮೆರೆದ ಅಜ್ಜಿ ಏನು ಹೇಳಿದರು ಕೇಳಿ

ಗೃಹಲಕ್ಷ್ಮೀ ಯೋಜನೆ ತನಗೆ ಬೇಡವೆಂದು ನಯವಾಗಿ ತಿರಸ್ಕರಿಸಿ, ಸ್ವಾಭಿಮಾನ ಮೆರೆದ ಅಜ್ಜಿ ಏನು ಹೇಳಿದರು ಕೇಳಿ

ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಸಾಧು ಶ್ರೀನಾಥ್​|

Updated on:Sep 02, 2023 | 12:47 PM

Share

ಕೊಪ್ಪಳ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್​​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ತನಗೆ ಬೇಡವೆಂದು ವೃದ್ಧ ಮಹಿಳೆಯೊಬ್ಬರು ನಯವಾಗಿ ತಿರಸ್ಕರಿಸಿ, ಸ್ವಾಭಿಮಾನ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದ ವಯೋವೃದ್ದೆಯಿಂದ ಈ ಸ್ವಾಭಿಮಾನದ ಮಾತು ಕೇಳಿಬಂದಿದೆ. ಶಿವಮ್ಮ‌ ಸಜ್ಜನ್ ಎಂಬುವವರೇ ಆ ಸ್ವಾಭಿಮಾನಿ ಮಹಿಳೆ.

ಕೊಪ್ಪಳ: ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್​​ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ತನಗೆ ಬೇಡವೆಂದು ವೃದ್ಧ ಮಹಿಳೆಯೊಬ್ಬರು ನಯವಾಗಿ ತಿರಸ್ಕರಿಸಿ, ಸ್ವಾಭಿಮಾನ ಮೆರೆದಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಡಶೇಷಿ ಗ್ರಾಮದ ವಯೋವೃದ್ದೆಯಿಂದ ಈ ಸ್ವಾಭಿಮಾನದ ಮಾತು ಕೇಳಿಬಂದಿದೆ. ಶಿವಮ್ಮ‌ ಸಜ್ಜನ್ ಎಂಬುವವರೇ ಆ ಸ್ವಾಭಿಮಾನಿ ಮಹಿಳೆ.

ದೇವರು ನನಗೆ ಎಲ್ಲವೂ ಕರುಣಿಸಿದ್ದಾನೆ. ಇರೋ ಸವಲತ್ತಿನಲ್ಲೆ ಸಂತೃಪ್ತ ಜೀವನ ನಡೆಸುತ್ತಿದ್ದೇನೆ. ಸರ್ಕಾರದ ಗೃಹಲಕ್ಷ್ಮೀ ಯೋಜನಾ ಮೊತ್ತವಾದ ೨ ಸಾವಿರ ರೂ ಬೇಡವೆಂದು ಅಜ್ಜಿ ತಿಳಿಸಿದ್ದಾರೆ. ಈ ಹಿಂದೆ ತಾನು ಕೂಡಿಟ್ಟಿದ್ದ ಹಣವನ್ನೆಲ್ಲ ಗ್ರಾಮದ ಕೆರೆ ಅಭಿವೃಧ್ಧಿಗೆ ನೀಡಿ ಮಾದರಿಯಾಗಿದ್ದ ಅಜ್ಜಿ, ಸಧ್ಯ ಮತ್ತೊಮ್ಮೆ ಮಾದರಿ ನಿರ್ಧಾರ ತೆಗದುಕೊಂಡಿದ್ದಾರೆ. ಅಜ್ಜಿಯ ಈ ನಿರ್ಧಾರಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 02, 2023 12:44 PM