ದರ್ಶನ್ ಸಿನಿಮಾಗೆ ಸಹಿ ಹಾಕೋಕೆ ಬೆಂಗಳೂರಿಗೆ ಬಂದಿದ್ದ ಪವಿತ್ರಾ ಜಯರಾಮ್
ಪವಿತ್ರಾ ಜಯರಾಮ್ ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅವರು ಬೆಂಗಳೂರಿನಿಂದ ಹೈದರಾಬದ್ಗೆ ಹೊರಟಿದ್ದರು. ಕಾರಿನಲ್ಲಿ ಪ್ರಯಾಣ ಮಾಡುವಾಗ ಅವರ ಜೊತೆ 2013ರಿಂದ ಕೆಲಸ ಮಾಡುತ್ತಾ ಬಂದಿದ್ದ ಚಂದು ಹೆಸರಿನ ತೆಲುಗು ನಟ ಕೂಡ ಇದ್ದರು. ಅವರು ಘಟನೆ ಬಗ್ಗೆ ವಿವರಿಸಿದ್ದಾರೆ.
ನಟಿ ಪವಿತ್ರಾ ಜಯರಾಮ್ (Pavitra Jayaram) ಅವರು ಇತ್ತೀಚೆಗೆ ನಿಧನ ಹೊಂದಿದ್ದಾರೆ. ಅವರು ಬೆಂಗಳೂರಿನಿಂದ ಹೈದರಾಬದ್ಗೆ ಹೊರಟಿದ್ದರು. ಕಾರಿನಲ್ಲಿ ಪ್ರಯಾಣ ಮಾಡುವಾಗ ಅವರ ಜೊತೆ ಪತಿ ಚಂದು ಹೆಸರಿನ ಕೂಡ ಇದ್ದರು. ಅವರು ಅಪಘಾತದ ಬಗ್ಗೆ ವಿವರಿಸಿದ್ದಾರೆ. ಬೆಂಗಳೂರಿಗೆ ಬಂದಿದ್ದು ಏಕೆ ಎಂಬ ಬಗ್ಗೆ ಗೆಳೆಯ ಚಂದು ವಿವರಿಸಿದ್ದಾರೆ. ‘ದರ್ಶನ್ ಸರ್ ಸಿನಿಮಾಗೆ ಆಫರ್ ಬಂದಿತ್ತು. ಅದಕ್ಕೆ ಸಹಿ ಹಾಕೋಕೆ ಬೆಂಗಳೂರಿಗೆ ಬಂದಿದ್ದೆವು. ಅಗ್ರಿಮೆಂಟ್ಗೆ ಸಹಿ ಹಾಕಬೇಕಿತ್ತು. ಹೀಗಾಗಿ ಬೆಂಗಳೂರಿಗೆ ಬಂದಿದ್ದೆವು. ಪವಿತ್ರಾ ಅವರಿಗೆ ಜೆಮಿನಿ ಟಿವಿಯಿಂದ ಆಫರ್ ಬಂತು. ಹೀಗಾಗಿ, ಬೆಂಗಳೂರಿನಿಂದ ಹೈದರಾಬಾದ್ಗೆ ಹೊರಟಿದ್ದೆವು’ ಎಂದಿದ್ದಾರೆ ಚಂದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:38 am, Tue, 14 May 24
Latest Videos