AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಡ್ಡಿ ಬಗ್ಗೆ ಮಾತನಾಡುವ ಜಮೀರ್ ಅಹ್ಮದ್​ ಖಾನ್,​ ಸಿಟಿ ರವಿ ಜೊತೆ ಚಡ್ಡಿ ಹಾಕಿ ನಿಂತವ್ರಲ್ಲಾ! ಜಮೀರನ್ನ ಹುಟ್ಟಿಸಿದ್ದೇ ಜೆಡಿಎಸ್ ಎಂದ ಚನ್ನಪಟ್ಟಣ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ

ಮುಸ್ಲಿಂ ಹೆಸರೇಳಿ ರಾಜಕೀಯ ಮಾಡ್ತಾ ಇರೋದು ನೀವು. ಚಡ್ಡಿ ಗಿಡ್ಡಿ ಅಂತೆಲ್ಲಾ ಹೇಳಬೇಡಿ. ಜಮೀರ್ ಅವರೇ ನಿಮ್ಮನ್ ಹುಟ್ಟಿಸಿದ್ದೇ ಜೆಡಿಎಸ್. ನಿಮ್ಮ ತಾಯಿನೇ ಜೆಡಿಎಸ್, ಸಿದ್ರಾಮಯ್ಯ ಅವರನ್ನೂ ಹುಟ್ಟಿಸಿದ್ದು ಇದೇ ಜೆಡಿ ಎಸ್ ಪಕ್ಷ. ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು -ಚನ್ನಪಟ್ಟಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮೋರ್ಚಾ ಸೈಯ್ಯದ್ ಫಾಜಿಲ್

ಸೈಯ್ಯದ್​ ನಿಜಾಮುದ್ದೀನ್​, ರಾಮನಗರ
| Updated By: ಸಾಧು ಶ್ರೀನಾಥ್​|

Updated on: Oct 05, 2023 | 9:16 PM

Share

ರಾಮನಗರ: ಚನ್ನಪಟ್ಟಣದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ನಿನ್ನೆ ಬುಧವಾರ ಸೈಯ್ಯದ್ ಫಾಜಿಲ್ ಪತ್ರಿಕಾಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿ ವಿವರ ಹೀಗಿದೆ. ಎನ್ ಆರ್ ಸಿ , ಹಲಾಲ್ ಕಟ್, ಹಿಜಾಬ್ ವಿಚಾರದಲ್ಲಿ ನಮ್ಮ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಮ್ ಜೊತೆ ಇದ್ರು. ಕುಮಾರಸ್ವಾಮಿ ಅವರು ಮುಸ್ಲಿಂ ಪಕ್ಷಕ್ಕೆ ಏನಾದ್ರೂ ದ್ರೋಹ ಮಾಡಿದ್ದಾರಾ? ಅವರೇನು ಬಿಜೆಪಿ ಹೋಗ್ತಾ ಇದ್ದಾರಾ? ಅವರು ಜೆಡಿಎಸ್ ನಲ್ಲೇ ಇದ್ದಾರೆ. ಕಾಂಗ್ರೆಸ್ ನವರು ಬಿಜೆಪಿಗೆ ಹೋಗೇ ಇಲ್ವಾ? ಚನ್ನಪಟ್ಟಣ ವಿಚಾರವಾಗಿ ಕುಮಾರಸ್ವಾಮಿ ಮಾಡಿರುವ ಅಭಿವೃದ್ಧಿ ಯಾರೂ ಮಾಡಿಲ್ಲ.

ಜೆಡಿಎಸ್ ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು…

ಕುಮಾರಸ್ವಾಮಿಯವರು ಚಡ್ಡಿ ಹಾಕ್ತಾರೋ, ಲುಂಗಿ ಹಾಕ್ತಾರೋ ಬೇ್ರೆಯರಿಗೆ ಯಾಕೆ? ಸಿ ಟಿ ರವಿ ಜತೆ ಜಮೀರ್ ಅಹ್ಮದ್ ಚಡ್ಡಿ ಹಾಕಿ ನಿಂತಿದ್ದಾರಲ್ಲ! 2006 ರಲ್ಲಿ ಅವರ ಜತೆನೇ ಇದ್ದೀರಲ್ಲ. ರಾಜ್ಯದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಬದುಕ್ತಾ ಇದ್ದೀವಿ. ಕುಮಾರಸ್ವಾಮಿ ಯವರು ನಮಗೆ ಯಾವತ್ತೂ ಬೇಜಾರ್ ಮಾಡಿಲ್ಲ. ನಾವು ತೋಟಕ್ಕೆ ಹೋದಗಲೆಲ್ಲಾ ಸಿಕ್ತಾರೆ. ಯಾವಾಗ ಬೇಕಾದ್ರೂ ಹೋಗಲಿ ಅವರು ನಮಗೆ ಸಿಕ್ತಾರೆ. ಮುಸ್ಲಿಂ ಹೆಸರೇಳಿ ರಾಜಕೀಯ ಮಾಡ್ತಾ ಇರೋದು ನೀವು. ಚಡ್ಡಿ ಗಿಡ್ಡಿ ಅಂತೆಲ್ಲಾ ಹೇಳಬೇಡಿ. ಜಮೀರ್ ಅವರೇ ನಿಮ್ಮನ್ ಹುಟ್ಟಿಸಿದ್ದೇ ಜೆಡಿಎಸ್. ನಿಮ್ಮ ತಾಯಿನೇ ಜೆಡಿಎಸ್, ಸಿದ್ರಾಮಯ್ಯ ಅವರನ್ನೂ ಹುಟ್ಟಿಸಿದ್ದು ಇದೇ ಜೆಡಿ ಎಸ್ ಪಕ್ಷ. ಇಲ್ದಿದ್ರೆ ಜಮೀರ್ ಬಸ್ ಓಡಿಸಿಕೊಂಡೇ ಇರಬೇಕಿತ್ತು. ಕುಮಾರಸ್ವಾಮಿ ಯವರು ಎಲ್ಲಿ ಹೋಗ್ತಾರೆ ಅನ್ನೋದೇ ಗೊತ್ತಿಲ್ಲ. ನಾವು ಕುಮಾರಸ್ವಾಮಿ ಯವರಿಗೆ ಬೆಂಬಲ ಕೊಡ್ತೀವಿ ಎಂದು ಸೈಯ್ಯದ್ ಫಾಜಿಲ್ ಹೇಳಿದರು.

Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
Daily Devotional: ಶ್ರಾವಣ ಮಾಸದ ಅಮಾವಾಸ್ಯೆ ಪೂಜಾ ವಿಧಿ-ವಿಧಾನ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಶ್ರಾವಣ ಅಮಾವಾಸ್ಯೆಯಂದು ಯಾವೆಲ್ಲಾ ರಾಶಿಗಳಿಗೆ ಶುಭ ತಿಳಿಯಿರಿ
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಇದ್ದಕ್ಕಿದ್ದಂತೆ ಚಲಿಸಿ ಒಬ್ಬ ವ್ಯಕ್ತಿಯ ಜೀವ ಬಲಿ ಪಡೆದ ಟಾಟಾ ಹ್ಯಾರಿಯರ್!
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
‘ಖಂಡಿತವಾಗಿಯೂ ನ್ಯಾಯ ಗೆಲ್ಲುತ್ತದೆ’: ದರ್ಶನ್ ಕೇಸ್ ಬಗ್ಗೆ ರಾಗಿಣಿ ಮಾತು
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ