ಮಂಗಳೂರು, ಸೆ.29: ಮಂಗಳೂರು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜಿನಲ್ಲಿ ಓಣಂ ಹಬ್ಬದ ಸಂಭ್ರಮ ಮನೆ ಮಾಡಿದೆ. ಓಣಂ ರಜೆ ಮುಗಿಸಿ ಬಂದ ವಿದ್ಯಾರ್ಥಿಗಳಿಗಾಗಿ ಕಾಲೇಜು ಆಡಳಿತ ಮಂಡಳಿ ಕಾಲೇಜಿನಲ್ಲೇ ಓಣಂ ಹಬ್ಬವನ್ನು ಆಚರಿಸಿತ್ತು. ವಿದ್ಯಾರ್ಥಿಗಳು ನಿತ್ಯದ ಸಮವಸ್ತ್ರ ಬಿಟ್ಟು ಕಲರ್ ಡ್ರೆಸ್ ನಲ್ಲಿ ಮಿಂಚುತ್ತಿದ್ರು. ಮೊದಲಿಗೆ ಕಾಲೇಜಿನ ಕ್ಯಾಂಪಸ್ನಲ್ಲಿ ಪುರಾಣ ಪುರುಷ ಮಹಾಬಲಿಯನ್ನು ಮೆರವಣಿಗೆಯಲ್ಲಿ ಕೆರತರಲಾಯಿತು. ಬಳಿಕ ತೆಂಗಿನ ಹೂವನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇನ್ನು ಚಂಡೆ ಕುಣಿತ, ಮಾಪ್ಲೆ ಸಾಂಗ್ ಸೇರಿದಂತೆ ಸಾಂಸ್ಕೃತಿಕ ವೈಭವವನ್ನು ಮಾಡಲಾಯ್ತು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ