30 ವರ್ಷಗಳ ಬಳಿಕ ಖುಷ್ಬೂ ಎದುರು ಹೋಗಿ ನಿಂತ ‘ರಣಧೀರ’ ಬಾಲಕ; ನಟಿಯ ರಿಯಾಕ್ಷನ್ ಹೇಗಿತ್ತು?
‘ರಣಧೀರ’ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದರು ಮಂಜುನಾಥ್. ಈ ಸಿನಿಮಾ ತೆರೆಕಂಡು 30 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಖುಷ್ಬೂ (Kushboo Sundar) ಮುಂದೆ ಹೋಗಿ ನಿಂತರು.
ಮಾಸ್ಟರ್ ಮಂಜುನಾಥ್ ಅವರು (Master Manjunath) ‘ರಣಧೀರ’ ಸಿನಿಮಾದಲ್ಲಿ ಬಾಲ ಕಲಾವಿದನಾಗಿ ನಟಿಸಿದ್ದರು. ‘ಏನ್ ಹುಡ್ಗೀರೋ..’ ಎಂದು ಹಾಡು ಹೇಳಿದ್ದರು. ಈ ಸಿನಿಮಾ ಹಿಟ್ ಆಗಿತ್ತು. ರವಿಚಂದ್ರನ್ ಹಾಗೂ ಖುಷ್ಬೂ ಕಾಂಬಿನೇಷನ್ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈ ಸಿನಿಮಾ ತೆರೆಕಂಡು 30 ವರ್ಷಗಳ ಬಳಿಕ ಮಾಸ್ಟರ್ ಮಂಜುನಾಥ್ ಅವರು ಖುಷ್ಬೂ (Kushboo Sundar) ಮುಂದೆ ಹೋಗಿ ನಿಂತರು. ಖುಷ್ಬೂಗೆ ಮೊದಲಿಗೆ ಅವರ ಗುರುತು ಸಿಗಲೇ ಇಲ್ಲ. ಈ ಗ್ಯಾಪ್ನಲ್ಲಿ ಖುಷ್ಬೂ ಅವರನ್ನು ಮಾಸ್ಟರ್ ಮಂಜುನಾಥ್ ಅವರು ಕಾಲೆಳೆದರು. ಆ ಬಳಿಕ ‘ಮೇಡಮ್ ಒಂದು ಹಾಡು ಹೇಳಲೇ’ ಎಂದು ಕೇಳಿದರು. ಖುಷ್ಬೂ ಇದಕ್ಕೆ ಓಕೆ ಎಂದರು. ಆಗ ಮಂಜುನಾಥ್ ಅವರು ‘ಏನ್ ಹುಡ್ಗೀರೋ..’ ಹಾಡನ್ನು ಹಾಡಿದರು. ಆಗ ಖುಷ್ಬೂಗೆ ಮಂಜುನಾಥ್ ಅವರ ಪರಿಚಯ ಸಿಕ್ಕಿತ್ತು. ಈ ಘಟನೆಯನ್ನು ಮಾಸ್ಟರ್ ಮಂಜುನಾಥ್ ಅವರು ನೆನಪಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್ ನೋಡಿ

