RCB vs CSK: ಆರ್​ಸಿಬಿ-ಸಿಎಸ್​ಕೆ ರಣರೋಚಕ ಪಂದ್ಯ ನೋಡಲು ಬಂದ ಸಿದ್ದರಾಮಯ್ಯ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸದ್ಯ ಐಪಿಎಲ್​ ಮಹಾಸಮರ ನಡೆಯುತ್ತಿದೆ. ಪ್ಲೇಆಫ್​​ಗೆ ಕಾಲಿಡಲು, ಆರ್​ಸಿಬಿ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ರೋಚಕ ಪಂದ್ಯ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಆರ್​ಸಿಬಿ-ಸಿಎಸ್​ಕೆ ಪಂದ್ಯ ವಿಕ್ಷೀಸಿದ್ದು, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ H.C.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಕೆ.ವೆಂಕಟೇಶ್‌ ಸಾಥ್ ನೀಡಿದ್ದಾರೆ. ಇನ್ನು ನಟ ಶಿವರಾಜ್​ ಕುಮಾರ್​ ಕೂಡ ಪಂದ್ಯ ವೀಕ್ಷಣೆ ಮಾಡಿದ್ದಾರೆ.

RCB vs CSK: ಆರ್​ಸಿಬಿ-ಸಿಎಸ್​ಕೆ ರಣರೋಚಕ ಪಂದ್ಯ ನೋಡಲು ಬಂದ ಸಿದ್ದರಾಮಯ್ಯ
| Updated By: ಗಂಗಾಧರ​ ಬ. ಸಾಬೋಜಿ

Updated on: May 18, 2024 | 9:57 PM

ಬೆಂಗಳೂರು, ಮೇ 18: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸದ್ಯ ಐಪಿಎಲ್ (IPL) ಮಹಾಸಮರ ನಡೆಯುತ್ತಿದೆ. ಪ್ಲೇಆಫ್​​ಗೆ ಕಾಲಿಡಲು, ಆರ್​ಸಿಬಿ (RCB) ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ರೋಚಕ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯ ನೋಡಲು ಬೆಳಗ್ಗೆಯಿಂದಲೇ ಚಿನ್ನಸ್ವಾಮಿ ಸ್ಟೇಡಿಯಂನತ್ತ ಸಾವಿರಾರು ಫ್ಯಾನ್ಸ್​ ಜಮಾಯಿಸಿದ್ದರು. ಕೇಲವ ಫ್ಯಾನ್ಸ್ ಅಷ್ಟೇ ಅಲ್ಲದೇ ಕೆಲ ಸೆಲೆಬ್ರಿಟಿಗಳೊಂದಿಗೆ ರಾಜಕೀಯ ನಾಯಕರು ಕೂಡ ರೋಚಕ ಪಂದ್ಯ ನೋಡಲು ಚಿನ್ನಸ್ವಾಮಿ ಸ್ಟೇಡಿಯಂ ಆಗಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಆರ್​ಸಿಬಿ-ಸಿಎಸ್​ಕೆ ಪಂದ್ಯ ವಿಕ್ಷೀಸಿದ್ದು, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ H.C.ಮಹದೇವಪ್ಪ, ಡಾ.ಜಿ.ಪರಮೇಶ್ವರ್, ಕೆ.ವೆಂಕಟೇಶ್‌ ಸಾಥ್ ನೀಡಿದ್ದಾರೆ. ಇನ್ನು ಸ್ಯಾಂಡಲ್​ವುಡ್​ ನಟ ಶಿವರಾಜ್​ ಕುಮಾರ್​ ಕೂಡ ಪಂದ್ಯ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

Follow us