KC ವ್ಯಾಲಿ ನೀರಿನಿಂದ ಮೈದುಂಬಿದ S. ಅಗ್ರಹಾರ ಕೆರೆ.. ಗಣ್ಯರಿಂದ ಬಾಗಿನ ಅರ್ಪಣೆ

[lazy-load-videos-and-sticky-control id=”UZmBj2YfFug”] ಕೋಲಾರ: ಜಿಲ್ಲೆಯ S.ಅಗ್ರಹಾರ ಕೆರೆ‌ ತುಂಬಿ ಹರಿದ‌‌ ಹಿನ್ನಲೆಯಲ್ಲಿ ಇಂದು ಗಣ್ಯರಿಂದ ಬಾಗಿನ ಅರ್ಪಣೆ ಮಾಡಲಾಯಿತು. ಜಿಲ್ಲೆಯ S.ಅಗ್ರಹಾರ ಕೆರೆಗೆ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಶ್ರೀನಿವಾಸಗೌಡ ಪಕ್ಷಾತೀತವಾಗಿ ಆಗಮಿಸಿ ಬಾಗಿನ ಅರ್ಪಿಸಿದ್ರು. ಇತ್ತೀಚೆಗೆ ಸುರಿದ ಮಳೆ ಹಾಗೂ ಸಿದ್ದರಾಮಯ್ಯರ ಸರ್ಕಾರದ ಅವಧಿಯ ವೇಳೆ ಶರವೇಗದಲ್ಲಿ ಪೂರ್ಣವಾಗಿದ್ದ KC ವ್ಯಾಲಿ ಯೋಜನೆಯನ್ನು ಹೈದರಾಬಾದ್​ನ ಮೆಗಾ ಎಂಜಿನಿಯರಿಂಗ್ ಌಂಡ್​ ಇನ್​ಫ್ರಾಸ್ಟ್ರಕ್ಚರ್​ ಕಂಪನಿ ಸವಾಲಾಗಿ ಸ್ವೀಕರಿಸಿ ಪೂರ್ಣಗೊಳಿಸಿತ್ತು. […]

KC ವ್ಯಾಲಿ ನೀರಿನಿಂದ ಮೈದುಂಬಿದ S. ಅಗ್ರಹಾರ ಕೆರೆ.. ಗಣ್ಯರಿಂದ ಬಾಗಿನ ಅರ್ಪಣೆ
ಸಾಧು ಶ್ರೀನಾಥ್​

Updated on: Sep 14, 2020 | 8:40 AM

[lazy-load-videos-and-sticky-control id=”UZmBj2YfFug”]

ಕೋಲಾರ: ಜಿಲ್ಲೆಯ S.ಅಗ್ರಹಾರ ಕೆರೆ‌ ತುಂಬಿ ಹರಿದ‌‌ ಹಿನ್ನಲೆಯಲ್ಲಿ ಇಂದು ಗಣ್ಯರಿಂದ ಬಾಗಿನ ಅರ್ಪಣೆ ಮಾಡಲಾಯಿತು.

ಜಿಲ್ಲೆಯ S.ಅಗ್ರಹಾರ ಕೆರೆಗೆ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಶ್ರೀನಿವಾಸಗೌಡ ಪಕ್ಷಾತೀತವಾಗಿ ಆಗಮಿಸಿ ಬಾಗಿನ ಅರ್ಪಿಸಿದ್ರು. ಇತ್ತೀಚೆಗೆ ಸುರಿದ ಮಳೆ ಹಾಗೂ ಸಿದ್ದರಾಮಯ್ಯರ ಸರ್ಕಾರದ ಅವಧಿಯ ವೇಳೆ ಶರವೇಗದಲ್ಲಿ ಪೂರ್ಣವಾಗಿದ್ದ KC ವ್ಯಾಲಿ ಯೋಜನೆಯನ್ನು ಹೈದರಾಬಾದ್​ನ ಮೆಗಾ ಎಂಜಿನಿಯರಿಂಗ್ ಌಂಡ್​ ಇನ್​ಫ್ರಾಸ್ಟ್ರಕ್ಚರ್​ ಕಂಪನಿ ಸವಾಲಾಗಿ ಸ್ವೀಕರಿಸಿ ಪೂರ್ಣಗೊಳಿಸಿತ್ತು.

ಅದರ ಪರಿಣಾಮ ಇಂದು KC ವ್ಯಾಲಿಯ ನೀರು ಜಿಲ್ಲೆಯ ಕೆರೆಗಳನ್ನು ತುಂಬಿಸಿದೆ. ಈ ಹಿನ್ನೆಲೆಯಲ್ಲಿ 1, 200 ಎಕರೆ ವಿಸ್ತೀರ್ಣದ ಜಿಲ್ಲೆಯ ಬಹು ದೊಡ್ಡಕೆರೆ ಎಂದೇ ಖ್ಯಾತಿ ಪಡೆದಿರುವ S.ಅಗ್ರಹಾರ ಕೆರೆಗೆ ಇಂದು ಬಾಗಿನ ಅರ್ಪಿಸಲಾಗಿದೆ. ಇದುವರೆಗೂ KC ವ್ಯಾಲಿ ಯೋಜನೆಯಿಂದ 75 ಕೆರೆಗಳು ತುಂಬಿದೆ. ಜೊತೆಗೆ, ಮೊದಲ ಹಂತದಲ್ಲಿ 126 ಕೆರೆ ಹಾಗೂ ಎರಡನೆ ಹಂತದಲ್ಲಿ 225 ಕೆರೆಗಳನ್ನ ತುಂಬಿಸುವ ಯೋಜನೆ ಹಾಕಿಕೊಳ್ಳಲಾಗಿದೆ.

 

 

 

 

 

 

 

Published On - 7:09 pm, Sun, 13 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us