ದುಡ್ಡಿಲ್ಲ ಎಂದು ಗಂಡನನ್ನೇ ಬಿಟ್ಟು ಹೋದ ಪತ್ನಿ? ಗೋಳು ತೋಡಿಕೊಳ್ಳುತ್ತಿರುವ ಕನ್ನಡದ ಹಾಸ್ಯ ಕಲಾವಿದ ರವಿ

ಫೋಟೋಗ್ರಾಫರ್​ ಆಗಿದ್ದ ರವಿ ಅವರು ರಿಯಾಲಿಟಿ ಶೋವೊಂದರಲ್ಲಿ ಹಾಸ್ಯ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದರು. ಗಂಟಲು ಆಪರೇಷನ್​ ಮತ್ತು ಲಾಕ್​ಡೌನ್​ನಿಂದಾಗಿ ಅವರ ಬದುಕಿನಲ್ಲಿ ಕಷ್ಟ ಶುರುವಾಯಿತು.

ದುಡ್ಡಿಲ್ಲ ಎಂದು ಗಂಡನನ್ನೇ ಬಿಟ್ಟು ಹೋದ ಪತ್ನಿ? ಗೋಳು ತೋಡಿಕೊಳ್ಳುತ್ತಿರುವ ಕನ್ನಡದ ಹಾಸ್ಯ ಕಲಾವಿದ ರವಿ
| Updated By: ಮದನ್​ ಕುಮಾರ್​

Updated on: Aug 23, 2021 | 10:33 PM

ಹಾಸ್ಯ ಕಲಾವಿದ, ಕಾಳಸಿದ್ದನಹುಂಡಿ ಗ್ರಾಮದ ರವಿಯನ್ನು ಯುವತಿಯೊಬ್ಬಳು ಪ್ರೀತಿಸಿದ್ದಳು. ಇಬ್ಬರ ಕುಟುಂಬದಲ್ಲೂ ಆ ಪ್ರೀತಿಗೆ ವಿರೋಧವಿತ್ತು. ಹೆತ್ತವರನ್ನು ಎದುರು ಹಾಕಿಕೊಂಡೇ ಈ ಜೋಡಿ ಮದುವೆ ಆಗಿತ್ತು. ರಿಜಿಸ್ಟರ್​ ಮ್ಯಾರೇಜ್​ ಆದ ಬಳಿಕ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ಇಬ್ಬರೂ ನಾಲ್ಕು ವರ್ಷ ಸಂಸಾರ ಮಾಡಿದ್ದರು. ಆದರೆ ಈಗ ಪತ್ನಿಯಿಂದ ತನಗೆ ಮೋಸ ಆಗಿದೆ ಎಂದು ರವಿ ಗೋಳು ತೋಡಿಕೊಳ್ಳುತ್ತಿದ್ದಾರೆ. ರವಿ ಬಳಿ ಈಗ ಹಣ ಇಲ್ಲ ಎಂಬ ಕಾರಣಕ್ಕೆ ಆ ಯುವತಿ ಬೇರೆ ವ್ಯಕ್ತಿ ಜೊತೆ ಮದುವೆ ಆಗಿದ್ದಾಳಂತೆ!

ಫೋಟೋಗ್ರಾಫರ್​ ಆಗಿ ಕೆಲಸ ಮಾಡುತ್ತಿದ್ದ ರವಿ ಅವರು ರಿಯಾಲಿಟಿ ಶೋವೊಂದರಲ್ಲಿ ಹಾಸ್ಯ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದರು.  ಗಂಟಲು ಆಪರೇಷನ್​ ಬಳಿಕ ರವಿಗೆ ಕಿರುತೆರೆಯಲ್ಲಿ ಬೇಡಿಕೆ ಕಡಿಮೆ ಆಯಿತು. ಲಾಕ್​ಡೌನ್​ನಿಂದಾಗಿ ಫೋಟೋಗ್ರಾಫರ್​ ಕೆಲಸವೂ ಇಲ್ಲದಾಯಿತು. ಹಾಗಾಗಿ ತಮ್ಮ ಬಳಿ ಹಣ ಇಲ್ಲ ಎಂಬ ಕಾರಣಕ್ಕೆ ಪತ್ನಿ ಬಿಟ್ಟುಹೋಗಿದ್ದಾಳೆ ಎಂದು ರವಿ ಆರೋಪ ಮಾಡುತ್ತಿದ್ದಾರೆ.

‘ಅವರ ಸಂಬಂಧಿಕರೋ ಏನೋ ನನಗೆ ಗೊತ್ತಿಲ್ಲ. ಮಂಡ್ಯದ ಸ್ವರ್ಣಸಂದ್ರದಲ್ಲಿ ವಾಸವಾಗಿದ್ದಾರೆ. ಅವರು ಸರ್ಕಾರಿ ನೌಕರ. ಅವರನ್ನು ಈಕೆ ಮದುವೆ ಆಗಿದ್ದಾಳೆ. ಇಂಥ ಮನಸ್ಥಿತಿ ಇರುವ ಹುಡುಗಿಯರಿಗೆ ಪಾಠ ಆಗಬೇಕು’ ಎಂದು ಪತ್ನಿ ವಿರುದ್ಧ ಕಾನೂನು ಹಾದಿಯಲ್ಲಿ ಹೋರಾಡಲು ರವಿ ಮುಂದಾಗಿದ್ದಾರೆ.

ಇದನ್ನೂ ಓದಿ:

‘ಪ್ರೀತಿಸಿದ ಬಳಿಕ ಮೋಸ ಮಾಡ್ಬೇಡಿ ಪ್ಲೀಸ್​’; ಕಣ್ಣೀರು ಹಾಕುತ್ತ ನೋವಿನ ಘಟನೆ ಹೇಳಿಕೊಂಡ ನಿರಂಜನ್​

ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್​ಡೇ ವಿಶ್​ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?

Follow us
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ