30 ವರ್ಷಗಳ ಬಳಿಕ ಖುಷ್ಬೂ ಎದುರು ಹೋಗಿ ನಿಂತ ‘ರಣಧೀರ’ ಬಾಲಕ; ನಟಿಯ ರಿಯಾಕ್ಷನ್ ಹೇಗಿತ್ತು?
‘ರಣಧೀರ’ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದರು ಮಂಜುನಾಥ್. ಈ ಸಿನಿಮಾ ತೆರೆಕಂಡು 30 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಖುಷ್ಬೂ (Kushboo Sundar) ಮುಂದೆ ಹೋಗಿ ನಿಂತರು.
ಮಾಸ್ಟರ್ ಮಂಜುನಾಥ್ ಅವರು (Master Manjunath) ‘ರಣಧೀರ’ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದರು. ‘ಏನ್ ಹುಡ್ಗೀರೋ..’ ಎಂದು ಹಾಡು ಹೇಳಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ರವಿಚಂದ್ರನ್ ಹಾಗೂ ಖುಷ್ಬೂ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ ತೆರೆಕಂಡು 30 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಖುಷ್ಬೂ (Kushboo Sundar) ಮುಂದೆ ಹೋಗಿ ನಿಂತರು. ಖುಷ್ಬೂಗೆ ಮೊದಲಿಗೆ ಅವರ ಗುರುತು ಸಿಗಲೇ ಇಲ್ಲ. ಈ ಗ್ಯಾಪ್ನಲ್ಲಿ ಖುಷ್ಬೂ ಅವರನ್ನು ಮಾಸ್ಟರ್ ಮಂಜುನಾಥ್ ಅವರು ಕಾಲೆಳೆದರು. ಆ ಬಳಿಕ ‘ಮೇಡಮ್ ಒಂದು ಹಾಡು ಹೇಳಲೇ’ ಎಂದು ಕೇಳಿದರು. ಖುಷ್ಬೂ ಇದಕ್ಕೆ ಓಕೆ ಎಂದರು. ಆಗ ಮಂಜುನಾಥ್ ಅವರು ‘ಏನ್ ಹುಡ್ಗೀರೋ..’ ಹಾಡನ್ನು ಹಾಡಿದರು. ಆಗ ಖುಷ್ಬೂಗೆ ಮಂಜುನಾಥ್ ಅವರ ಪರಿಚಯ ಸಿಕ್ಕಿತ್ತು. ಈ ಘಟನೆಯನ್ನು ಮಾಸ್ಟರ್ ಮಂಜುನಾಥ್ ಅವರು ನೆನಪಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ
ಹುಬ್ಬಳ್ಳಿ ಮರ್ಯಾದಾ ಹತ್ಯೆ: ಗರ್ಭಿಣಿ ಕೊಂದ 24 ಗಂಟೆಯಲ್ಲೇ ಅರೆಸ್ಟ್

