AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃತಿ ಶೆಟ್ಟಿಯಿಂದ ನಡೆಯಿತು ತಪ್ಪು; ನಿರ್ದೇಶಕನಿಂದ ಬೈಗುಳ, ಅಭಿಮಾನಿಗಳು ಇದನ್ನು ಸಹಿಸ್ತಾರ?

‘ಉಪ್ಪೆನಾ’ ಸಿನಿಮಾದಲ್ಲಿ ಕೃತಿ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ವಯಸ್ಸು ಚಿಕ್ಕದಿದ್ದರೂ ನಟನೆಯಲ್ಲಿ ಅವರಿಗೆ ಒಂದು ಪ್ರಬುದ್ಧತೆ ಬಂದಿದೆ. ಈ ಕಾರಣಕ್ಕೆ ಅವರಿಗೆ ಆಫರ್​ಗಳು ಹೆಚ್ಚುತ್ತಲೇ ಇವೆ.

ಕೃತಿ ಶೆಟ್ಟಿಯಿಂದ ನಡೆಯಿತು ತಪ್ಪು; ನಿರ್ದೇಶಕನಿಂದ ಬೈಗುಳ, ಅಭಿಮಾನಿಗಳು ಇದನ್ನು ಸಹಿಸ್ತಾರ?
ಕೃತಿ ಶೆಟ್ಟಿ
TV9 Web
| Edited By: |

Updated on: Aug 12, 2021 | 2:10 PM

Share

ಕೃತಿ ಶೆಟ್ಟಿ ತುಂಬಾ ಸಣ್ಣ ವಯಸ್ಸಿಗೆ ದೊಡ್ಡಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡರು. ತೆಲುಗಿನ ‘ಉಪ್ಪೆನಾ’ ಸಿನಿಮಾ ಅವರಿಗೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತ್ತು. 18 ವರ್ಷ ತುಂಬುವುದರೊಳಗೆ ಚಿತ್ರರಂಗಕ್ಕೆ ಕಾಲಿಟ್ಟ ಅವರಿಗೆ ಅಪಾರ ಅಭಿಮಾನಿ ಬಳಗ ಹುಟ್ಟಿಕೊಂಡಿತು. ಆದರೆ, ಈಗ ಅವರ ಅಭಿಮಾನಿಗಳಿಗೆ ಬೇಸರವಾಗುವಂತಹ ಘಟನೆ ನಡೆದಿದೆ. ಇದನ್ನು ಅವರ ಫ್ಯಾನ್ಸ್​ ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

‘ಉಪ್ಪೆನಾ’ ಸಿನಿಮಾದಲ್ಲಿ ಕೃತಿ ನಟನೆ ಎಲ್ಲರಿಗೂ ಇಷ್ಟವಾಗಿತ್ತು. ವಯಸ್ಸು ಚಿಕ್ಕದಿದ್ದರೂ ನಟನೆಯಲ್ಲಿ ಅವರಿಗೆ ಒಂದು ಪ್ರಬುದ್ಧತೆ ಬಂದಿದೆ. ಈ ಕಾರಣಕ್ಕೆ ಅವರಿಗೆ ಆಫರ್​ಗಳು ಹೆಚ್ಚುತ್ತಲೇ ಇವೆ. ಸದ್ಯ, ಅವರ ಕೈಯಲ್ಲಿ ಮೂರು ಸಿನಿಮಾಗಳಿದ್ದು, ಮೂರು ಚಿತ್ರದ ಶೂಟಿಂಗ್​ ಭರದಿಂದ ಸಾಗುತ್ತಿದೆ. ರಾಮ್​ ಪೋತಿನೇನಿ ಅವರ 19ನೇ ಸಿನಿಮಾಗೆ ಕೃತಿ ನಾಯಕಿ. ಈ ಚಿತ್ರದ ಶೂಟಿಂಗ್​ ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿದೆ. ಈ ವೇಳೆ ಕೃತಿ ಕಡೆಯಿಂದ ತಪ್ಪೊಂದು ನಡೆದಿದೆ.

ಎನ್​. ಲಿಂಗಸ್ವಾಮಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್​ ವೇಳೆ ನಡೆದ ಘಟನೆ ಕುರಿತು ಸುದ್ದಿ ಒಂದು ಹಬ್ಬಿದೆ. ಈ ಚಿತ್ರದ ಶೂಟಿಂಗ್​ ವೇಳೆ ಕೃತಿ ದೃಶ್ಯದಲ್ಲಿ ನಿರ್ದಿಷ್ಟ ಭಾವನೆಯನ್ನು ಹೊರತೆಗೆಯಲು ಹೆಣಗಾಡಿದ್ದರು. ಒಂದು ದೃಶ್ಯದ ಶೂಟ್​ ಒಂದು ಗಂಟೆ ಕಾಲ ನಡೆದಿತ್ತು. ಹಲವು ರೀಟೇಕ್​ಗಳು ಕೂಡ ತೆಗೆದುಕೊಳ್ಳಲಾಯಿತು. ಕೃತಿ ಎದುರು ಹಿರಿಯ ನಟ ನಾಸರ್​ ಇದ್ದರು. ಶಾಟ್​ ಸರಿಯಾಗಿ ಬರದ ಕಾರಣ ನಾಸರ್​ ಅಸಮಾಧಾನ ಹೊರ ಹಾಕಿದ್ದರು. ಈ ಕಾರಣಕ್ಕೆ ಲಿಂಗಸ್ವಾಮಿ ಅವರು ಕೃತಿಗೆ ನೇರವಾಗಿ ಬೈದಿದ್ದಾರೆ ಎನ್ನಲಾಗಿದೆ.

ಈ ವಿಚಾರ ಸದ್ಯ, ಅವರ ಅಭಿಮಾನಿಗಳ ಕಿವಿಗೂ ಬಿದ್ದಿದೆ. ಕೃತಿ ಒಂದು ಟೇಕ್​ಗೆ ಇಷ್ಟೊಂದು ಹೆಣಗಾಡಿದ್ದಾರೆ ಎನ್ನುವ ವಿಚಾರ ಫ್ಯಾನ್ಸ್​ಗೆ ಬೇಸರ ತರಿಸಿದೆ. ಇದರ ಜತೆಗೆ ನಿರ್ದೇಶಕರಿಂದ ಅವರು ಬೈಸಿಕೊಂಡಿದ್ದಾರೆ ಎಂಬುದು ಕೂಡ ಫ್ಯಾನ್ಸ್​ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Krithi Shetty: ಇಷ್ಟಪಡುವ ಹುಡುಗ ಹೇಗಿರಬೇಕು? ಗುಣಗಳ ಪಟ್ಟಿ ಬಿಡುಗಡೆ ಮಾಡಿದ ನಟಿ ಕೃತಿ ಶೆಟ್ಟಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್