ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್​ಡೇ ವಿಶ್​ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?

Sayesha Saigal Birthday: ಮಗುವಿನ ಜನನದ ಖುಷಿ, ಪತ್ನಿಯ ಜನ್ಮದಿನದ ಸಂಭ್ರಮ ಏನೇ ಇದ್ದರೂ ಆರ್ಯಗೆ ಒಂದು ತಲೆ ನೋವು ತಪ್ಪಿಲ್ಲ. ಅವರ ಮೇಲೆ ಯುವತಿಯೊಬ್ಬರು ಗಂಭೀರ ಆರೋಪ ಹೊರಿಸಿದ್ದಾರೆ. ಆ ಸಂಬಂಧ ಆರ್ಯ ಅವರು ಪೊಲೀಸರಿಂದ ವಿಚಾರಣೆ ಎದುರಿಸಿದ್ದಾರೆ.

ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್​ಡೇ ವಿಶ್​ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?
ಮುದ್ದಿನ ಪತ್ನಿ ಸಾಯೆಶಾಗೆ ಬರ್ತ್​ಡೇ ವಿಶ್​ ಮಾಡಿದ ಆರ್ಯ ಪರಸ್ತ್ರೀ ಮೇಲೂ ಕಣ್ಣು ಹಾಕಿ ಮೋಸ ಮಾಡಿದ್ರಾ?
Follow us
| Updated By: ಮದನ್​ ಕುಮಾರ್​

Updated on: Aug 12, 2021 | 1:21 PM

ಖ್ಯಾತ ನಟ ಆರ್ಯ ಮತ್ತು ‘ಯುವರತ್ನ’ ಸಿನಿಮಾ ನಟಿ ಸಾಯೆಶಾ ಸೈಗಲ್​ (Sayesha Saigal) ಅವರು ಸುಖವಾಗಿ ಸಂಸಾರ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಈ ಜೋಡಿಗೆ ಹೆಣ್ಣು ಮಗು ಜನಿಸಿದೆ. ಆ ಖುಷಿಯಲ್ಲೇ ತೇಲುತ್ತಿರುವ ಸಾಯೆಶಾ ಅವರಿಗೆ ಇಂದು (ಆ.12) ಜನ್ಮದಿನದ ಸಂಭ್ರಮ. ಈ ದಿನವನ್ನು ಇನ್ನಷ್ಟು ರಂಗಾಗಿಸಲು ಆರ್ಯ (Arya) ಅವರು ವಿಶ್​ ಮಾಡಿದ್ದಾರೆ. ‘ಹುಟ್ಟುಹಬ್ಬದ ಶುಭಾಶಯಗಳು. ನನಗಾಗಿ ನೀನು ಹೊಂದಿರುವ ಪ್ರೀತಿ ದಿನದಿನವೂ ಹೆಚ್ಚಾಗಲಿ. ಜೀವನದಲ್ಲಿ ನಿನ್ನನ್ನು ಪಡೆದಿರುವುದಕ್ಕೆ ನಾನು ಅದೃಷ್ಟಶಾಲಿ’ ಎಂದು ಆರ್ಯ ಟ್ವೀಟ್​ ಮಾಡಿದ್ದಾರೆ.

ಮಗುವಿನ ಜನನದ ಖುಷಿ, ಪತ್ನಿಯ ಜನ್ಮದಿನದ ಸಂಭ್ರಮ ಏನೇ ಇದ್ದರೂ ಆರ್ಯಗೆ ಒಂದು ತಲೆ ನೋವು ತಪ್ಪಿಲ್ಲ. ಅವರ ಮೇಲೆ ಯುವತಿಯೊಬ್ಬರು ಗಂಭೀರ ಆರೋಪ ಹೊರಿಸಿದ್ದಾರೆ. 70 ಲಕ್ಷ ರೂ. ಹಣ ಪಡೆದುಕೊಂಡು, ಮದುವೆ ಆಗುವುದಾಗಿ ನಂಬಿಸಿ ಆರ್ಯ ಮೋಸ ಮಾಡಿದ್ದಾರೆ ಎಂದು ಶ್ರೀಲಂಕಾ ಮೂಲದ ಮಹಿಳೆ ಆರೋಪಿಸಿದ್ದಾರೆ. ಅವರೀಗ ಜರ್ಮನಿಯಲ್ಲಿ ನೆಲೆಸಿದ್ದು ಕೆಲ ದಿನಗಳ ಹಿಂದೆ ಆನ್​ಲೈನ್​ ಮೂಲಕ ದೂರು ನೀಡಿದ್ದರು.

ಯುವತಿ ನೀಡಿದ ದೂರಿನ ಅನ್ವಯ ಆರ್ಯ ಅವರನ್ನು ಚೆನ್ನೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಪರಿಮಿತವಾಗಿ ಪ್ರೀತಿಸುವ ಮುದ್ದಿನಂಥ ಪತ್ನಿ ಮನೆಯಲ್ಲಿ ಇರುವಾಗ ಆರ್ಯ ಯಾಕೆ ಪರಸ್ತ್ರೀ ಸಹವಾಸ ಮಾಡಿದರು ಎಂಬ ಅನುಮಾನ ಎಲ್ಲರಲ್ಲೂ ಮೂಡಿದೆ. ಆ ಯುವತಿ ಮಾಡಿರುವ ಆರೋಪ ನಿಜವೋ ಸುಳ್ಳೋ ಎಂಬುದು ತನಿಖೆ ಮೂಲಕ ಗೊತ್ತಾಗಬೇಕಿದೆ. ಆ ಕುರಿತು ಆರ್ಯ ಆಗಲಿ ಅಥವಾ ಅವರ ಕುಟುಂಬದವರಾಗಲಿ ಯಾವುದೇ ಹೇಳಿಕೆಯನ್ನೂ ಸಾರ್ವಜನಿಕವಾಗಿ ನೀಡಿಲ್ಲ.

ಚೆನ್ನೈ ಪೊಲೀಸ್​ ಕಮಿಷನರ್​ ಕಚೇರಿಗೆ ಬಂದ ಆರ್ಯ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಗಂಟೆಗಟ್ಟಲೆ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ‘ಇನ್ನೂ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಯುವತಿ ನೀಡಿದ ದೂರಿಗೆ ಸಂಬಂಧಪಟ್ಟಂತೆ ಆರ್ಯ ಅವರ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್ಯ ನಟಿಸಿದ ‘ಸರ್ಪಟ್ಟ ಪರಂಬರೈ’ ಸಿನಿಮಾ ಇತ್ತೀಚೆಗೆ ಓಟಿಟಿಯಲ್ಲಿ ಬಿಡುಗಡೆಯಾಗಿ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ಆ ಖುಷಿಯ ನಡುವೆ ಅವರು ಪೊಲೀಸ್​ ಠಾಣೆ ಮೆಟ್ಟಿಲೇರುವಂತಾಗಿದ್ದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ. ಆರ್ಯ ಮೇಲೆ ಅಂಥ ಗಂಭೀರ ಆರೋಪ ಹೊರಿಸಿರುವ ಯುವತಿ ಯಾರು? ಆರ್ಯ ನಿಜಕ್ಕೂ ಆಕೆಯಿಂದ ಹಣ ಪಡೆದು, ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾರಾ ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ.

ಇದನ್ನೂ ಓದಿ:

ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವರತ್ನ ನಟಿ ಸಾಯೆಶಾ; ಆರ್ಯ ಕುಟುಂಬದಲ್ಲಿ ಸಂಭ್ರಮ

ಏಕಕಾಲಕ್ಕೆ ಅನೇಕ ಸ್ತ್ರೀಯರ ಜೊತೆ ಲೈಂಗಿಕ ಕ್ರಿಯೆ, ಪತ್ನಿಗೆ ಥಳಿತ; ಹನಿ ಸಿಂಗ್​ ಕರ್ಮಕಾಂಡದ ಪೂರ್ತಿ ಲಿಸ್ಟ್​ ಇಲ್ಲಿದೆ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ