ಕದನವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ಭಾರತ ತಿರುಗೇಟು; ಪೇಶಾವರಕ್ಕೆ ನುಗ್ಗಿ ಪ್ರತಿದಾಳಿ
ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಿದ್ದಂತೆ ಭಾರತ ಪ್ರತಿದಾಳಿ ನಡೆಸಿದ್ದು, ಪೇಶಾವರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ಇಂದು ರಾತ್ರಿ ಶ್ರೀನಗರದಲ್ಲಿ ಸಂಪೂರ್ಣ ಕತ್ತಲೆಯಾದ ನಡುವೆ ಭಾರತದ ವಾಯು ರಕ್ಷಣಾ ಪಡೆಗಳು ಪಾಕಿಸ್ತಾನಿ ಡ್ರೋನ್ಗಳನ್ನು ತಡೆಹಿಡಿಯುತ್ತಿದ್ದಂತೆ ಕೆಂಪು ಗೆರೆಗಳು ಕಾಣಿಸಿಕೊಂಡವು ಮತ್ತು ಸ್ಫೋಟಗಳು ಕೇಳಿಬಂದವು. ಶ್ರೀನಗರದಲ್ಲಿ 40-50 ಪಾಕಿಸ್ತಾನಿ ಡ್ರೋನ್ಗಳು ಕಂಡುಬಂದಿವೆ ಎಂದು ವರದಿಗಳು ಸೂಚಿಸಿವೆ.
ಶ್ರೀನಗರ, ಮೇ 10: ಇಂದು ಸಂಜೆಯಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನವಿರಾಮ (Ceasefire) ಘೋಷಿಸಲಾಗಿತ್ತು. ಆದರೆ, ಆ ಒಪ್ಪಂದವನ್ನು ಒಂದು ದಿನವೂ ಉಳಿಸಿಕೊಳ್ಳಲು ಯೋಗ್ಯತೆಯಿಲ್ಲದ ಪಾಕಿಸ್ತಾನ ಇಂದು ರಾತ್ರಿಯೇ ಜಮ್ಮುವಿನಲ್ಲಿ ಡ್ರೋನ್ (Drone Attack) ಮತ್ತು ಶೆಲ್ ದಾಳಿ ನಡೆಸಿತ್ತು. ಇದರಿಂದ ಮತ್ತೆ ಪ್ರತೀಕಾರಕ್ಕೆ ಮುಂದಾಗಿರುವ ಭಾರತ ಪಾಕಿಸ್ತಾನದ ಪೇಶಾವರದಲ್ಲಿ ಡ್ರೋನ್ ದಾಳಿ ನಡೆಸಿದೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸುತ್ತಿದ್ದಂತೆ ಭಾರತ ಪ್ರತಿದಾಳಿ ನಡೆಸಿದ್ದು, ಪೇಶಾವರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ. ಇಂದು ರಾತ್ರಿ ಶ್ರೀನಗರದಲ್ಲಿ ಸಂಪೂರ್ಣ ಕತ್ತಲೆಯಾದ ನಡುವೆ ಭಾರತದ ವಾಯು ರಕ್ಷಣಾ ಪಡೆಗಳು ಪಾಕಿಸ್ತಾನಿ ಡ್ರೋನ್ಗಳನ್ನು ತಡೆಹಿಡಿಯುತ್ತಿದ್ದಂತೆ ಕೆಂಪು ಗೆರೆಗಳು ಕಾಣಿಸಿಕೊಂಡವು ಮತ್ತು ಸ್ಫೋಟಗಳು ಕೇಳಿಬಂದವು. ಶ್ರೀನಗರದಲ್ಲಿ 40-50 ಪಾಕಿಸ್ತಾನಿ ಡ್ರೋನ್ಗಳು ಕಂಡುಬಂದಿವೆ ಎಂದು ವರದಿಗಳು ಸೂಚಿಸಿವೆ.
ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತ ಮತ್ತು ಪಾಕಿಸ್ತಾನ ಕದನವಿರಾಮ ಒಪ್ಪಂದಕ್ಕೆ ಬಂದ ಕೆಲವೇ ಗಂಟೆಗಳ ನಂತರ, ಗುಜರಾತ್ನ ಕಚ್ ಗಡಿಯಲ್ಲಿರುವ ಹರಾಮಿ ನಲಾ ಮತ್ತು ಖಾವ್ಡಾ ಪ್ರದೇಶಗಳ ಬಳಿ ಪಾಕಿಸ್ತಾನಿ ಡ್ರೋನ್ಗಳು ಕಂಡುಬಂದವು. ಇದಲ್ಲದೆ, ಶ್ರೀನಗರದಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಕಚ್ನಲ್ಲಿ 8 ಡ್ರೋನ್ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಭಾರತೀಯ ವಾಯು ರಕ್ಷಣಾ ವ್ಯವಸ್ಥೆಯು 3 ಡ್ರೋನ್ಗಳನ್ನು ಹೊಡೆದುರುಳಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ