AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಕೃಷ್ಣ ಭವನ ನಿರ್ಮಾಣಕ್ಕೆ ಡಾ ಸುಧಾಕರ್​ರಿಂದ ₹ 50 ಲಕ್ಷ ಕಲೆಕ್ಟ್ ಮಾಡುವಂತೆ ಡಿಸಿಗೆ ಮನವಿ ಮಾಡಿದ ಪ್ರದೀಪ್ ಈಶ್ವರ್!

ಶ್ರೀಕೃಷ್ಣ ಭವನ ನಿರ್ಮಾಣಕ್ಕೆ ಡಾ ಸುಧಾಕರ್​ರಿಂದ ₹ 50 ಲಕ್ಷ ಕಲೆಕ್ಟ್ ಮಾಡುವಂತೆ ಡಿಸಿಗೆ ಮನವಿ ಮಾಡಿದ ಪ್ರದೀಪ್ ಈಶ್ವರ್!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 26, 2024 | 6:07 PM

ಒಟ್ಟಿನಲ್ಲಿ ಈಶ್ವರ್​ಗೆ ಸಂಸದ ಸುಧಾಕರ್ ವಿರುದ್ಧ ಕ್ಯಾತೆ ತೆಗೆಯುವುದು ಬೇಕಿತ್ತು ಅನಿಸುತ್ತೆ. ನಂತರ ಅವರು, ತಾನು ರಾಜಕೀಯಕ್ಕೆ ಹೊಸಬನಿರಬಹುದು, ಆದರೆ ಕೆಲಸ ತನ್ನಿಂದಾಗುವ ಹಾಗಿದ್ದರೆ ಮಾಡುತ್ತೇನೆ ಅನ್ನುತ್ತೇನೆ, ಆಗಲಾರದು ಅಂತೆನಿಸಿದರೆ ಸುಮ್ಮನಿದ್ದು ಬಿಡುತ್ತೇನೆ ಎಂದು ಹೇಳಿದರು.

ಚಿಕ್ಕಬಳ್ಳಾಪುರ: ಆಗಲೇ ಹೇಳಿದ ಹಾಗೆ ಚಿಕ್ಕಬಳ್ಳಾಪುರದ ಶಾಸಕ ಮತ್ತು ಸಂಸದನ ನಡುವಿನ ರಾಜಕೀಯ ಸಮರ ಮುಗಿಯಲಾರದು. ಇವತ್ತು ನಗರದಲ್ಲಿ ಆಯೋಜಿಲಾಗಿದ್ದ ಕೃಷ್ಣ ಜನ್ಮಾಷ್ಟಮಿ ಅಚರಣೆ ಕಾರ್ಯಕ್ರಮದಲ್ಲಿ ಡಾ ಕೆ ಸುಧಾಕರ್ ಮತ್ತು ಪ್ರದೀಪ್ ಈಶ್ವರ್ ಭಾಗಿಯಾಗಿದ್ದರು. ಮೊದಲು ಮಾತಾಡಿದ ಸಂಸದ, ನಗರದಲ್ಲಿ ಶ್ರೀಕೃಷ್ಣ ಭವನ ನಿರ್ಮಾಣಕ್ಕೆ ₹ 50ಲಕ್ಷ ನೀಡುವ ಆಶ್ವಾಸನೆ ನೀಡಿರಬಹುದು. ಅವರ ಭಾಷಣದ ಕ್ಲಿಪ್ ನಮಗೆ ಸಿಕ್ಕಿಲ್ಲ. ಶಾಸಕ ಪ್ರದೀಪ್ ಈಶ್ವರ್ ಮಾತಾಡುವಾಗ, ಕ್ಷೇತ್ರದ ಅಭಿವೃದ್ಧಿಗೆ ₹ 800 ಕೋಟಿ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದ ಸಚಿವ ಡಾ ಎಂಸಿ ಸುಧಾಕರ್ ಅವರಿಗೆ ಅಭಿನಂದನೆ ಸಲ್ಲಿಸುತ್ತಾ ಕೃಷ್ಣ ಜನ್ಮಾಷ್ಟಮಿಯ ಅಧಿಕೃತ ಆಚರಣೆ ಶುರುವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಎಂದು ಹೇಳುತ್ತಾರೆ.

ನಗರದಲ್ಲಿ ಶ್ರೀ ಕೃಷ್ಣ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಿದ್ದಾರೆ, ಅನುದಾನ ತಂದು ಅದನ್ನು ನಿರ್ಮಿಸುವ ಜವಾಬ್ದಾರಿ ತನ್ನದು ಎಂದು ಹೇಳಿ ಜಿಲ್ಲಾಧಿಕಾರಿಯವರನ್ನು ಉದ್ದೇಶಿಸಿ, ಭವನ ನಿರ್ಮಣಕ್ಕೆ ಯಾರೆಲ್ಲ ದೇಣಿಗೆ ನೀಡುತ್ತೇವೆ ಅಂತ ಮಾತಾಡಿದ್ದಾರೋ ಅವರ ಬಳಿ ಮೊದಲು ಹಣ ಕಲೆಕ್ಟ್ ಮಾಡಿ ಅನ್ನುತ್ತಾರೆ! ಯಾಕೆಂದರೆ ಕೆಲವರು ವೇದಿಕೆ ಮೇಲೆ ಉದ್ವೇಗದಲ್ಲಿ ಮಾತಾಡಿ ನಂತರ ಮರೆತು ಹೋಗುತ್ತಾರೆ ಎಂದು ಈಶ್ವರ್ ತಿವಿದರು.

ಸಂಸದ ಸುಧಾಕರ್ ಹೆಸರು ಉಲ್ಲೇಖಿಸದೆ ಅವರು ಈ ಮಾತು ಹೇಳಿದಾಗ ನೆರೆದಿದ್ದ ಜನರೆಲ್ಲ ಕೇಕೆ ಹಾಕುತ್ತಾ ಅದನ್ನು ಸ್ವಾಗತಿಸುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಾಸಕ ಸ್ಥಾನಕ್ಕೆ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿದ್ರಾ? ರಾಜೀನಾಮೆ ಪತ್ರ ವೈರಲ್!